ಶಿವಮೊಗ್ಗ ಲೈವ್.ಕಾಂ | SHIMOGA NEWS | 10 ಅಕ್ಟೋಬರ್ 2021
ಶಿವಮೊಗ್ಗ ಲೈವ್ನ ಪ್ರತಿ ಅಪ್ಡೇಟ್ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್ಗಳನ್ನು ಜಾಯಿನ್ ಆಗಿ:
ಸೇತುವೆ ಮೇಲಿನಿಂದ ತುಂಗಾ ಹೊಳೆಗೆ ಜಿಗಿದು, ನಡು ನೀರಲ್ಲಿ ಸಿಲುಕಿದ್ದ ಯುವಕನೊಬ್ಬನನ್ನು ಅಗ್ನಿಶಾಮಕ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಇನ್ನು, ಕಾರ್ಯಾಚರಣೆ ವೀಕ್ಷಿಸಲು ಭಾರಿ ಜನ ಸೇರಿದ್ದರಿಂದ ಸೇತುವೆ ಮೇಲೆ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಯಿತು.
ಬೆಕ್ಕಿನಕಲ್ಮಠ ಬಳಿ ಸೇತುವೆ ಮೇಲಿನಿಂದ ಯುವಕನೊಬ್ಬ ತುಂಗಾ ಹೊಳೆಗೆ ಹಾರಿದ್ದಾನೆ. ಆತನನ್ನು ತನ್ವೀರ್ ಎಂದು ಗುರುತಿಸಲಾಗಿದೆ.
ಸೇತುವೆಯಿಂದ ಹಾರಿದನಂತೆ..!
ತನ್ವೀರ್, ಹೊಸ ಸೇತುವೆ ಮೇಲಿಂದ ತುಂಗಾ ಹೊಳೆಗೆ ಹಾರಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಹೊಳೆಯಲ್ಲಿ ನೀರು ರಭಸವಾಗಿ ಹರಿಯುತ್ತಿದ್ದರಿಂದ ರೈಲ್ವೆ ಸೇತುವೆ ದಾಟಿ ಪಕ್ಕದ ಗಿಡಗಂಟಿಯ ನಡುವೆ ಸಿಲುಕಿದ್ದ. ನೆರವಿಗಾಗಿ ಕೈ ಬೀಸಿ ಕರೆಯುತ್ತಿದ್ದ.
VIDEO REPORT
ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ
ಘಟನೆ ಮಾಹಿತಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದರು. ಕಾರ್ಯಾಚರಣೆ ನಡೆಸಿ ತನ್ವೀರ್’ನ ರಕ್ಷಣೆ ಮಾಡಿ, ದಡಕ್ಕೆ ಕರೆತಂದರು. ಸೇತುವೆಯಿಂದ ಜಿಗಿದಿದ್ದರೂ ಅದೃಷ್ಟವಶಾತ್ ತನ್ವೀರ್’ಗೆ ಯಾವುದೆ ತೊಂದರೆಯಾಗಿಲ್ಲ.

‘ಕಾಲು ಜಾರಿ ಬಿದ್ದೆ’
ರಕ್ಷಣಾ ಕಾರ್ಯಾಚಾರಣೆ ಬಳಿಕ ತಾನು ಕಾಲು ಜಾರಿ ಸೇತುವೆಯಿಂದ ಬಿದ್ದಿದ್ದಾಗಿ ತನ್ವೀರ್ ಹೇಳಿಕೊಂಡಿದ್ದಾನೆ. ಆದರೆ ಸೇತುವೆ ತಡೆಗೋಡೆ ಎತ್ತರವಾಗಿದ್ದು, ಜಾರಿ ಹೊಳೆಗೆ ಬೀಳು ಸಾಧ್ಯವಿಲ್ಲ.

ರಕ್ಷಣಾ ಕಾರ್ಯಾಚರಣೆ ವೀಕ್ಷಿಸಲು ಸೇತುವೆ ಮೇಲೆ ಭಾರಿ ಜನ ಸೇರಿದ್ದರು. ಇದರಿಂದಾಗಿ ಸೇತವೆ ಮೇಲೆ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಸಂಚಾರ ದಟ್ಟಣೆ ನಿಯಂತ್ರಿಸಿದರು. ಕೋಟೆ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ ಮೂಲಕ ಸುದ್ದಿಗಾಗಿ 7411700200
LATEST NEWS
- ವರ್ಷ ಪೂರ್ತಿ ರಂಗ ಚಟುವಟಿಕೆ, ಉದ್ಘಾಟನೆಯ ದಿನಾಂಕ ಪ್ರಕಟ, ಏನಿದು ಕಾರ್ಯಕ್ರಮ?

- ಸರ್ಕಾರಿ ಮಹಿಳಾ ನೌಕರರ ಸಂಘ ಅಸ್ಥಿತ್ವಕ್ಕೆ, ಉದ್ದೇಶವೇನು? ರಾಜ್ಯಾಧ್ಯಕ್ಷೆ ಏನೆಲ್ಲ ಹೇಳಿದರು?

- ಅರ್ಧಕ್ಕರ್ಧ ಶಿವಮೊಗ್ಗ ಸಿಟಿಯಲ್ಲಿ ಫೆಬ್ರವರಿ 7ರಂದು ಇಡೀ ದಿನ ಕರೆಂಟ್ ಇರಲ್ಲ, ಯಾವ್ಯಾವ ಏರಿಯಾ? ಇಲ್ಲಿದೆ ಲಿಸ್ಟ್

- ಶಿವಮೊಗ್ಗ ಜಿಲ್ಲೆಯಲ್ಲಿ ಮತ್ತಷ್ಟು ತಗ್ಗಿದ ತಪಮಾನ, ಯಾವ್ಯಾವ ತಾಲೂಕಿನಲ್ಲಿ ಎಷ್ಟಿದೆ?

- ಶಿವಮೊಗ್ಗ ಮಾರಿಕಾಂಬಾ ಜಾತ್ರೆ, ಪಂದ್ಯ ಗೆದ್ದವರಿಗೆ ಎರಡು ಟಗರು

About The Editor
ನಿತಿನ್ ಆರ್.ಕೈದೊಟ್ಲು






