SHIVAMOGGA LIVE NEWS | 28 DECEMBER 2022
ಬೆಂಗಳೂರು : ಕುಪ್ಪಳಿಯ ರಾಷ್ಟ್ರಕವಿ ಕುವೆಂಪು (kuvempu) ಮನೆ, ಕವಿಶೈಲ, ಹೇಮಾಂಗಣ ಮತ್ತು ಸುತ್ತಮುತ್ತಲ ಪ್ರದೇಶದ ದುರಸ್ಥಿ, ಸುಣ್ಣ – ಬಣ್ಣ ಕಾಮಗಾರಿಗೆ ರಾಜ್ಯ ಸರ್ಕಾರ ಒಂದು ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ.
ಇದನ್ನೂ ಓದಿ – ಸಾಮಾಜಿಕ ಜಾಲತಾಣದಲ್ಲಿ ಗೋ ಬ್ಯಾಕ್ ಚಳವಳಿ, ತೀರ್ಥಹಳ್ಳಿಗೆ ಕಾಲಿಟ್ಟರೆ ಪ್ರತಿಭಟನೆ, ಮಸಿ ಬಳಿಯುವ ಎಚ್ಚರಿಕೆ
ರಾಷ್ಟ್ರಕವಿ ಕುವೆಂಪು (kuvempu) ಪ್ರಾಧಿಕಾರದ ಸಮ ಕಾರ್ಯದರ್ಶಿ ಮತ್ತಿತರ ಪದಾಧಿಕಾರಿಗಳು ದುರಸ್ಥಿ ಮತ್ತು ಕಾಮಗಾರಿಗಾಗಿ ಸಹಾಯಧನ ನೀಡುವಂತೆ ಕೋರಿ ಮನವಿ ಸಲ್ಲಿಸಿದ್ದರು. ಅದನ್ನು ಪರಿಗಣಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಾಧಿಕಾರಕ್ಕೆ ಒಂದು ಕೋಟಿ ರೂ. ಬಿಡುಗಡೆ ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಅವರ ಕಾರ್ಯದರ್ಶಿ ಜಯರಾಮ್ ರಾಯಪುರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.