SHIVAMOGGA LIVE | 6 JULY 2023
HOLEHONNURU : ಜಾತ್ರೆಗೆ ಶಾಮಿಯಾನ (Shamiana) ಹಾಕಲು ಹಣ ಪಡೆದು ಬರುವುದಾಗಿ ತಿಳಿಸಿ ಹೋಗಿದ್ದ ವ್ಯಕ್ತಿಯೊಬ್ಬರು ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಅಪಘಾತದ ನಂತರ ಮೃತ ವ್ಯಕ್ತಿಯ ಬಳಿ ಮೊಬೈಲ್ ಮಾತ್ರ ಇದ್ದು ಹಣ ಸಿಕ್ಕಿಲ್ಲ ಎಂದು ಕುಟುಂಬದವರು ಆಪಾದಿಸಿದ್ದಾರೆ.
ಏನಿದು ಪ್ರಕರಣ?
ಹಾರೊಬೆನವಳ್ಳಿ ನಿವಾಸಿ ಮಂಜನಾಯ್ಕ (40) ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ತಮ್ಮ ಬೈಕಿನಲ್ಲಿ ಬಿ.ಬೀರನಹಳ್ಳಿಯಿಂದ ಹಾರೊಬೆನವಳ್ಳಿಗೆ ಬರುತ್ತಿದ್ದಾಗ ಅಪಘಾತವಾಗಿದೆ. ಅಪರಿಚಿತ ವಾಹನ ಡಿಕ್ಕಿಯಾಗಿ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ.
ಇದನ್ನೂ ಓದಿ – ಗ್ಯಾಸ್ ಏಜೆನ್ಸಿ ಶುರು ಮಾಡುವುದು ಹೇಗೆ? ಗೂಗಲ್ನಲ್ಲಿ ಹುಡುಕಿದ ನಿವೃತ್ತ ಉದ್ಯೋಗಿಗೆ ಕೊನೆಗೆ ಕಾದಿತ್ತು ಶಾಕ್
ಹಣ ಎಲ್ಲಿ ಹೋಯ್ತು?
ಮಂಜನಾಯ್ಕ ಶಾಮಿಯಾನ (Shamiana) ಇಟ್ಟುಕೊಂಡು ಗೂಡ್ಸ್ ಆಟೋ ಬಾಡಿಗೆಗೆ ಓಡಿಸಿಕೊಂಡಿದ್ದರು. ಬಿ.ಬೀರನಹಳ್ಳಿಯಲ್ಲಿ ಜಾತ್ರೆಯೊಂದಕ್ಕೆ ಶಾಮಿಯಾನ ಹಾಕಲು ಹಣ ಪಡೆದು ಬರುವುದಾಗಿ ತೆರಳಿದ್ದರು. ಮರಳಿ ಬರುವಾಗ ಘಟನೆ ಸಂಭವಿಸಿದೆ. ಮೃತ ವ್ಯಕ್ತಿಯ ಬಳಿ ಮೊಬೈಲ್ ಫೋನ್ ಮಾತ್ರ ಪತೆಯಾಗಿದ್ದು, ಹಾಣ ಕಾಣಿಸುತ್ತಿಲ್ಲ ಎಂದು ಕುಟುಂಬದವರು ಆರೋಪಿಸಿದ್ದಾರೆ. ಘಟನೆ ಸಂಬಂಧ ಪ್ರಕರಣ ದಾಖಲಾಗಿದೆ.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200