ಆಯನೂರಿನಲ್ಲಿ ರಾತ್ರೋರಾತ್ರಿ ಟಗರುಗಳ ಕಳ್ಳತನ, ಹೇಗಾಯ್ತು ಘಟನೆ?

ಶಿವಮೊಗ್ಗ: ಆಯನೂರು ಗ್ರಾಮದಲ್ಲಿ ಮನೆಯ ಹಿಂಭಾಗದ ಶೆಡ್‌ನ ಬಾಗಿಲಿನ ಶೀಟ್ ಕತ್ತರಿಸಿ ಎರಡು ಟಗರುಗಳನ್ನು ಕಳ್ಳತನ ಮಾಡಿರುವ ಘಟನೆ ನಡೆದಿದೆ.

ಆಯನೂರಿನ ಬಿ.ಹೆಚ್. ರಸ್ತೆಯ ನಯಾರಾ ಪೆಟ್ರೋಲ್ ಬಂಕ್ ಬಳಿಯ ನಿವಾಸಿ ಭೀಮಾನಾಯ್ಕ ತಮ್ಮ ಮನೆಯ ಹಿಂಭಾಗದ ಶೆಡ್‌ನಲ್ಲಿ ಟಗರುಗಳನ್ನು ಸಾಕಿದ್ದರು. ಮೇ 10ರ ರಾತ್ರಿ ಎಂದಿನಂತೆ ಟಗರುಗಳನ್ನು ಶೆಡ್‌ನಲ್ಲಿ ಕಟ್ಟಿ ಹಾಕಿ ಕುಟುಂಬದವರು ಮಲಗಿದ್ದರು. ಮರುದಿನ ಬೆಳಗಿನ ಜಾವ ಎದ್ದು ನೋಡಿದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

Ayanur Graphics

ಕಳ್ಳರು ಶೆಡ್‌ನ ಬಾಗಿಲಿನ ಶೀಟ್ ಕತ್ತರಿಸಿ ಒಳಗಿದ್ದ ಎರಡು ಟಗರುಗಳನ್ನು ಕಳವು ಮಾಡಿದ್ದಾರೆ. ಕಳುವಾದ ಟಗರುಗಳ ಅಂದಾಜು ಮೌಲ್ಯ ₹60,000 ಎಂದು ಅಂದಾಜಿಸಲಾಗಿದೆ. ಈ ಕುರಿತು ಮಾಲೀಕರು ತಡವಾಗಿ ಕುಂಸಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Kalleshwara-Enterprises.webp