SHIVAMOGGA LIVE NEWS | 22 APRIL 2024
SHIKARIPURA : ಕೆರೆ ಆವರಣದಲ್ಲಿ ಗೋಣಿ ಚೀಲದಲ್ಲಿ 9 ವರ್ಷದ ಬಾಲಕಿಯ ಶವ ಪತ್ತೆಯಾಗಿದೆ. ಬಾಲಕಿಯನ್ನು ಕೊಲೆ ಮಾಡಿ ಕೆರೆಗೆ ಎಸೆಯಲಾಗಿದೆ ಎಂದು ಗ್ರಾಮಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ. ಶಿಕಾರಿಪುರ ತಾಲೂಕಿನ ಕಲ್ಮನೆ ಸಮೀಪದ ಕೊಪ್ಪದಕೆರೆ ಆವರಣದಲ್ಲಿ ಬಾಲಕಿ ಶವ ಪತ್ತೆಯಾಗಿದೆ. ಮೃತಪಟ್ಟ ಬಾಲಕಿ ಕೊಪ್ಪದಕೆರೆ ಸಮೀಪದ ಗ್ರಾಮದ ನಿವಾಸಿ ಎಂದು ತಿಳಿದು ಬಂದಿದೆ. ಬಾಲಕಿ ಪೋಷಕರು ಶಿಕಾರಿಪುರ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ. ತನಿಖೆ ನಡೆಯುತ್ತಿದೆ.
ಇದನ್ನೂ ಓದಿ – ಇಂಟರ್ಸಿಟಿ ರೈಲಿನಲ್ಲಿ ರಾಘವೇಂದ್ರ, ಪ್ರಯಾಣಿಕರಿಗೆ ಸಾಧನೆಗಳ ಪ್ರತಿ ವಿತರಣೆ, ಪ್ರಚಾರ