ನ್ಯೂಸ್‌ ಚಾನಲ್‌ ವಿರುದ್ಧ ಈಶ್ವರಪ್ಪ ಗರಂ | ಪೊಲೀಸ್‌ ದಾಳಿ 2 ಅರೆಸ್ಟ್‌ | ಹಸೆಮಣೆ ಏರಿದ ಮಂಜುನಾಥ ಗೌಡರ ಮಕ್ಕಳು

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE | 29 JUNE 2023

ನಾನು ಹಾಗೆ ಹೇಳೆ ಇಲ್ಲ

SHIMOGA : ವಲಸಿಗರಿಂದ ಬಿಜೆಪಿಗೆ ಸಮಸ್ಯೆಯಾಗಿದೆ ಎಂಬ FATAFAT NEWS 1 jpgಅರ್ಥದಲ್ಲಿನ ಹೇಳಿಕೆ ವಿವಾದ ಭುಗಿಲೇಳುತ್ತಿದ್ದಂತೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಸುದ್ದಿಗೋಷ್ಠಿ ಕರೆದು ಸ್ಪಷ್ಟನೆ ನೀಡಿದ್ದಾರೆ. ಶಿವಮೊಗ್ಗ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆ.ಎಸ್.ಈಶ್ವರಪ್ಪ, ಬಾಂಬೆ ಬಾಯ್ಸ್‌ ಎಂಬ ಪದವನ್ನೆ ಬಳಸಿಲ್ಲ. ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುವಾಗ ಕಾಂಗ್ರೆಸ್‌ ಗಾಳಿ ಬೀಸಿದ್ದರಿಂದ ಬಿಜೆಪಿ ಮುಖಂಡರು ಅಶಿಸ್ತಿನ ವರ್ತನೆ ತೋರುತ್ತಿರಬಹುದು ಎಂದು ನಾನು ಹೇಳಿದ್ದೆ. ಸುದ್ದಿ ವಾಹಿನಿಯೊಂದರಲ್ಲಿ (News Channel) ತಪ್ಪಾಗಿ ಸುದ್ದಿ ಬಂದಿದೆ. ಇದರಿಂದ ಪಕ್ಷದಲ್ಲಿ ಅನೇಕರಿಗೆ ಬೇಸರವಾಗಿದೆ. ಕಾಂಗ್ರೆಸಿಗರು ನಮ್ಮ ಪಕ್ಷಕ್ಕೆ ಬಂದಿದ್ದರಿಂದಲೆ ನಾನು ಮಂತ್ರಿಯಾಗಿದ್ದು ಎಂದು ತಿಳಿಸಿದರು.

ಇದನ್ನೂ ಓದಿ – ಸಿಗಂದೂರು ಲಾಂಚ್‌ ಇನ್ನು ಮೂರ್ನಾಲ್ಕು ದಿನದಲ್ಲಿ ಬಂದ್‌, ಯಾಕೆ?

FATAFAT-MORE-NEWS

ಹಸೆಮಣೆ ಏರಿದ ಮಂಜುನಾಥ ಗೌಡರ ಮಕ್ಕಳು

Banavasi Manjnatha gowda daughters

ANANDAPURA | ತಂದೆಯನ್ನು ಕಳೆದುಕೊಂಡ ನೋವಿನಲ್ಲಿಯು FATAFAT NEWS 2 jpgಸಹೋದರಿಯರು ಹಸೆಮಣೆ  ಏರಿದರು. ಆನಂದಪುರ ಬಳಿ ಸಂಭವಿಸದ ಕಾರು ಅಪಘಾತದಲ್ಲಿ ಬಸವಾಸಿಯ ಮಂಜುನಾಥ ಗೌಡ ಸಾವನ್ನಪ್ಪಿದ್ದರು. ಇಬ್ಬರು ಹೆಣ್ಣು ಮಕ್ಕಳ ಮದುವೆ ಹಿಂದಿನ ದಿನ ಘಟನೆ ಸಂಭವಿಸಿತ್ತು. ಜೂ.27ರ ಮಧ್ಯೆ ರಾತ್ರಿ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು. ಜೂ.28ರಂದು ಮಂಜುನಾಥ ಗೌಡ ಅವರ ಇಬ್ಬರು ಹೆಣ್ಣು ಮಕ್ಕಳು ಹಸೆ ಮಣೆ ಏರಿದರು. ಸಂಬಂಧಿಕರು, ವರನ ಕುಟುಂಬದವರ ನಡೆಗೆ ಜನ ಮೆಚ್ಚುಗೆ ವ್ಯಕ್ತವಾಗಿದೆ.

FATAFAT-MORE-NEWS

ಗಾಂಜಾ, ಹಣ, ಕಾರು ಸಹಿತ ಇಬ್ಬರು ಅರೆಸ್ಟ್‌

Two arrest On Tunga Nagar Channel

SHIMOGA : ತುಂಗಾ ಚಾನಲ್‌ ಬಳಿ ಕಾರು ನಿಲ್ಲಿಸಿಕೊಂಡು ಗಾಂಜಾ FATAFAT NEWS 3 jpgಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದರು. 35 ಸಾವಿರ ರೂ ಮೌಲ್ಯದ ಗಾಂಜಾ, 1500 ರು. ನಗದು, ಒಂದು ಕಾರನ್ನು ವಶಕ್ಕೆ ಪಡೆಯಲಾಗಿದೆ. ಸಾಗರ ರಾಮನಗರದ ಅಲ್ತಾಫ್‌ ಮತ್ತು ಆಯನೂರಿನ ಸಯ್ಯದ್‌ ಯಾಸೀನ್‌ ಬಂಧಿತರು. ಡಿಸಿಆರ್‌ಬಿ ಡಿವೈಎಸ್‌ಪಿ ಮೇಲ್ವಿಚಾರಣೆಯಲ್ಲಿ ಸಿಇಎನ್‌ ಠಾಣೆ ಇನ್ಸ್‌ಪೆಕ್ಟರ್‌ ಎಂ.ಎಸ್.ದೀಪಕ್‌, ಪಿಎಸ್‌ಐ ಮಂಜುನಾಥ್‌, ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಸಿಇಎನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

FATAFAT-MORE-NEWS

ಸಾಗರದಲ್ಲಿ ಅಂಗನಾಡಿ ಕಾರ್ಯಕರ್ತೆಯರ ಪ್ರತಿಭಟನೆ

Anganavadi Workes Protest

SAGARA : ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸಾಗರ ತಹಶೀಲ್ದಾರ್‌ FATAFAT NEWS 4 jpgಕಚೇರಿ ಮುಂಬಾಗ ಅಂಗನವಾಡಿ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದರು. ಕಳಪೆ ಮೊಬೈಲ್‌ ನೀಡಿದ್ದು, ಅದನ್ನು ಸರ್ಕಾರ ಹಿಂಪಡೆದು ಹೊಸ ಮೊಬೈಲ್‌ ಕೊಡಬೇಕು. ಅಂಗನವಾಡಿ ಕಾರ್ಯಕರ್ತರು ಮತ್ತು ಸಹಾಯಕಿಯರಿಗೆ ಕ್ರಮವಾಗಿ ಮಾಸಿಕ 15 ಸಾವಿರ ರೂ ಮತ್ತು 10 ಸಾವಿರ ರೂ. ಗೌರವಧನ ಹೆಚ್ಚಳ ಮಾಡಬೇಕು ಸೇರಿದಂತೆ ತಮ್ಮ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿದರು. ತಹಶೀಲ್ದಾರ್‌ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಇದನ್ನೂ ಓದಿ – 10 ಸಾವಿರ ರೂ. ಹೂಡಿಕೆ, ಕೆಲವೇ ನಿಮಿಷದಲ್ಲಿ 16 ಸಾವಿರ ರೂ. ಗಳಿಕೆ, ನಂಬಿದ ತೀರ್ಥಹಳ್ಳಿ ಗೃಹಿಣಿಗೆ ಕಾದಿತ್ತು‌ ಬಿಗ್‌ ಶಾಕ್

FATAFAT-MORE-NEWS

ಜು.3ರಂದು ಫಕೀರೇಶ್ವರ ಜಾತ್ರೆ

SHIMOGA : ಗಾಡಿಕೊಪ್ಪದ ಪುರದಾಳು ರಸ್ತೆಯ ಶ್ರೀ ಫಕೀರೇಶ್ವರ FATAFAT NEWS 5 jpgಭಾವೈಕ್ಯ ಶಾಖಾಮಠದಲ್ಲಿ ಜುಲೈ 3 ರಂದು 6ನೇ ವರ್ಷದ ಜಾತ್ರಾ ಮಹೋತ್ಸವ ಆಯೋಜಿಸಲಾಗಿದೆ. ಬೆಕ್ಕಿನ ಕಲ್ಮಠದ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ಬಿಳಕಿ ಹಿರೇಮಠದ ರಾಚೋಟೇ‍ಶ್ವರ ಶಿವಾಚಾರ್ಯ ಸ್ವಾಮೀಜಿ, ಬಸವಕೇಂದ್ರದ ಬಸವ ಮರುಳಸಿದ್ಧ  ಸ್ವಾಮೀಜಿ, ಖಾಜಿ ಸೈಯದ್‌ ಷಾ ಮಹಮದ್‌ ಖಾದ್ರಿ ಅವರ ಸಾನ್ನಿಧ್ಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ ಮಹಾ ಮಂಗಳರಾತಿ ನೆರವೇರಲಿದ್ದು, ಸಾರ್ವಜನಿಕ ಅನ್ನ ಸಂತರ್ಪಣೆ ಇರಲಿದೆ. ಸಂಜೆ ಶ್ರೀ ನಾಗಚೌಡೇಶ್ವರಿ ದೇವಿ ಪ್ರತಿಷ್ಠಾಪನೆ, ಭಾವೈಕ್ಯ ಸಮ್ಮೇಳನ, ವಿವಿಧ ಧಾರ್ಮಿಕ ಕಾರ್ಯಗಳು ನಡೆಯಲಿದೆ.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment