ಶಿವಮೊಗ್ಗ: ಜಮೀನಿನ ಕೆಲಸಕ್ಕೆ ಬಂದಾಗ ತಂದಿದ್ದ ಬೈಕ್ ಕಳ್ಳತನವಾಗಿದೆ (bike stolen). ಶಿವಮೊಗ್ಗ ತಾಲೂಕು ದೇವಾಬಾಳು ಗ್ರಾಮದಲ್ಲಿ ಘಟನೆ ನಡೆದಿದೆ.
ಸುದ್ದಿಯ ಮುಂದಿನ ಭಾಗ ಕೆಳಗಿದೆ
ಹಾರನಹಳ್ಳಿಯ ರೈತ ಪಿ. ಮುರುಗೇಂದ್ರಪ್ಪ ಎಂಬುವವರು ಬೈಕ್ನಲ್ಲಿ ತಮ್ಮ ಜಮೀನ ಬಳಿ ಬಂದಿದ್ದರು. ಬೈಕ್ ಅನ್ನು ಜಮೀನಿನ ಪಕ್ಕದ ರಸ್ತೆಯಲ್ಲಿ ನಿಲ್ಲಿಸಿದ್ದರು. ಮಧ್ಯಾಹ್ನದವರೆಗೆ ಜಮೀನಿನಲ್ಲಿ ಟ್ರಾಕ್ಟರ್ ಕೆಲಸ ಮುಗಿಸಿ ವಾಪಸ್ ಬಂದಾಗ ಬೈಕ್ ಇರಲಿಲ್ಲ ಎಂದು ಆರೋಪಿಸಲಾಗಿದೆ. ಎಲ್ಲೆಡೆ ಹುಡುಕಿದರು ಬೈಕ್ ಸಿಗದ ಹಿನ್ನೆಲೆ ದೂರು ನೀಡಿದ್ದಾರೆ. ಕುಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ಹಾವು ಕಚ್ಚಿ ಗರ್ಭಿಣಿ ಸಾವು, ದುರ್ಘಟನೆ ಆಗಿದ್ದೆಲ್ಲಿ?
