SHIVAMOGGA LIVE NEWS | 16 MAY 2023
SAGARA : ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅತಿ ಹೆಚ್ಚು ಸ್ಥಾನ ಗೆಲ್ಲಲು ಗ್ಯಾರಂಟಿ ಕಾರ್ಡ್ (Guarantee Card) ಪ್ರಮುಖ ಪಾತ್ರ ವಹಿಸಿದೆ. ಹಾಗಾಗಿ ಸರ್ಕಾರ ರಚನೆಯಾಗುತ್ತಿದ್ದಂತಗೆ ಗ್ಯಾರಂಟಿ ಕಾರ್ಡ್ನಲ್ಲಿರುವ ಭರವಸೆಗಳನ್ನು ಕೂಡಲೆ ಈಡೇರಿಸುವ ನಂಬಿಕೆ ಇದೆ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಗೋಡು ತಿಮ್ಮಪ್ಪ ಅವರು, ಸಾಗರ ಕ್ಷೇತ್ರದಲ್ಲಿ ಕಳೆದ ಐದು ವರ್ಷದಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿದೆ. ಅಭಿವೃದ್ದಿ ಮರೀಚಿಕೆಗೆಯಾಗಿತ್ತು. ತಾನು ಶಾಸಕನಾಗಿದ್ದ ವೇಳೆ ತಾಲೂಕು ಕಚೇರಿ ಮುಂಜೂರಾಗಿತ್ತು. ಅದರ ಉದ್ಘಾಟನೆ ಕಾರ್ಯ ಈತನಕ ನಡೆದಿಲ್ಲ ಎಂದು ಆರೋಪಿಸಿದರು. (Guarantee Card)
WATCH VIDEO
ಹೆಚ್ಚಿನ ಮಾಹಿತಿಗೆ ಇಲ್ಲಿ CLICK ಮಾಡಿ
ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ, ಮಕ್ಬೂಲ್ ಅಹ್ಮದ್, ಮಂಜೂರಾಲಿ ಖಾನ್, ಮೈಕೆಲ್ ಡಿಸೋಜ, ವಿ.ಶಂಕರ್, ರಫೀಕ್ ಬಾಬಾಜಾನ್, ಗಣಪತಿ ಹೆನಗೆರೆ ಸೇರಿದಂತೆ ಹಲವರು ಇದ್ದರು.
ಇದನ್ನೂ ಓದಿ – ಸಾಗರದಲ್ಲಿ ವಿದ್ಯಾರ್ಥಿಗಳ ದಿಢೀರ್ ಪ್ರತಿಭಟನೆ, ಶಾಸಕ ಬೇಳೂರು ಗೋಪಾಲಕೃಷ್ಣ ಫೋನ್ ಬಳಿಕ ಹೋರಾಟ ಅಂತ್ಯ
ನಗರಸಭೆಗೆ ಕಾಗೋಡು ಭೇಟಿ
ಇದೆ ವೇಳೆ ನಗರಸಭೆ ಕಚೇರಿಗೆ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರ ನೇತೃತ್ವದ ನಿಯೋಗ ಭೇಟಿ ನೀಡಿ, ಆಯುಕ್ತರ ಜೊತೆಗೆ ಚರ್ಚೆ ನಡೆಸಿತು. ನಗರಸಭೆಯಲ್ಲಿ ಪಾರದರ್ಶಕ ಮತ್ತು ಭ್ರಷ್ಟಾಚಾರ ಮುಕ್ತ ಆಡಳಿತ ನೀಡಬೇಕು ಎಂದು ಸೂಚಿಸಲಾಯಿತು. ಬೇಸಿಗೆಯಲ್ಲಿ ಸಾಗರ ಪಟ್ಟಣದಲ್ಲಿ ಯಾವುದೆ ಕಾರಣಕ್ಕು ಕುಡಿಯುವ ನೀರಿನ ಕೊರತೆ ಆಗಬಾರದು ಎಂದು ಆಗ್ರಹಿಸಿದರು.