ಗಾಂಜಾ ಸಾಗಿಸುತ್ತಿದ್ದವರ ಬಳಿ ಹರಿತವಾದ ತಲ್ವಾರ್​​ಗಳು, ಟಿಪ್ಪುನಗರದಲ್ಲಿ ಪೊಲೀಸರ ದಾಳಿ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ | SHIMOGA NEWS | 10 APRIL 2021

ಗಾಂಜಾ ಸಾಗಿಸುತ್ತಿದ್ದವರ ಮೇಲೆ ದಾಳಿ ನಡೆಸಿದ ಪೊಲೀಸರಿಗೆ ತಲ್ವಾರ್‍ಗಳು ಪತ್ತೆಯಾಗಿವೆ. ತಲ್ವಾರ್, ಗಾಂಜಾ ಸಹಿತ ಆರೋಪಿಗಳನ್ನು ಬಂಧಿಸಲಾಗಿದೆ.

171783602 1364297223931694 98552977729762768 n.jpg? nc cat=111&ccb=1 3& nc sid=730e14& nc ohc=OBZWotaYt6gAX SVDxm& nc ht=scontent.fblr4 2

ತುಂಗಾ ನಗರ ಠಾಣೆ ಪೊಲೀಸರು ಟಿಪ್ಪುನಗರದಲ್ಲಿ ಕಾರ್ಯಾಚರಣೆ ನಡೆಸಿ, ಅಣ್ಣಾನಗರದ ಅಬ್ದುಲ್ ಮುನಾಫ್‍ (22), ಮಿಳಘಟ್ಟದ ಅಸಾದಿ ಅಲಿಯಾಸ್ ಅಸಾದುಲ್ಲಾ ಖಾನ್ (22), ಮಂಜುನಾಥ ಬಡಾವಣೆಯ ಮಹಮ್ಮದ್ ಅನಾಸ್ (18), ಟಿಪ್ಪುನಗರದ ಸಯ್ಯದ್ ಇಬ್ರತ್ ಖಾನ್ (19), ಸದಾತ್ ಇಮ್ತಿಯಾಜ್ (23) ಮತ್ತು ಗುಲಾಮ್ ನಾಜ್ (34) ಎಂಬುವವರನ್ನ ಬಂಧಿಸಲಾಗಿದೆ.

ಬಂಧಿತರಿಂದ ಒಂದು ಕೆ.ಜಿ.ಗಾಂಜಾ, ಮೂರು ತಲ್ವಾರ್, 2,585 ರೂ. ನಗದು ಜಪ್ತಿ ಮಾಡಿಕೊಳ್ಳಲಾಗಿದೆ.

ಡಿವೈಎಸ್‍ಪಿ ಪ್ರಶಾಂತ್ ಮುನ್ನೊಳ್ಳಿ ಮಾರ್ಗದರ್ಶನದಲ್ಲಿ ತುಂಗಾನಗರ ಠಾಣೆ ಇನ್ಸ್‍ಪೆಕ್ಟರ್ ದೀಪಕ್ ಮತ್ತು ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

169156601 1095982247548351 4823304453913451213 n.jpg? nc cat=109&ccb=1 3& nc sid=8bfeb9& nc ohc=pstMsNv3 EEAX A GlN& nc ht=scontent.fblr4 1

ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200

ಶಿವಮೊಗ್ಗ ಲೈವ್ ಮೇಲ್ shivamoggalive@gmail.com

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment