ಶಿವಮೊಗ್ಗದಲ್ಲಿ ಆಲದ ಮರದ ಕೆಳಗೆ ವಾಮಾಚಾರ, ಜೀವಂತ ಕುರಿ ಪತ್ತೆ, ಚುನಾವಣೆಗಾಗಿ ನಡೆಯಿತಾ ಕೃತ್ಯ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 14 APRIL 2023

SHIMOGA : ರಾಷ್ಟ್ರೀಯ ಹೆದ್ದಾರಿ ಬದಿಯ ಆಲದ ಮರದ ಕೆಳಗೆ ವಾಮಾಚಾರ (Black Magic) ಮಾಡಲಾಗಿದೆ. ವಾಮಾಚಾರಕ್ಕೆ ಬಳಸಿದ ವಸ್ತುಗಳು ಮತ್ತು ಜೀವಂತ ಕುರಿ ಪತ್ತೆಯಾಗಿದೆ. ವಿಧಾನಸಭೆ ಚುನಾವಣೆ ಕಾರಣಕ್ಕೆ ವಾಮಾಚಾರ ನಡೆಸಿರುವ ಕುರಿತು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದು, ಚರ್ಚೆಗೆ ಹುಟ್ಟುಹಾಕಿದೆ.

Black-magic-muddinakoppa-near-ayanuru-in-Shimoga

ಶಿವಮೊಗ್ಗ – ಸಾಗರ ರಸ್ತೆಯ ಮುದ್ದಿನಕೊಪ್ಪ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ ಪಕ್ಕದ ಆಲದ ಮರದ ಕೆಳಗೆ ವಾಮಾಚಾರ (Black Magic) ನಡೆಸಲಾಗಿದೆ. ಮಡಕೆಗಳು, ಅನ್ನ, ಬಿದಿರಿನ ಮರ, ಬುಟ್ಟಿಗಳು, ಮೊಟ್ಟೆ, ಬಟ್ಟೆಗಳು, ಅರಿಶಿಣ, ಕುಂಕುಮ, ಗೊಂಬೆ ಸೇರಿದಂತೆ ಹಲವು ವಸ್ತುಗಳು ಪತ್ತೆಯಾಗಿವೆ. ಮರದ ಪಕ್ಕದಲ್ಲಿ ಜೀವಂತ ಕುರಿಯನ್ನು ಕಟ್ಟಲಾಗಿದೆ.

ಇದನ್ನೂ ಓದಿ – ಶಿವಮೊಗ್ಗದಿಂದ ಜೀರೋ ಟ್ರಾಫಿಕ್‌ನಲ್ಲಿ ವಿಶೇಷ ಆಂಬುಲೆನ್ಸ್‌ನಲ್ಲಿ ಡಾ.ವಿನಯ್ ಬೆಂಗಳೂರಿಗೆ ಶಿಫ್ಟ್

ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ವಾಮಾಚಾರ ಮಾಡಲಾಗಿದೆ ಎಂದು ಗ್ರಾಮಸ್ಥರು ಶಂಕಿಸಿದ್ದಾರೆ. ವಾಮಾಚಾರದ ವಿಷಯ ತಿಳಿದು ಗ್ರಾಮಸ್ಥರಲ್ಲಿ ಆತಂಕ ಮೂಡಿದೆ.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment