ತೀರ್ಥಹಳ್ಳಿ: ಮನೆಯಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನ, ಬೆಳ್ಳಿ ಹಾಗೂ ನಗದು ಹಣ ಕಳ್ಳತನವಾಗಿದೆ. ಮನೆಯ ಬೀರುವಿನ ಬಾಗಿಲು ಒಡೆಯದೆಯೇ ಕೃತ್ಯ ಎಸಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಸುದ್ದಿಯ ಮುಂದಿನ 1 ಪ್ಯಾರಾಗಳು ಕೆಳಗಿವೆ.

ತೀರ್ಥಹಳ್ಳಿ ತಾಲ್ಲೂಕಿನ ಮೇಲಿನ ಹಣಗೆರೆ ನಿವಾಸಿ ಶಿಕ್ಷಕ ಗಣಪತಿ.ಕೆ.ಪಿ ಅವರ ಮನೆಯಲ್ಲಿ ಘಟನೆ ನಡೆದಿದೆ. ಬೀರುವಿನಲ್ಲಿದ್ದ ಸುಮಾರು 112 ಗ್ರಾಂಗೂ ಅಧಿಕ ತೂಕದ ಚಿನ್ನದ ಸರಗಳು, ಜುಮುಕಿ, ಓಲೆ, ಬ್ರಾಸ್ಲೆಟ್, ಉಂಗುರಗಳು ಸೇರಿದಂತೆ ಅಂದಾಜು ₹14,59,900 ಮೌಲ್ಯದ ಚಿನ್ನಾಭರಣ ನಾಪತ್ತೆಯಾಗಿವೆ. ₹17,500 ಮೌಲ್ಯದ ಬೆಳ್ಳಿಯ ಆಭರಣ, ₹5,500 ನಗದು ಹಾಗೂ ಮೂರು ಮೊಬೈಲ್ ಫೋನ್ಗಳು ಸೇರಿ ಒಟ್ಟು ₹15,20,900 ಮೌಲ್ಯದ ವಸ್ತುಗಳು ಕಳ್ಳತನವಾಗಿವೆ ಎಂದು ಆರೋಪ ಮಾಡಲಾಗಿದೆ.
ಗಣಪತಿ ಅವರ ಮನೆಯ ಹಾಲ್ನಲ್ಲಿ ಈ ಬೀರು ಇದೆ. ಗಣಪತಿ ಅವರ ಪತ್ನಿ ಬೀರುವಿನ ಬೀಗವನ್ನು ಫ್ರೆಡ್ಜ್ ಮೇಲೆ ಇಟ್ಟಿದ್ದರು. ಕಳ್ಳತನ ಮಾಡಿದವರು ಮನೆಯ ಬೀರುವಿನ ಬೀಗ ಒಡೆದಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಘಟನೆ ಸಂಬಂಧ ಮಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.