ಅಂಗನವಾಡಿಯಲ್ಲಿ ಎರಡು ಟ್ರೇ ಮೊಟ್ಟೆ ಬೆಯಿಸಿಕೊಂಡು ಪಾನಗೋಷ್ಠಿ ಮಾಡಿದ ಕುಡುಕರು

ಆಯನೂರು: ಅಂಗನವಾಡಿ (Anganavadi) ಹಾಗೂ ಮಹಿಳಾ ಒಕ್ಕೂಟದ ಕೊಠಡಿಗಳ ಹೆಂಚನ್ನು ತೆಗೆದು ಒಳನುಗ್ಗಿರುವ ಕುಡುಕರು ಪಾನಗೋಷ್ಠಿ ಮಾಡಿದ್ದಾರೆ. ಆಹಾರ ಸಾಮಗ್ರಿ ಹಾಳು ಮಾಡಿದ್ದಾರೆ.

ಕುಂಸಿಯ ಅಂಗನವಾಡಿ ಕೊಠಡಿಯ ಒಳಗೆ ಇಳಿದಿರುವ ದುಷ್ಕರ್ಮಿಗಳು ಸರ್ಕಾರದಿಂದ ಅಂಗನವಾಡಿಗೆ ಕೊಟ್ಟಿದ್ದ ಆಹಾರ ಧಾನ್ಯಗಳನ್ನು ಹಾಳು ಮಾಡಿದ್ದಾರೆ. ಅಲ್ಲದೇ, ಟೇಬಲ್ ಸುತ್ತಲೂ ಚೇರ್ ಹಾಕಿಕೊಂಡು ಕುಳಿತು ಮದ್ಯಪಾನ ಮಾಡಿದ್ದಾರೆ. ಚೇರಿನ ಮೇಲೆ ಟವೆಲ್, ಮದ್ಯದ ಕವರ್ ಸಿಕ್ಕಿದೆ.

ಎರಡು ಟ್ರೇ ಮೊಟ್ಟೆ ಬೇಯಿಸಿ ತಿಂದಿರುವ ದುಷ್ಕರ್ಮಿಗಳು, ಆಹಾರ ಪದಾರ್ಥಗಳನ್ನು ತಿಂದು ಹಾಳು ಮಾಡಿದ್ದಾರೆ. ಅಡುಗೆ ಎಣ್ಣೆಯ ಕವರ್ ಕಿತ್ತು ಚೆಲ್ಲಿದ್ದಾರೆ. ಈ ಬಗ್ಗೆ ಅಂಗನವಾಡಿ ಹಾಗೂ ಮಹಿಳಾ ಒಕ್ಕೂಟದ ಪದಾಧಿಕಾರಿಗಳು ಕುಂಸಿ ಠಾಣೆಗೆ ದೂರು ನೀಡಿದ್ದರು. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಇದನ್ನೂ ಓದಿ » ಇಂದಿನ ಭವಿಷ್ಯ, ಪಂಚಾಂಗ – ಹೇಗಿದೆ ಈ ದಿನ?

Anganavadi

ಚಿತ್ರದ ವಿವರಣೆ
Shaki Toyota, Shivamogga
ನಿತಿನ್ ಆರ್‌.ಕೈದೊಟ್ಲು
ನಿತಿನ್ ಆರ್‌.ಕೈದೊಟ್ಲು

Published : November 5, 2025 at 7:30 AM IST

JNN College of Engineering Admissions started

© ಶಿವಮೊಗ್ಗ ಲೈವ್‌ : ನವೆಂಬರ್ 5, 2025

Leave a Comment