ತೀರ್ಥಹಳ್ಳಿ: ಶಿವರಾಜಪುರ ಬಳಿ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ನಿಲ್ಲಿಸಿದ್ದ ಮಾರುತಿ ಓಮ್ನಿಗೆ ಆಗುಂಬೆ ಕಡೆಯಿಂದ ಬಂದ ಕಾರು ಡಿಕ್ಕಿಯಾಗಿ (speeding car) ಓಮ್ನಿ ಚಾಲಕ ಮೃತಪಟ್ಟಿದ್ದಾರೆ. ಶಿವರಾಜಪುರದ ರಮೇಶ್ (51) ಸಾವಿಗೀಡಾದವರು.
ಹೇಗಾಯ್ತು ಘಟನೆ?
ಅಂಗಡಿ ನಡೆಸುತ್ತಿದ್ದ ರಮೇಶ್ ಅವರು ಭಾನುವಾರ ಬೆಳಗ್ಗೆ 7.30ಕ್ಕೆ ವ್ಯಾನ್ನಲ್ಲಿ ವಸ್ತುಗಳನ್ನು ಜೋಡಿಸುವ ವೇಳೆ ವೇಗವಾಗಿ ಬಂದ ಕಾರು ಡಿಕ್ಕಿಯಾಗಿದೆ. ತೀವ್ರ ಗಾಯಗೊಂಡಿದ್ದ ರಮೇಶ್ ಅವರನ್ನು ಜೆಸಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಲಾಯಿತು. ಮಣಿಪಾಲಕ್ಕೆ ಕರೆದೊಯ್ಯುವ ಮಾರ್ಗಮಧ್ಯೆ ಅಸುನೀಗಿದ್ದಾರೆ.

ಅಪಘಾತದ ದೃಶ್ಯ ಸಮೀಪದ ಗ್ಯಾರೇಜಿನ ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ. ತೀರ್ಥಹಳ್ಳಿ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ – ಶಿವಮೊಗ್ಗದಲ್ಲಿ 301 ಕಲಾವಿದರ ಜೊತೆಗೆ ವೀಣೆ ನುಡಿಸಿದ ಮೈಸೂರು ರಾಜವಂಶಸ್ಥ, ಹೇಗಿತ್ತು ಕಾರ್ಯಕ್ರಮ?








