ಶಿವಮೊಗ್ಗ ಲೈವ್.ಕಾಂ | SHIMOGA NEWS | 24 APRIL 2021
ವೀಕೆಂಡ್ ಕರ್ಫ್ಯೂ ವೇಳೆ ಅನಗತ್ಯವಾಗಿ ರಸ್ತೆಗಿಳಿಯುವವರಿಗೆ ಪೊಲೀಸರು ಬಿಸಿ ಮುಟ್ಟಿಸುತ್ತಿದ್ದಾರೆ. ಶಿವಮೊಗ್ಗದ ವಿವಿಧೆಡೆ ಪೊಲೀಸರು ದಂಡ ಪ್ರಯೋಗ ಆರಂಭಿಸಿದ್ದಾರೆ.
ಶಿವಮೊಗ್ಗದ ನಗರದಾದ್ಯಂತ ಪ್ರಮುಖ ರಸ್ತೆಗಳಲ್ಲಿ ಪೊಲೀಸರು ಬ್ಯಾರಿಕೇಡ್ ಹಾಕಿದ್ದಾರೆ. ರಸ್ತೆಯಲ್ಲಿ ಸಂಚರಿಸುವ ವಾಹನಗಳನ್ನು ತಡೆದು ವಿಚಾರಿಸುತ್ತಿದ್ದಾರೆ. ಅನಗತ್ಯವಾಗಿ ಓಡಾಡುತ್ತಿರುವವರಿಗೆ ದಂಡ ಹಾಕಲಾಗುತ್ತಿದೆ.
ಯಾವೆಲ್ಲ ಕಾರಣ ಹೇಳುತ್ತಿದ್ದಾರೆ?
ಪೊಲೀಸರು ವಾಹನ ತಡೆದಾಗ ಜನರು ಒಂದಿಲ್ಲೊಂದು ಕಾರಣ ಹೇಳುತ್ತಿದ್ದಾರೆ. ಹಲವರದ್ದು ನೈಜ ಕಾರಣವಿದ್ದರೆ, ಅನೇಕ ಮಂದಿಯದ್ದು ಕುಂಟು ನೆಪವಾಗಿದೆ.
ಆಸ್ಪತ್ರೆಗೆ ತೆರಳಬೇಕು, ಮೆಡಿಕಲ್ ಶಾಪ್ಗೆ ಹೋಗಬೇಕಿದೆ ಅನ್ನುವುದು ಸಾಮಾನ್ಯ ಕಾರಣವಾಗಿದೆ. ಮದುವೆ ಇದೆ, ಸಂಬಂಧಿಯೊಬ್ಬರ ಸಾವು ಸಂಭವಿಸಿದೆ ಎಂದು ಹೇಳಿ ಹೋಗುತ್ತಿರುವವರು ಇದ್ದಾರೆ. ಕಚೇರಿಗೆ ತೆರಳಿದ್ದೆವು, ಅಂಗಡಿ ಬಾಗಿಲು ಹಾಕಿ ಈಗ ಬರುತ್ತಿದ್ದೇವೆ ಎಂದು ಹೇಳುವವರಿದ್ದಾರೆ.
ನೈಜ ಕಾರಣವಾಗಿದ್ದರೆ ಪೊಲೀಸರು ವಾಹನವನ್ನು ಬಿಟ್ಟು ಕಳುಹಿಸುತ್ತಿದ್ದಾರೆ. ಕುಂಟು ನೆಪ ಹೇಳುತ್ತ ಓಡಾಡುತ್ತಿರುವವರನ್ನು ತಡೆದು, ಪೊಲೀಸರು ದಂಡ ಹಾಕುತ್ತಿದ್ದಾರೆ.
ದಂಡ ಹಾಕುತ್ತಿರುವ ವಿಡಿಯೋ ನ್ಯೂಸ್
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]