ಶಿವಮೊಗ್ಗ ಲೈವ್.ಕಾಂ | SHIMOGA | 25 ಜನವರಿ 2020
ಶ್ರೀ ಕ್ಷೇತ್ರ ಕೂಡಲಿಯಲ್ಲಿ ಮರಳು ಗಣಿಗಾರಿಕೆ ನಿಲ್ಲಿಸುವಂತೆ ಆಗ್ರಹಿಸಿ ಕೂಡಲಿ ಗ್ರಾಮಸ್ಥರು ಸಚಿವ ಕೆ.ಎಸ್.ಈಶ್ವರಪ್ಪ ಅವರಿಗೆ ಮನವಿ ಸಲ್ಲಿಸಿದರು. ಕೂಡಲಿ ಪುರಾಣ ಪ್ರಸಿದ್ಧ ಮತ್ತು ಐತಿಹಾಸಿಕ ಗ್ರಾಮವಾಗಿದ್ದು ಇತ್ತೀಚೆಗೆ ಮರಳುಗಾರಿಕೆಯಿಂದ ಈ ಗ್ರಾಮ ಅಳಿವಿನ ಅಂಚಿಗೆ ಸಾಗುತ್ತಿದೆ ಎಂದು ಆರೋಪಿಸಿದರು.

ಮರಳು ಗಣಿಗಾರಿಕೆಯಿಂದ ಇಡೀ ಗ್ರಾಮವೇ ನಶಿಸಿ ಹೋಗುವಂತಹ ಸ್ಥಿತಿಗೆ ತಲುಪಿದೆ. ಕೂಡಲಿ ಶ್ರೀ ಕ್ಷೇತ್ರ ಶಂಕರಾಚಾರ್ಯರ ಸ್ಥಾಪಿತ ಮೂಲ ಶಾರದಾಂಬೆಯ ಮಹಾಸಂಸ್ಥಾನ, ಆರ್ಯ ಆರೋಭ್ಯ ತೀರ್ಥ ಮಹಾಸಂಸ್ಥಾನಗಳು ಇಲ್ಲಿದ್ದು, ಗ್ರಾಮದಲ್ಲಿ ಮುಜರಾಯಿ ಇಲಾಖೆಗೆ ಸೇರಿದ ಹತ್ತಾರು ದೇವಸ್ಥಾನಗಳಿವೆ. ಅಂದಾಜು 2,500 ಜನರು ಇಲ್ಲಿ ವಾಸಿಸುತ್ತಿದ್ದಾರೆ. ಪವಿತ್ರ ತುಂಗಾ ಮತ್ತು ಭದ್ರಾ ನದಿಗಳ ಸಂಗಮ ಇದಾಗಿದೆ. ಇಂತಹ ಪವಿತ್ರ ಕ್ಷೇತ್ರದಲ್ಲಿ ಅಕ್ರಮವಾಗಲಿ ಸಕ್ರಮವಾಗಲಿ ಮರಳು ಗಣಿಗಾರಿಕೆ ಮಾಡಬಾರದು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಮರಳು ಗಣಿಗಾರಿಕೆಯಿಂದ ಶಾಲಾ ಮಕ್ಕಳ ಮೇಲೆ ಪರಿಣಾಮ ಬೀರುತ್ತಿದೆ. ಜನತೆಯ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ದನ ಕರುಗಳು ನೀರು ಕುಡಿಯಲು ಹೋಗಿ ಮಣ್ಣು ಕುಸಿದು ಪ್ರಾಣ ಕಳೆದುಕೊಂಡಿವೆ ಎಂದು ದೂರಿದರು. ಮರಳು ಗಣಿಗಾರಿಕೆ ನಿಲ್ಲಿಸಬೇಕು ಮತ್ತು ಕೂಡಲಿ ಗ್ರಾಮವನ್ನು ಉಳಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಗ್ರಾಮಸ್ಥರಾದ ನಿಂಗಪ್ಪ, ಶೇಖರಪ್ಪ, ಕೃಷ್ಣಪ್ಪ, ರಂಗನಾಥ, ಶ್ರೀನಿವಾಸ, ಹರೀಶ್ ಇದ್ದರು.
- Rain Disrupts BJP’s ‘Janakrosha Yatre’ in Shivamogga
- Heavy Rain with Strong Winds and Thunder Causes Damage Across the City
- ಅಂಗಡಿಗಳಿಗೆ ನುಗ್ಗಿದ ನೀರು, ವಾಹನಗಳು ಜಲಾವೃತ, ಕಾರಗಳ ಮೇಲೆ ಬಿದ್ದ ರೆಂಬೆ, ಮಳೆಯಿಂದ ಏನೆಲ್ಲ ಹಾನಿಯಾಗಿದೆ?
- ಬಿಜೆಪಿ ಯಾತ್ರೆಗೆ ಮುತ್ತಿಗೆ ಯತ್ನ, 50ಕ್ಕೂ ಹೆಚ್ಚು ಯುವ ಕಾಂಗ್ರೆಸ್ ಕಾರ್ಯಕರ್ತರು ಪೊಲೀಸ್ ವಶಕ್ಕೆ
- ಗೋಪಿ ಸರ್ಕಲ್ನಲ್ಲಿ ಮಳೆಯಲ್ಲೇ ವಿಜಯೇಂದ್ರ ಭಾಷಣ, ಭಾರಿ ಗಾಳಿಗೆ ನಡುಗಿದ ವೇದಿಕೆ
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | shivamoggalive@gmail.com
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200