‘ನಂದಿತಾ ಪ್ರಕರಣದ ಸಾಕ್ಷಿ ನಾಶವಾಗಿ ಮಣ್ಣು ಹಿಡಿದಿದೆ, ಈಗೇಕೆ ಸಿಬಿಐ ತನಿಖೆ?’, ಗೃಹ ಸಚಿವರ ಆಕ್ರೋಶ

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

ಶಿವಮೊಗ್ಗ ಲೈವ್‌.ಕಾಂ | SHIMOGA NEWS | 22 ಜನವರಿ 2022

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

ಕಿಮ್ಮನೆ ರತ್ನಾಕರ್ ಅವರಿಗೆ ನಂದಿತಾ ಪ್ರಕರಣದಿಂದಾಗಿ ಸೋಲಾಯಿತು ಎಂಬ ಪಾಪಪ್ರಜ್ಞೆ ಕಾಡುತ್ತಿದೆ. ಆದ್ದರಿಂದ ಈ ವಿಚಾರವನ್ನು ಮುಂದಿಟ್ಟುಕೊಂಡು ಮತ್ತೆ ಗೆಲುವು ಸಾಧಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಆರೋಪಿಸಿದರು.

AVvXsEichXaELYeDOhFU0n9XstiInpkhsI4y9y5uB VImqATyx1h3CLRA4zsRrFRxoiVo U462f0MYCBVD

ಪತ್ರಿಕಾ ಭವನದಲ್ಲಿ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ ಗೃಹ ಸಚಿವ ಆರಗ ಜ್ಞಾನೇಂದ್ರ, ತಮ್ಮ ರಾಜಕೀಯ ಬದುಕು, ಸಚಿವ ಸ್ಥಾನದ ಪ್ರಮುಖ ವಿಚಾರಗಳನ್ನು ಹಂಚಿಕೊಂಡರು.

ಹೋಮ್ ಮಿನಿಸ್ಟರ್ ಹೇಳಿದ್ದೇನು?

♦ಹೆಸರಿಗಷ್ಟೆ ಮಂತ್ರಿ ಅಲ್ಲ

‘ಹೆಸರಿಗೊಬ್ಬ ಮಂತ್ರಿ ಆಗಬಾರದು ಎಂಬುದು ನನ್ನ ಗುರಿ. ಅದಕ್ಕಾಗಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ‌.
ಗಾಂಜಾ, ಮಾದಕ ವಸ್ತುಗಳ ಸೇವನೆ ನಿದ್ದೆಗಿಡಿಸಿದೆ. ಯುವ ಸಮೂಹದಲ್ಲಿ ಮಾದಕ ವಸ್ತುಗಳ ಸೇವನೆ ದೊಡ್ಡ ಪಿಡುಗಾಗಿದೆ.’

♦ಆಂಧ್ರದಿಂದ ಬರುತ್ತಿದೆ ಗಾಂಜಾ

‘ಶಿವಮೊಗ್ಗಕ್ಕೆ ಆಂಧ್ರದಿಂದ ಗಾಂಜಾ ಸರಬರಾಜು ಮಾಡಲಾಗುತ್ತಿತ್ತು. ಸುಮಾರು 200 ಕೆಜಿ ಗಾಂಜಾ ವಶಕ್ಕೆ ಪಡೆಯಲಾಗಿದೆ. ಗಾಂಜಾ ಸೇವನೆ ಮಾಡುವವರ ವಿರುದ್ಧ 160 ಕೇಸ್ ಹಾಕಲಾಗಿದೆ. 72 ಜನರನ್ನು ಕಸ್ಟಡಿಗೆ ಹಾಕಲಾಗಿದೆ. ಹಾಗಾಗಿ ಬಹಳ ಜನ ಗಾಂಜಾ ಸೇವನೆ ಬಿಟ್ಟಿದ್ದಾರೆ.’

AVvXsEiirXyNvbWM7WChRTuiHxs8DRd KmkyI307 IhZVnuhf wkJJyomhC 3iGNxIb2PZHHQLdmHphW5 mwglkSzqvaikcPvF9EjSIjzcprCdUjKynqFN

♦’ನಂದಿತಾ ಕೇಸ್, ಆರೋಪಿಗಳ ರಕ್ಷಣೆ’

‘ನಂದಿತಾ ಪ್ರಕರಣದಲ್ಲಿ ಹೋರಾಟಗಾರರ ಮೇಲೆ ಪ್ರಕರಣ ದಾಖಲಾಗಲು ಅವರು ಹೆಚ್ಚು ಪ್ರಭಾವ ಬೀರಿದ್ದಾರೆ. 300ಕ್ಕೂ ಹೆಚ್ಚು ಜನರ ಮೇಲೆ ಕೇಸ್ ದಾಖಲಾಗಿದೆ. ಆರೋಪಿಗಳ ರಕ್ಷಿಸುವ ಕೆಲಸ ಮಾಡಿದ್ದರು. ವೋಟ್ ಬ್ಯಾಂಕ್‌ಗೆ ತೊಡಕಾಗಲಿದೆ ಎಂದು ಆಗ ಹೋರಾಟ ಮಾಡಿದ್ದರು. ಈಗ ಅವರೆ ಸಿಬಿಐಗೆ ವಹಿಸಿ ಅನ್ನುತ್ತಿದ್ದಾರೆ.’

♦ಪಾಪ ಪ್ರಜ್ಞೆ ಕಾಡುತ್ತಿದೆ

‘ಸಾಕ್ಷಿಗಳು ಸರ್ವನಾಶವಾಗಿ, ಮಣ್ಣು ಹಿಡಿದಿದೆ. ಈಗ ಸಿಬಿಐಗೆ ವಹಿಸುವಂತೆ ಕೇಳುತ್ತಿದ್ದಾರೆ. ನಂದಿತಾ ಪ್ರಕರಣದಿಂದ ಸೋಲಾಗಿದೆ ಎಂಬ ಪಾಪ ಪ್ರಜ್ಞೆ ಕಾಡುತ್ತಿದೆ. ಹಾಗಾಗಿ ಈಗ ಅದೇ ಪ್ರಕರಣ ಪ್ರಸ್ತಾಪಿಸಿ ಗೆಲವು ಸಾಧಿಸಲು ಹೊರಟಂತಿದೆ.’

♦ಅಡಕೆ ಸಂಶೋಧನೆ ಮಧ್ಯಂತರ ವರದಿ

‘ಅಡಕೆಯಲ್ಲಿ ಔಷಧೀಯ ಗುಣ ಇದೆ ಎಂದು ಸಾಬೀತು ಮಾಡಲು ಸಂಶೋಧನೆ ನಡೆಸಲಾಗುತ್ತಿದೆ. ಎಂ.ಎಸ್.ರಾಮಯ್ಯ ಸಂಸ್ಥೆಯಲ್ಲಿ ಸಂಶೋಧನೆ ನಡೆಸಲಾಗುತ್ತಿದೆ. ಈಗಾಗಲೆ ಮಧ್ಯಂತರ ವರದಿ ಬಂದಿದೆ. ಸದ್ಯದಲ್ಲೆ ಪೂರ್ಣ ವರದಿ ಬರಲಿದೆ’.

AVvXsEgUFvnVz1xUSEX1w7yqwLdEq342GUpJF SnABxTmhzR88Y1pN3JSfQ4VZXkHu OzzEf8JtpARtRfLg2uOg2l3dq2iNbx0EVgOXPr8yulWGQr7Q

ಸಂವಾದದಲ್ಲಿ ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್.ಮಂಜುನಾಥ್, ಕಾರ್ಯದರ್ಶಿ ನಾಗರಾಜ ನೇರಿಗೆ, ಮಾಧ್ಯಮ ಅಕಾಡೆಮಿ ಸದಸ್ಯ ಗೋಪಾಲ ಯಡಗೆರೆ ಇದ್ದರು.

ABOUT NEW DEC 2021 REPORT

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment