ಮನೆಗೆ ನುಗ್ಗಿದ ಆಗಂತುಕನಿಗೆ ತುರೇಮಣೆಯಿಂದ ಏಟು, ಮಗು ರಕ್ಷಿಸಿದ ದಿಟ್ಟ ತಾಯಿ, ಮತ್ತೆ ಶುರುವಾಯ್ತು ಮಕ್ಕಳ ಕಳ್ಳರ ಆತಂಕ

ಶಿವಮೊಗ್ಗ ಲೈವ್.ಕಾಂ | THIRTHAHALLI | 9 ಜನವರಿ 2020

Shivamogga-Live-Number-1-Website
2019 readers copy new

ಅಪಹರಣಕಾರನಿಗೆ ತುರೇಮಣೆಯಲ್ಲಿ ಹೊಡೆದು ತಾಯಿಯೊಬ್ಬಳು ಮಗುವನ್ನು ರಕ್ಷಿಸಿದ್ದಾಳೆ. ತಾಯಿಯ ದಿಟ್ಟ ನಡೆ ಸರ್ವರ ಮೆಚ್ಚುಗೆ ಗಳಿಸಿದೆ. ಈ ನಡುವೆ ಅಪಹರಣಕಾರನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ತೀರ್ಥಹಳ್ಳಿಯ ಮೇಲಿನಕುರುವಳ್ಳಿಯಲ್ಲಿ ಘಟನೆ ನಡೆದಿದೆ. ಶಿವಕುಮಾರ್ ಮತ್ತು ಕೃಷ್ಣವೇಣಿ ಅವರ ನಾಲ್ಕು ವರ್ಷದ ಮಗುವಿನ ಅಪಹರಣಕ್ಕೆ ಪ್ರಯತ್ನಿಸಲಾಗಿತ್ತು.

ದಿಢೀರನೆ ಬಂದ ಅಗಂತುಕ

ಮನೆಯಲ್ಲಿ ಯಾರು ಇಲ್ಲ ಎಂದುಕೊಂಡು ದಿಢೀರನೆ ನುಗ್ಗಿದ ಆಗಂತುಕನೊಬ್ಬ, ಮಗುವನ್ನು ಅಪಹರಿಸಲು ಯತ್ನಿಸಿದ್ದಾನೆ. ಈ ವೇಳೆ ಮಗುವನ್ನು ರಕ್ಷಿಸಲು ತಾಯಿ ಕೃಷ್ಣವೇಣಿ ಮುಂದಾಗಿದ್ದಾರೆ. ಆದರೆ ಅಪಹರಣಕಾರ ಕೃಷ್ಣವೇಣಿ ಅವರ ಕುತ್ತಿಗೆಗೆ ಕೈ ಹಾಕಿ, ದೂಡಲು ಯತ್ನಿಸಿದ್ದಾನೆ. ಹಾಗಾಗಿ, ಜೋರಾಗಿ ಕೂಗಿಕೊಂಡು, ಪಕ್ಕದಲ್ಲಿದ್ದ ತುರೇಮಣೆಯಿಂದ ಅಪಹರಣಕಾರನತ್ತ ಬೀಸಿದ್ದಾರೆ.

https://www.facebook.com/liveshivamogga/videos/589302701924116/?t=0

ಗಾಯ, ಗಾಬರಿಯಲ್ಲಿ ಪರಾರಿ

ತುರೇಮಣೆ ದಾಳಿ ಮತ್ತು ರಕ್ಷಣೆಗಾಗಿ ಕೃಷ್ಣವೇಣಿ ಅವರು ಕೂಗಿಕೊಳ್ಳುತ್ತಿದ್ದಂತೆ, ಗಾಬರಿಗೊಂಡ ಆಗಂತುಕ ಎಸ್ಕೇಪ್ ಆಗಿದ್ದಾನೆ. ಈ ವೇಳೆಗಾಗಲೇ ನೆರೆಹೊರೆಯವರು ರಕ್ಷಣೆಗೆ ಧಾವಿಸಿದ್ದಾರೆ. ಕೃಷ್ಣವೇಣಿ ಮತ್ತು ಅವರ ಮಗು ಸುರಕ್ಷಿತವಾಗಿದ್ದಾರೆ. ಇನ್ನು, ಪೊಲೀಸರಿಗೆ ವಿಚಾರ ತಿಳಿಸಲಾಗಿದ್ದು, ತೀರ್ಥಹಳ್ಳಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ತೀರ್ಥಹಳ್ಳಿ ತಾಲೂಕಿನ ವಿವಿಧೆಡೆ ಮಕ್ಕಳ ಅಪಹರಣ ಯತ್ನದ ಕುರಿತು ಆಗಾಗ ಚರ್ಚೆಯಾಗುತ್ತಿತ್ತು. ಸಾಮಾಜಿಕ ಜಾಲತಾಣದಲ್ಲಿಯೂ ಈ ಕುರಿತು ಆತಂಕಕಾರಿ ಮೆಸೇಜುಗಳು ಹರಿದಾಡಿದ್ದವು. ಈಗ ಅಪಹರಣದ ವಿಫಲ ಯತ್ನ ಬಹಿರಂಗಗೊಳ್ಳುತ್ತಿದ್ದಂತೆ ಜನ ಆತಂಕಕ್ಕೀಡಾಗಿದ್ದಾರೆ.

ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494

ವಾಟ್ಸಪ್ ನಂಬರ್ | 7411700200

ಈ ಮೇಲ್ ಐಡಿ | shivamoggalive@gmail.com

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : ಜನವರಿ 9, 2020

Leave a Comment