ಶಿವಮೊಗ್ಗ: ದೇವಸ್ಥಾನದ (Temple) ಬಾಗಿಲಿನ ಬೀಗ ಮುರಿದು ಹುಂಡಿ ಒಡೆದು ಕಾಣಿಕೆ ಹಣ ಕಳ್ಳತನ ಮಾಡಲಾಗಿದೆ. ಇಂದು ಬೆಳಗ್ಗೆ ಪೂಜೆಗೆ ತೆರಳಿದ್ದಾಗ ಪ್ರಕರಣ ಬೆಳಕಿಗೆ ಬಂದಿದೆ.
ಶಿವಮೊಗ್ಗ ತಾಲೂಕು ಕುಂಸಿ ಸಮೀಪದ ರೇಚಿಕೊಪ್ಪ ಗ್ರಾಮದ ರಾಮ ಮಂದಿರದಲ್ಲಿ ಕಳ್ಳತನವಾಗಿದೆ. ದೇಗುಲವು ಊರಿನಿಂದ ಸ್ವಲ್ಪ ಹೊರಭಾಗದಲ್ಲಿದೆ. ಕಳೆದ ರಾತ್ರಿ ದೇವಸ್ಥಾನದ ಬಾಗಿಲಿನ ಬೀಗ ಮುರಿದು, ಹುಂಡಿ ಒಡೆದು ಹಣ ಕಳ್ಳತನ ಮಾಡಲಾಗಿದೆ.

ಸುಮಾರು 10 ಸಾವಿರ ರೂ.ನಷ್ಟು ಹಣ ಕಳುವಾಗಿದೆ ಎಂದು ಆರೋಪಿಸಲಾಗಿದೆ. ಕುಂಸಿ ಪೊಲೀಸ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ. (ಫೋಟೊ, ಮಾಹಿತಿ: ಈಶ್ವರ್ ರೇಚಿಕೊಪ್ಪ)


ಇದನ್ನೂ ಓದಿ » ಲಾರಿ ಹರಿದು ಮೂರು ವರ್ಷ ಮಗು ಸಾವು, ಹೇಗಾಯ್ತು ಘಟನೆ?



