ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS | 2 FEBRUARY 2023
THIRTHAHALLI | ಸ್ಮಶಾನದಲ್ಲಿ ಶವ ಸಂಸ್ಕಾರ ಮಾಡಿದ ಬೂದಿಯನ್ನು (ash) ಕಳ್ಳತನ ಮಾಡಲಾಗಿದೆ. ವಿಚಿತ್ರ ಘಟನೆ ತೀರ್ಥಹಳ್ಳಿ ತಾಲೂಕು ಹೊರಬೈಲು ಗ್ರಾಮದಲ್ಲಿ ಸಂಭವಿಸಿದೆ.
ಮೇಲಿನ ಕುರುವಳ್ಳಿ (Melina Kuruvalli) ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊರಬೈಲು (Horabailu) ಗ್ರಾಮದ ಗಂಗಾಧರೇಶ್ವರ ಸ್ಮಶಾನದಲ್ಲಿ ಘಟನೆ ಸಂಭವಿಸಿದೆ. ಬುಧವಾರ ಬೂದಿ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ.
ಗೊತ್ತಾಗಿದ್ದು ಹೇಗೆ?
ಗ್ರಾಮದ ಮಹಿಳೆಯೊಬ್ಬರು ನಿಧನರಾಗಿದ್ದರು. ತುಂಗಾ ನದಿ ದಡದ ಮೇಲಿರುವ ಸ್ಮಶಾನದಲ್ಲಿ ಅವರ ಅಂತ ಅಂತ್ಯ ಸಂಸ್ಕಾರ ನೆರವೇರಿಸಲಾಗಿತ್ತು. ಮೂರು ದಿನದ ಬಳಿಕ ಮುಂದಿನ ಕಾರ್ಯಕ್ಕಾಗಿ ಬೂದಿ (ash) ಸಂಗ್ರಹಿಸಲು ಕುಟುಂಬದವರು ಸ್ಮಶಾನಕ್ಕೆ ಬಂದಿದ್ದರು. ಆಗ ಬೂದಿ ಇಲ್ಲದಿರುವುದನ್ನು ಕಂಡು ಚಕಿತಗೊಂಡಿದ್ದಾರೆ.

ಎಲುಬು ಮೂಳೆ ಬಿಟ್ಟಿದ್ದಾರೆ
ಸ್ಮಶಾನದಲ್ಲಿ ಒಂದೇ ಒಂದು ಚೂರು ಬೂದಿಯನ್ನು ಬಿಡದೆ ಕಳ್ಳತನ ಮಾಡಲಾಗಿದೆ. ಮೂರು ಎಲುಬು ಮೂಳೆಯನ್ನು ಕಳ್ಳರು ಪಕ್ಕದಲ್ಲಿಟ್ಟು ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ. ಇವುಗಳನ್ನು ಕೊಂಡೊಯ್ದು ಕುಟುಂಬದವರು ಮುಂದಿನ ಕಾರ್ಯ ನೆರವೇರಿಸಿದ್ದಾರೆ.
ಇದನ್ನೂ ಓದಿ – ಶಿವಮೊಗ್ಗ ವಿಮಾನ ನಿಲ್ದಾಣದ ಹೆಸರಿನ ವಿಚಾರ, ಮತ್ತೆ ಶುರುವಾಯ್ತು ಪ್ರತಿಭಟನೆಗಳು, ಆಗ್ರಹ
ಅಂತ್ಯ ಸಂಸ್ಕಾರದ ವೇಳೆ ಚಿನ್ನ, ಬೆಳ್ಳಿಯನ್ನು ಹಾಕಿರಬಹುದು ಎಂಬ ಶಂಕೆ ಮೇರೆಗೆ ಬೂದಿಯನ್ನು ಕದ್ದೊಯ್ದಿರುವ ಸಾಧ್ಯತೆ ಇದೆ ಅನ್ನುತ್ತಾರೆ ಗ್ರಾಮಸ್ಥರು.
ಇದನ್ನೂ ಓದಿ – ವಿದ್ಯಾನಗರ ಬಳಿ ರೈಲ್ವೆ ಮೇಲ್ಸೇತುವೆ ಕಾಮಗಾರಿ ಬಹುತೇಕ ಕಂಪ್ಲೀಟ್, ಡ್ರೋಣ್ ಫೋಟೊಗಳು ವೈರಲ್

LATEST NEWS
- ಉಷಾ ನರ್ಸಿಂಗ್ ಹೋಂ ಬಳಿ ಅಂಬ್ಯುಲೆನ್ಸ್ ಡಿಕ್ಕಿ, ಕಾರು ಪಲ್ಟಿ, ಹೇಗಾಯ್ತು ಘಟನೆ?

- ಗಾಜನೂರಿನಲ್ಲಿ ಭೀಕರ ಅಪಘಾತ, ಆಟೋ ನಜ್ಜುಗುಜ್ಜು, ಶಿವಮೊಗ್ಗದ ಯುವಕ ಸಾವು, ಆಗಿದ್ದೇನು?

- ಶಿವಮೊಗ್ಗದಲ್ಲಿ ಅತಿ ಕೆಳಗೆ ಹಾರಿದ ವಿಮಾನ, ಎರಡು ಟ್ರಿಪ್ ಹಾರಾಟ, ಕಾರಣವೇನು?

- ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಚಾಕು ತೋರಿಸಿ ಬೆದರಿಕೆ ಹಾಕಿ ದರೋಡೆ, ಎಲ್ಲಿ? ಆಗಿದ್ದೇನು?

- ಎಸ್ಸೆಸ್ಸೆಲ್ಸಿ ಪರೀಕ್ಷೆ, 192 ವಿದ್ಯಾರ್ಥಿಗಳು ಗೈರು, ಹೇಗಿತ್ತು ಮೊದಲ ದಿನದ ಪರೀಕ್ಷೆ?

About The Editor
ನಿತಿನ್ ಆರ್.ಕೈದೊಟ್ಲು

CLICK HERE TO JOIN SHIVAMOGGA LIVE WHATSAPP GROUP













