ತುಂಗಾ ನದಿಯಲ್ಲಿ ಈಜಲು ಹೋಗಿ ನಾಪತ್ತೆಯಾಗಿದ್ದ 26 ವರ್ಷದ ಯುವಕ ಶವವಾಗಿ ಪತ್ತೆ

ತೀರ್ಥಹಳ್ಳಿ: ತುಂಗಾ ನದಿಯಲ್ಲಿ ಈಜಲು ಹೋಗಿ ನಾಪತ್ತೆಯಾಗಿದ್ದ ಯುವಕ ಶವವಾಗಿ ಪತ್ತೆಯಾಗಿದ್ದಾನೆ. ಮುಳುಗು ತಜ್ಞ ಈಶ್ವರ್‌ ಮಲ್ಪೆ ಮತ್ತು ಸ್ಥಳೀಯ ಮುಳುಗು ತಜ್ಞ ಪ್ರಮೋದ್‌ ಕಾರ್ಯಾಚರಣೆ (search operation) ನಡೆಸಿ ಮೃತದೇಹ ಪತ್ತೆ ಹಚ್ಚಿದ್ದಾರೆ.

ಸೀಬನಕೆರೆ ನಿವಾಸಿ ಅಕ್ಷಯ್‌ (26) ಮೃತ. ಮಂಗಳವಾರ ಪಟ್ಟಣ ಸಮೀಪ ತುಂಗಾ ನದಿಯಲ್ಲಿ ಈಜಲು ಹೋಗಿದ್ದ ಸಂದರ್ಭ ಅಕ್ಷಯ್‌ ನಾಪತ್ತೆಯಾಗಿದ್ದ. ಆತನ ಬಟ್ಟೆ, ಮೊಬೈಲ್ ಹಾಗೂ ಒಂದು ₹1000 ನಗದು ನದಿ ದಂಡೆಯಲ್ಲಿ ದೊರೆತಿತ್ತು.

Thirthahalli-Youth-Body-found-near-rama-mantapa-in-tunga-river

Thirthahalli-Youth-Body-found-near-rama-mantapa-in-tunga-river

ವಿಷಯ ತಿಳಿದ ಪೋಲಿಸರು, ಅಗ್ನಿಶಾಮಕ ದಳ ಮತ್ತು ಮುಳುಗು ತಜ್ಞರು ಸಂಜೆಯವರೆಗೆ ಹುಡುಕಾಟ ನಡೆಸಿದ್ದರು. ಸಂಜೆ 4 ಗಂಟೆಗೆ ಮೂವರು ಸ್ನಾನಕ್ಕೆಂದು ಬಂದಿದ್ದನ್ನು ಸ್ಥಳದಲ್ಲಿದ್ದವರು ಗಮನಿಸಿದ್ದರು ಎನ್ನಲಾಗಿದೆ. ಈಗ ಅಕ್ಷಯ್‌ನ ಮೃತದೇಹ ಪತ್ತೆಯಾಗಿದೆ. ತೀರ್ಥಹಳ್ಳಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.  

ಇದನ್ನೂ ಓದಿ : IPL ಟಿಕೆಟ್‌ ವಿಚಾರ, ಸಭಾಧ್ಯಕ್ಷರಿಗೆ ಪತ್ರ ಬರೆದ ಶಿವಮೊಗ್ಗ MLA, ಏನಿದೆ ಪತ್ರದಲ್ಲಿ?

Kalleshwara-Enterprises.webp
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Kalleshwara-Enterprises.webp

Leave a Comment