ಶಿವಮೊಗ್ಗದ ಹೈಟೆಕ್ ಕನ್ಸರ್‌ವೆನ್ಸಿಯಲ್ಲಿ ಎಣ್ಣೆ ಏಟು, ಇದೇನಾ ಸ್ಮಾರ್ಟ್ ಸಿಟಿ? ಇದಕ್ಕೇನಾ ಲಕ್ಷ ಲಕ್ಷ ಖರ್ಚು ಮಾಡಿದ್ದು?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ | SHIMOGA NEWS | 14 ಜೂನ್ 2020

ಸ್ಮಾರ್ಟ್ ಸಿಟಿ ಯೋಜನೆ ಅಡಿ ಕೋಟಿ ಕೋಟಿ ಸುರಿದು ಶಿವಮೊಗ್ಗದ ಕನ್ಸರ್‍ವೆನ್ಸಿಗಳಿಗೆ ಹೊಸ ಲುಕ್ ನೀಡಲಾಗಿದೆ. ಆದರೆ ಕೆಲವು ಕಡೆ ಅಭಿವೃದ್ಧಿಯಾದ ಕನ್ಸರ್‍ವೆನ್ಸಿಗಳು ಕುಡುಕರ ಅಡ್ಡೆಯಾಗಿದೆ. ಪಬ್ಲಿಕ್ ಟಾಯ್ಲೆಟ್‍ಗಳಾಗಿ ಪುನಃ ಪರಿವರ್ತನೆ ಆಗಿವೆ.

ಬೆಳಗ್ಗೆ, ರಾತ್ರಿ ಎಣ್ಣೆ ಹಾಕ್ತಾರೆ

ಶಿವಮೊಗ್ಗದ ಜೈಲ್ ಸರ್ಕಲ್ ಸಮೀಪ, ಅಚ್ಚತರಾವ್ ಲೇಔಟ್ ಮೊದಲ ಅಡ್ಡರಸ್ತೆಗೆ ಹೊಂದಿಕೊಂಡಂತೆ ಇರುವ ಕನ್ಸರ್‍ವೆನ್ಸಿ ಕುಡುಕರ ಪಾಲಿಗೆ ಸೇಫ್ ಲೊಕೇಷನ್ ಆಗಿದೆ. ಬೆಳಗೆ ಅಂದರೆ ಬೆಳಗ್ಗೆ, ರಾತ್ರಿಯಾದರೆ ರಾತ್ರಿ ಇಲ್ಲಿ ಟವಲ್ ಹಾಸಿಕೊಂಡು ಕುಳಿತು ಎಣ್ಣೆ ಹಾಕುತ್ತಾರೆ ಎಂದು ಸ್ಥಳೀಯರು ಶಿವಮೊಗ್ಗ ಲೈವ್.ಕಾಂಗೆ ತಿಳಿಸಿದ್ದಾರೆ.

103483271 1143441909350561 7704991686799169399 n.jpg? nc cat=102& nc sid=110474& nc ohc=nv63HSetIqcAX8ORL2l& nc ht=scontent.fblr11 1

ರಾಶಿ ರಾಶಿ ಮದ್ಯದ ಪೌಚುಗಳು

ಈ ಕನ್ಸರ್‍ವೆನ್ಸಿಯಲ್ಲಿ ರಾಶಿ ರಾಶಿ ಮದ್ಯದ ಪೌಚುಗಳು ಬಿದ್ದಿವೆ. ಮದ್ಯದ ಬಾಟಲಿಗಳು ಕಾಣಸಿಗುತ್ತವೆ. ಮದ್ಯದಂಗಡಿಯಿಂದ ಮದ್ಯ ಖರೀದಿಸಿ ತಂದು ಈ ಕನ್ಸರ್‍ವೆನ್ಸಿಯಲ್ಲಿ ಸೇವಿಸಿ, ಪೌಚ್‍ಗಳನ್ನು ಅಲ್ಲಿಯೇ ಬಿಸಾಡಿ ಹೊಗುತ್ತಿದ್ದಾರೆ. ಬಿಯರ್ ಬಾಟಲಿಗಳು ಕೂಡ ಇಲ್ಲಿ ಬಿದ್ದಿವೆ.

ಪಬ್ಲಿಕ್ ಟಾಯ್ಲೆಟ್ ಆಯ್ತು ಹೈಟೆಕ್ ಕನ್ಸರ್‍ವೆನ್ಸಿ

ಈ ಕನ್ಸರ್‍ವೆನ್ಸಿ ಅಭಿವೃದ್ಧಿಗೂ ಮೊದಲು ಇದು ಪಬ್ಲಿಕ್ ಟಾಯ್ಲೆಟ್ ಆಗಿತ್ತು. ಲಕ್ಷ ಲಕ್ಷ ಸುರಿದು ಕನ್ಸರ್‍ವೆನ್ಸಿ ಅಭಿವೃದ್ಧಿ ಮಾಡುತ್ತಿದ್ದಾಗ ಸ್ಥಳೀಯರು ನಿಟ್ಟುಸಿರು ಬಿಟ್ಟಿದ್ದರು. ದುರ್ವಾಸನೆಯಿಂದ ಮುಕ್ತರಾಗುತ್ತೇವೆ ಎಂದು ನಿರಮ್ಮಳವಾಗಿದ್ದರು. ಕನ್ಸರ್‍ವೆನ್ಸಿ ಹೈಟೆಕ್ ಆಯ್ತು. ಅಷ್ಟೇ ಅಲ್ಲ, ಪುನಃ ಪಬ್ಲಿಕ್ ಟಾಯ್ಲೆಟ್ ಆಗಿ ಪರಿವರ್ತನೆಯಾಯ್ತು.

ಏನೆಲ್ಲ ಅಭಿವೃದ್ಧಿಯಾಯ್ತು? ರಕ್ಷಣೆ ಏಕಿಲ್ಲ?

ಶಿವಮೊಗ್ಗ ಸ್ಮಾರ್ಟ್ ಸಿಟಿ ಯೋಜನೆ ಅಡಿ 24.79 ಕೋಟಿ ರೂ. ವೆಚ್ಚದಲ್ಲಿ 111 ಕನ್ಸರ್‍ವೆನ್ಸಿಗಳನ್ನು ಅಭಿವೃದ್ಧಿ ಮಾಡಲಾಗುತ್ತಿದೆ. ಕೆಲವು ಕನ್ಸರ್‍ವೆನ್ಸಿಗಳಲ್ಲಿ ಮಕ್ಕಳ ಆಟಿಕೆಗಳನ್ನು ಅಳವಡಿಸಲಾಗಿದೆ. ಅಚ್ಚುತರಾವ್ ಲೇಔಟ್‍ನ ಈ ಕನ್ಸರ್‍ವೆನ್ಸಿಗೂ ಲಕ್ಷ ಲಕ್ಷ ಖರ್ಚು ಮಾಡಲಾಗಿದೆ. ಚರಂಡಿ, ಒಳ ಚರಂಡಿ ವ್ಯವಸ್ಥೆ ಮಾಡಿ, ಲಿಂಕ್ ಟೈಲ್ಸ್‍ ಹಾಕಲಾಗಿದೆ. ಲೈಟ್ ವ್ಯವಸ್ಥೆ ಕೂಡ ಮಾಡಲಾಗಿದೆ. ಕನ್ಸರ್‍ವೆನ್ಸಿಯ ಎರಡೂ ಬದಿಯಲ್ಲಿ ಗೇಟ್ ಹಾಕಲಾಗಿದೆ. ಆದರೆ ಆ ಗೇಟ್‍ಗೆ ಬೀಗ ಹಾಕದೆ ಬಿಟ್ಟಿದ್ದಾರೆ. ಹಾಗಾಗಿ ಕನ್ಸರ್‍ವೆನ್ಸಿ ಪುನಃ ಹಳೆ ರೂಪಕ್ಕೆ ಬಂದಿದೆ.

ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494

ವಾಟ್ಸಪ್ ನಂಬರ್ | 7411700200

ಈ ಮೇಲ್ ಐಡಿ | shivamoggalive@gmail.com

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : June 14, 2020

ಇವತ್ತು ಯಾವ್ಯಾವ ಅಡಿಕೆಗೆ ಎಷ್ಟಿದೆ ರೇಟ್? – 17 ಮಾರ್ಚ್‌ 2026 – ಅಡಿಕೆ ಧಾರಣೆ

ಇವತ್ತು ಯಾವ್ಯಾವ ಅಡಿಕೆಗೆ ಎಷ್ಟಿದೆ ರೇಟ್? – 17 ಮಾರ್ಚ್‌ 2026 – ಅಡಿಕೆ ಧಾರಣೆ

ಶಿವಮೊಗ್ಗ ಡಿ.ಸಿ ಎದುರು ಮೈದಾನಕ್ಕೆ ಬ್ಯಾರಿಕೇಡ್‌, ಹಿಂದೂ ಸಂಘಟನೆಗಳು ಗರಂ, ಕಾರಣವೇನು?

ಶಿವಮೊಗ್ಗ ಡಿ.ಸಿ ಎದುರು ಮೈದಾನಕ್ಕೆ ಬ್ಯಾರಿಕೇಡ್‌, ಹಿಂದೂ ಸಂಘಟನೆಗಳು ಗರಂ, ಕಾರಣವೇನು?

ಬೆಳಗ್ಗೆ ಲೇಔಟ್‌ಗೆ ಬಂದ ಲೆಕ್ಚರರ್‌ಗೆ ಕಾದಿತ್ತು ಆಘಾತ, ರಾತ್ರಿ 11.15ರ CCTV ದೃಶ್ಯ ಕಂಡು ಶಾಕ್‌

ಬೆಳಗ್ಗೆ ಲೇಔಟ್‌ಗೆ ಬಂದ ಲೆಕ್ಚರರ್‌ಗೆ ಕಾದಿತ್ತು ಆಘಾತ, ರಾತ್ರಿ 11.15ರ CCTV ದೃಶ್ಯ ಕಂಡು ಶಾಕ್‌

ಶಿವಮೊಗ್ಗ TO ಬೆಂಗಳೂರು ಇನ್ನಷ್ಟು ವೇಗ, ದ್ವಿಪಥ ಯೋಜನೆಗೆ ಒತ್ತಾಯ

ಶಿವಮೊಗ್ಗ TO ಬೆಂಗಳೂರು ಇನ್ನಷ್ಟು ವೇಗ, ದ್ವಿಪಥ ಯೋಜನೆಗೆ ಒತ್ತಾಯ

ಜಮೀನಿಗೆ ನೀರು ಹರಿಸಲು ಹೋಗಿದ್ದ ವ್ಯಕ್ತಿಗೆ ಕಾದಿತ್ತು ಸಾವು, ಆಗಿದ್ದೇನು?

ಜಮೀನಿಗೆ ನೀರು ಹರಿಸಲು ಹೋಗಿದ್ದ ವ್ಯಕ್ತಿಗೆ ಕಾದಿತ್ತು ಸಾವು, ಆಗಿದ್ದೇನು?

ನಾಳೆಯಿಂದ SSLC ಪರೀಕ್ಷೆ, ಹೇಗಿದೆ ಸಿದ್ಧತೆ? ಯಾವ್ಯಾವ ತಾಲೂಕಿನಲ್ಲಿ ಎಷ್ಟು ಪರೀಕ್ಷಾ ಕೇಂದ್ರಗಳಿವೆ?

ನಾಳೆಯಿಂದ SSLC ಪರೀಕ್ಷೆ, ಹೇಗಿದೆ ಸಿದ್ಧತೆ? ಯಾವ್ಯಾವ ತಾಲೂಕಿನಲ್ಲಿ ಎಷ್ಟು ಪರೀಕ್ಷಾ ಕೇಂದ್ರಗಳಿವೆ?

ಮನೆಯ ಮೀಟರ್ ಬೋರ್ಡ್ ಮೇಲೆ ಕೀ ಇಡುವ ಅಭ್ಯಾಸ ಇದ್ಯಾ? ನಿದಿಗೆಯಲ್ಲಿ ದಾಖಲಾಯ್ತು ಕೇಸ್‌, ಯಾಕೆ?

ಮನೆಯ ಮೀಟರ್ ಬೋರ್ಡ್ ಮೇಲೆ ಕೀ ಇಡುವ ಅಭ್ಯಾಸ ಇದ್ಯಾ? ನಿದಿಗೆಯಲ್ಲಿ ದಾಖಲಾಯ್ತು ಕೇಸ್‌, ಯಾಕೆ?

ಶಿವಮೊಗ್ಗದ ‘ಶಿವಚೌಡಿ ಧರಣಿ’ ಇನ್ನಿಲ್ಲ, ವಿಭಿನ್ನವಾಗಿ ತಿಥಿ ಕಾರ್ಯ ಮಾಡಿದ ಮಾಲೀಕ

ಶಿವಮೊಗ್ಗದ ‘ಶಿವಚೌಡಿ ಧರಣಿ’ ಇನ್ನಿಲ್ಲ, ವಿಭಿನ್ನವಾಗಿ ತಿಥಿ ಕಾರ್ಯ ಮಾಡಿದ ಮಾಲೀಕ

ಸಹ್ಯಾದ್ರಿ ಉತ್ಸವ, ಸಮಗ್ರ ಪ್ರಶಸ್ತಿ ಇಂದಿರಾ ಗಾಂಧಿ ಮಹಿಳಾ ಕಾಲೇಜು ಮುಡಿಗೆ

ಸಹ್ಯಾದ್ರಿ ಉತ್ಸವ, ಸಮಗ್ರ ಪ್ರಶಸ್ತಿ ಇಂದಿರಾ ಗಾಂಧಿ ಮಹಿಳಾ ಕಾಲೇಜು ಮುಡಿಗೆ

ಮಾವನ ಕುತ್ತಿಗೆ ಸೀಳಿ ಕೊಲೆಗೆ ಯತ್ನಿಸಿದ ಅಳಿಯ, ಎಲ್ಲಿ? ಕಾರಣವೇನು?

ಮಾವನ ಕುತ್ತಿಗೆ ಸೀಳಿ ಕೊಲೆಗೆ ಯತ್ನಿಸಿದ ಅಳಿಯ, ಎಲ್ಲಿ? ಕಾರಣವೇನು?

Leave a Comment