ಶಿವಮೊಗ್ಗದ ವಾಹನ ಸವಾರರೆ ಹುಷಾರ್‌, ಈ ರಸ್ತೆಯಲ್ಲಿ ಸ್ವಲ್ಪ ಯಾಮಾರಿದ್ರು ಅಪಘಾತ ಫಿಕ್ಸ್‌

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 13 SEPTEMBER 2023

SHIMOGA : ಸ್ಮಾರ್ಟ್‌ ಸಿಟಿ ಯೋಜನೆಯ ಕಾಮಗಾರಿ ವಿರುದ್ಧ ಜನರ ಅಸಮಾಧಾನ ಮುಂದುವರೆದಿದೆ. ಅವೈಜ್ಞಾನಿಕ ಕಾಮಗಾರಿಯಿಂದ ಜನರಿಗೆ ಸಮಸ್ಯೆಗಳು ಶುರುವಾಗಿವೆ. ರಸ್ತೆ ಮಧ್ಯೆ ಅಳವಡಿಸಿರುವ ಸ್ಲಾಬ್‌ಗಳು ಕುಸಿಯುತ್ತಿದ್ದು ವಾಹನ ಸವಾರರಿಗೆ ದುಸ್ವಪ್ನದಂತೆ ಕಾಡುತ್ತಿದೆ.

Slab in Shimoga Balaraja Urs Road

ಶಿವಮೊಗ್ಗದ ಬಾಲರಾಜ ಅರಸ್‌ ರಸ್ತೆಯಲ್ಲಿ ಭೂಗತ ಕೇಬಲ್‌ಗಳನ್ನು ಅಳವಡಿಸಲಾಗಿದೆ. ಅಲ್ಲಲ್ಲಿ ಇವುಗಳಿಗೆ ಸ್ಲಾಬ್‌ಗಳನ್ನು ಹಾಕಲಾಗಿದೆ. ಈ ಸ್ಲಾಬ್‌ಗಳು ವಾಹನ ಸವಾರರ ಪಾಲಿಗೆ ಕಂಟಕವಾಗಿವೆ.

ಕುಸಿಯುತ್ತಿವೆ ಸ್ಲಾಬ್‌ಗಳು

ಬಾಲರಾಜ ಅರಸ್‌ ರಸ್ತೆಯಲ್ಲಿ ಭಾರೀ ವಾಹನಗಳ ಸಂಚಾರ ಹೆಚ್ಚು. ಈ ಸ್ಲಾಬ್‌ಗಳು ರಸ್ತೆ ಮಧ್ಯದಲ್ಲಿವೆ. ಹಾಗಾಗಿ ಲಾರಿ, ಬಸ್ಸುಗಳು ಇದರ ಮೇಲೆ ಸಂಚರಿಸುತ್ತವೆ. ಅತಿಯಾದ ಭಾರದಿಂದ ಸ್ಲಾಬ್‌ಗಳು ಕುಸಿಯುತ್ತಿವೆ. ಸ್ಲಾಬ್‌ಗಳ ದುಸ್ಥಿತಿ ಗೊತ್ತಾಗದೆ ದ್ವಿಚಕ್ರ ವಾಹನ ಸವಾರರು ಇದರ ಮೇಲೆ ಸಂಚರಿಸಿದರೆ ಅಪಘಾತ ನಿಶ್ಚಿತ.

Slab in Balaraja urs road

ಕಳಪೆ ಕಾಮಗಾರಿ ಮಾಡಿದ್ದಾರೆ. ರಸ್ತೆ ಮಧ್ಯೆ ಇವುಗಳನ್ನು ಹಾಕುವ ಬದಲು ರಸ್ತೆ ಬದಿಯಲ್ಲಿ ಹಾಕಬಹುದಿತ್ತು. ಇದರ ಮೇಲೆ ಗಾಡಿ ಓಡಿಸುವುದಕ್ಕೆ ಭಯವಾಗುತ್ತದೆ. ಗಾಡಿ ಹೋಗುವಾಗಲೆ ಇದು ಕುಸಿದುಬಿಟ್ಟರೆ ಏನು ಮಾಡೋದು.ಮಂಜಣ್ಣ, ಆಟೋ ಚಾಲಕ

ಬ್ಯಾರಿಕೇಡ್‌ ಹಾಕಿ ಬಂದ್‌

ಬಾಲರಾಜ್‌ ಅರಸ್‌ ರಸ್ತೆಯಲ್ಲಿರುವ ಎರಡು ಸ್ಲಾಬ್‌ಗಳು ಅಪಾಯದ ಹಂತಕ್ಕೆ ತಲುಪಿವೆ. ಇವುಗಳ ಸುತ್ತಲು ಬ್ಯಾರಿಕೇಡ್‌ ಹಾಕಲಾಗಿದೆ. ಪಿಡಬ್ಲುಡಿ ಕಚೇರಿ ಮುಂಭಾಗ ಮತ್ತು ಬಸವನಗುಡಿಯ ತಿರುವಿನಲ್ಲಿ ಸ್ಲಾಬ್‌ಗೆ ಬ್ಯಾರಿಕೇಡ್‌ ಹಾಕಲಾಗಿದೆ. ರಾತ್ರಿ ವೇಳೆ ರಸ್ತೆ ಖಾಲಿ ಇರುವುದರಿಂದ ವಾಹನ ಸವಾರರು ಸಹಜವಾಗಿ ವೇಗವಾಗಿಯೇ ತೇರಳುತ್ತಾರೆ. ಇಂತಹ ಸಂದರ್ಭ ಸ್ವಲ್ಪ ಯಾಮಾರಿದರು ಅಪಘಾತ ಸಂಭವಿಸಲಿದೆ.

Slab in Shimoga Balaraja Urs Road

ಮೂರ್ನಾಲ್ಕು ತಿಂಗಳ ಹಿಂದೇನು ಇದೆ ರೀತಿಯಾಗಿತ್ತು. ಆಗ ರಿಪೇರಿ ಮಾಡಿದ್ದರು. ಈಗ ಸಮಸ್ಯೆ ಜಾಸ್ತಿಯಾಗಿದೆ. ಈ ಮೊದಲು ರಸ್ತೆ ಚನ್ನಾಗಿಯೇ ಇತ್ತು. ಸ್ಮಾರ್ಟ್‌ ಸಿಟಿ ಮಾಡಲು ಹೋಗಿ ಇಂತಹ ದುಸ್ಥಿತಿ ಬಂದಿದೆ.ರಮೇಶ್‌, ಬಸವನಗುಡಿ ನಿವಾಸಿ

ಇಲ್ಲಿ ಮಾತ್ರವಲ್ಲ ಈ ಸಮಸ್ಯೆ

ಸ್ಲಾಬ್‌ಗಳ ಸಮಸ್ಯೆ ಬಾಲರಾಜ ಅರಸ್‌ ರಸ್ತೆಗೆ ಸೀಮಿತವಲ್ಲ. ನಗರದ ವಿವಿಧೆಡೆ ರಸ್ತೆ, ಸರ್ಕಲ್‌ಗಳಲ್ಲಿ ಸ್ಲಾಬ್‌ಗಳ ಸಮಸ್ಯೆ ಇದೆ. ಜೈಲ್‌ ಸರ್ಕಲ್‌, ಕುವೆಂಪು ರಸ್ತೆಯಲ್ಲೂ ಸ್ಲಾಬ್‌ಗಳು ಅಂಕು ಡೊಂಕಾಗಿವೆ. ದ್ವಿಚಕ್ರ ವಾಹನಗಳು, ಆಟೋ, ಕಾರುಗಳ ಚಾಲಕರಿಗೆ ಈ ಸ್ಲಾಬ್‌ಗಳು ದೊಡ್ಡ ಸವಾಲಾಗಿವೆ.

ಇದನ್ನೂ ಓದಿ – ಶಿವಮೊಗ್ಗ ತಹಶೀಲ್ದಾರ್‌ ನಾಗರಾಜ್‌ ಸಸ್ಪೆಂಡ್‌, ಕಾರಣವೇನು?

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : September 13, 2023

ಉಷಾ ನರ್ಸಿಂಗ್‌ ಹೋಂ ಬಳಿ ಅಂಬ್ಯುಲೆನ್ಸ್‌ ಡಿಕ್ಕಿ, ಕಾರು ಪಲ್ಟಿ, ಹೇಗಾಯ್ತು ಘಟನೆ?

ಉಷಾ ನರ್ಸಿಂಗ್‌ ಹೋಂ ಬಳಿ ಅಂಬ್ಯುಲೆನ್ಸ್‌ ಡಿಕ್ಕಿ, ಕಾರು ಪಲ್ಟಿ, ಹೇಗಾಯ್ತು ಘಟನೆ?

ಗಾಜನೂರಿನಲ್ಲಿ ಭೀಕರ ಅಪಘಾತ, ಆಟೋ ನಜ್ಜುಗುಜ್ಜು, ಶಿವಮೊಗ್ಗದ ಯುವಕ ಸಾವು, ಆಗಿದ್ದೇನು?

ಗಾಜನೂರಿನಲ್ಲಿ ಭೀಕರ ಅಪಘಾತ, ಆಟೋ ನಜ್ಜುಗುಜ್ಜು, ಶಿವಮೊಗ್ಗದ ಯುವಕ ಸಾವು, ಆಗಿದ್ದೇನು?

ಶಿವಮೊಗ್ಗದಲ್ಲಿ ಅತಿ ಕೆಳಗೆ ಹಾರಿದ ವಿಮಾನ, ಎರಡು ಟ್ರಿಪ್‌ ಹಾರಾಟ, ಕಾರಣವೇನು?

ಶಿವಮೊಗ್ಗದಲ್ಲಿ ಅತಿ ಕೆಳಗೆ ಹಾರಿದ ವಿಮಾನ, ಎರಡು ಟ್ರಿಪ್‌ ಹಾರಾಟ, ಕಾರಣವೇನು?

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಚಾಕು ತೋರಿಸಿ ಬೆದರಿಕೆ ಹಾಕಿ ದರೋಡೆ, ಎಲ್ಲಿ? ಆಗಿದ್ದೇನು?

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಚಾಕು ತೋರಿಸಿ ಬೆದರಿಕೆ ಹಾಕಿ ದರೋಡೆ, ಎಲ್ಲಿ? ಆಗಿದ್ದೇನು?

ಎಸ್ಸೆಸ್ಸೆಲ್ಸಿ ಪರೀಕ್ಷೆ, 192 ವಿದ್ಯಾರ್ಥಿಗಳು ಗೈರು, ಹೇಗಿತ್ತು ಮೊದಲ ದಿನದ ಪರೀಕ್ಷೆ?

ಎಸ್ಸೆಸ್ಸೆಲ್ಸಿ ಪರೀಕ್ಷೆ, 192 ವಿದ್ಯಾರ್ಥಿಗಳು ಗೈರು, ಹೇಗಿತ್ತು ಮೊದಲ ದಿನದ ಪರೀಕ್ಷೆ?

ಕುಡಿಗೆರೆಯಲ್ಲಿ ಅಧಿಕಾರಿಗಳ ದಾಳಿ, ಮೂವರ ವಿರುದ್ಧ ದಾಖಲಾಯ್ತು ಕೇಸ್‌, ಕಾರಣವೇನು?

ಕುಡಿಗೆರೆಯಲ್ಲಿ ಅಧಿಕಾರಿಗಳ ದಾಳಿ, ಮೂವರ ವಿರುದ್ಧ ದಾಖಲಾಯ್ತು ಕೇಸ್‌, ಕಾರಣವೇನು?

ಶಿವಮೊಗ್ಗ ಜಿಲ್ಲೆಯಲ್ಲಿ ತಂಪು ತಂಪು ವಾತಾವರಣ, ಇವತ್ತೂ ಬರುತ್ತಾ ಮಳೆ?

ಶಿವಮೊಗ್ಗ ಜಿಲ್ಲೆಯಲ್ಲಿ ತಂಪು ತಂಪು ವಾತಾವರಣ, ಇವತ್ತೂ ಬರುತ್ತಾ ಮಳೆ?

ಶಿವಮೊಗ್ಗ ಸಿಟಿಯಲ್ಲಿ ಭಾರಿ ಮಳೆ, ಎಲ್ಲೆಲ್ಲಿ ಏನೇನು ಹಾನಿಯಾಗಿದೆ? ಇಲ್ಲಿದೆ ಡಿಟೇಲ್ಸ್‌

ಶಿವಮೊಗ್ಗ ಸಿಟಿಯಲ್ಲಿ ಭಾರಿ ಮಳೆ, ಎಲ್ಲೆಲ್ಲಿ ಏನೇನು ಹಾನಿಯಾಗಿದೆ? ಇಲ್ಲಿದೆ ಡಿಟೇಲ್ಸ್‌

ಇವತ್ತು ಯಾವ್ಯಾವ ಅಡಿಕೆಗೆ ಎಷ್ಟಿದೆ ರೇಟ್‌? – 18 ಮಾರ್ಚ್‌ 2026 – ಅಡಿಕೆ ಧಾರಣೆ

ಇವತ್ತು ಯಾವ್ಯಾವ ಅಡಿಕೆಗೆ ಎಷ್ಟಿದೆ ರೇಟ್‌? – 18 ಮಾರ್ಚ್‌ 2026 – ಅಡಿಕೆ ಧಾರಣೆ

ಶಿವಮೊಗ್ಗ ಸಿಟಿಯಲ್ಲಿ ಆಲಿಕಲ್ಲು ಸಹಿತ ಮಳೆ, ಜೋರು ಗಾಳಿ, ಗುಡುಗಿನ ಅಬ್ಬರ

ಶಿವಮೊಗ್ಗ ಸಿಟಿಯಲ್ಲಿ ಆಲಿಕಲ್ಲು ಸಹಿತ ಮಳೆ, ಜೋರು ಗಾಳಿ, ಗುಡುಗಿನ ಅಬ್ಬರ

Leave a Comment