ಶಿವಮೊಗ್ಗದಿಂದ ಗೋವಾ, ತಿರುಪತಿ, ಹೈದರಾಬಾದ್‌ಗೆ ವಿಮಾನ, ಯಾವ ರೂಟ್‌ಗೆ ಡಿಮಾಂಡ್‌ ಜಾಸ್ತಿ ಇದೆ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 20 OCTOBER 2023

SHIMOGA : ಹೈದರಾಬಾದ್‌, ಗೋವಾ ಮತ್ತು ತಿರುಪತಿಗೆ ಶಿವಮೊಗ್ಗದಿಂದ ವಿಮಾನಯಾನ ಸೇವೆ ‍(Flight) ಆರಂಭದ ಘೋಷಣೆಯಾಗುತ್ತಿದ್ದಂತೆ ಜನರಲ್ಲಿ ಕುತೂಹಲ ಹೆಚ್ಚಿದೆ. ವಿಚಾರಣೆ ಮತ್ತು ಟಿಕೆಟ್‌ ಬುಕಿಂಗ್‌ ಪ್ರಕ್ರಿಯೆ ಕೂಡ ಬಿರುಸು ಪಡೆದುಕೊಂಡಿದೆ.

ನ.21ರಿಂದ ಸ್ಟಾರ್‌ ಏರ್‌ ಸಂಸ್ಥೆ ಶಿವಮೊಗ್ಗದಿಂದ ಮೂರು ನಗರಗಳಿಗೆ ವಿಮಾನಯಾನ ಸೇವೆ ಆರಂಭಸಲಿದೆ. ಈ ಕುರಿತು ತಮ್ಮ ವೆಬ್‌ಸೈಟ್‌ನಲ್ಲಿಯು ಪ್ರಕಟಣೆ ಹೊರಡಿಸಿದೆ. ವಿಚಾರ ತಿಳಿಯುತ್ತಲೆ ಜನರು ಎನ್‌ಕ್ವಯರಿ ಮತ್ತು ಬುಕಿಂಗ್‌ ಮಾಡಲು ಮುಂದಾಗಿದ್ದಾರೆ.

ವಾರದಲ್ಲಿ ನಾಲ್ಕು ದಿನ

ವಾರದಲ್ಲಿ ನಾಲ್ಕು ದಿನದ ವಿಮಾನ ಹಾರಾಟ ನಡೆಯಲಿದೆ. ಮಂಗಳವಾರ, ಬುಧವಾರ, ಗುರುವಾರ ಮತ್ತು ಶನಿವಾರ ಸ್ಟಾರ್‌ ಏರ್‌ ವಿಮಾನ ಶಿವಮೊಗ್ಗದಿಂದ ಮೂರು ನಗರಕ್ಕೆ ಹಾರಲಿದೆ. ಈಗಾಗಲೆ ಸೀಟ್‌ ಬುಕಿಂಗ್‌ ಆರಂಭವಾಗಿದೆ. (ಟಿಕೆಟ್‌ ಬುಕಿಂಗ್‌ಗೆ ಮೊ . 8123002917, 9449502917)

ಯಾವ ರೂಟ್‌ಗೆ ಡಿಮಾಂಡ್‌ ಜಾಸ್ತಿ?

‘ಮೂರು ಮಾರ್ಗಗಳ ಬಗ್ಗೆ ಪ್ರತ್ಯೇಕ ವಿಭಾಗದ ಜನರಿಂದ ಎನ್‌ಕ್ವಯರಿ ಬರುತ್ತಿದೆ. ಗೋವಾ ರೂಟ್‌ ಬಗ್ಗೆ ಹೆಚ್ಚಿನ ಮಂದಿ ವಿಚಾರಣೆ ಮಾಡುತ್ತಿದ್ದಾರೆ. ತಿರುಪತಿಗೆ ತೆರಳುವವರು ವಿಮಾನದ ಟೈಮಿಂಗ್‌, ದರ್ಶನದ ವ್ಯವಸ್ಥೆಯ ಕುರಿತು ಕೇಳುತ್ತಿದ್ದಾರೆ. ವಿಮಾನ ಹಾರಾಟ ಶುರುವಾದ ಮೇಲೆ ಎನ್‌ಕ್ವಯರಿ ಮತ್ತು ಬುಕಿಂಗ್‌ ಮತ್ತಷ್ಟು ಹೆಚ್ಚಾಗುತ್ತದೆʼ ಅನ್ನುತ್ತಾರೆ ಶಿವಮೊಗ್ಗದ ಬ್ಲೂ ಬೆಲ್‌ ಹಾಲಿಡೇಸ್‌ ಸಂಸ್ಥೆಯ ಮಂಜುನಾಥ ಮೂರ್ತಿ.

ಗೋವಾಗೆ ಸಿಕ್ಕಾಪಟ್ಟೆ ಡಿಮಾಂಡ್‌

ಶಿವಮೊಗ್ಗದ ಉದ್ಯಮ ಕ್ಷೇತ್ರ ಹೈದರಾಬಾದ್‌ ಜೊತೆಗೆ ನಂಟು ಹೊಂದಿದೆ. ಇಲಿಯ ಉದ್ಯಮಿಗಳು ಆಗಾಗ ಹೈದಾರಾಬಾದ್‌ಗೆ ತೆರಳುತ್ತಾರೆ. ಶಿವಮೊಗ್ಗದಿಂದ ನೇರವಾಗಿ ವಿಮಾನಯಾನ ಸೇವೆ ಆರಂಭವಾಗುತ್ತಿರುವುದು ಉದ್ಯಮಿಗಳಿಗೆ ಅನುಕೂಲ. ಆದರೆ ಸಂಜೆ ಹೊತ್ತಿಗೆ ಶಿವಮೊಗ್ಗದಿಂದ ಹೈದರಾಬಾದ್‌ಗೆ ವಿಮಾನ ಹಾರುತ್ತದೆ. ಇದು ಉದ್ಯಮಿಗಳಿಗೆ ಅಷ್ಟೇನು ಅನುಕೂಲಕರ ಅಲ್ಲ ಎಂಬ ಅಭಿಪ್ರಾಯವಿದೆ.

ಶಿವಮೊಗ್ಗದಿಂದ ತಿರುಪತಿಗೆ ತೆರಳಿ ತಿಮ್ಮಪ್ಪನ ದರ್ಶನ ಪಡೆಯುವ ಭಕ್ತರ ಸಂಖ್ಯೆ ಕಡಿಮೆ ಏನಿಲ್ಲ. ರೈಲ್ವೆ ಇಲಾಖೆ ಶಿವಮೊಗ್ಗದಿಂದ ತಿರುಪತಿಗೆ ನೇರ ರೈಲ್ವೆ ಸಂಪರ್ಕ ಕಲ್ಪಿಸಿದೆ. ಇದಕ್ಕೆ ಉತ್ತಮ ಪ್ರತಿಕ್ರಿಯೆಯು ವ್ಯಕ್ತವಾಗುತ್ತಿದೆ. ಈಗ ಇದೆ ಮಾರ್ಗದಲ್ಲಿ ವಿಮಾನ ಹಾರಾಟ ನಡೆಸಲಿದೆ. ಇದೆ ಕಾರಣಕ್ಕೆ ತಿರುಪತಿಗೆ ತೆರಳುವ ವಿಮಾನದ ಕುರಿತು ಜನ ವಿಚಾರಣೆ ನಡೆಸುತ್ತಿದ್ದಾರೆ. ಬೆಳಗ್ಗೆ 11 ಗಂಟೆಗೆ ಶಿವಮೊಗ್ಗದಿಂದ ಹೊರಡಲಿದೆ. ಮಧ್ಯಾಹ್ನ ತಲುಪಿದಾಗ ದರ್ಶನವಾಗುತ್ತದೆಯೋ ಇಲ್ಲವೋ ಎಂಬುದರ ಕುರಿತು ಜನಕ್ಕೆ ಗೊಂದಲವಿದೆ.

ಇದನ್ನೂ ಓದಿ – ಶಿವಮೊಗ್ಗ TO ಹೈದರಾಬಾದ್‌, ಗೋವಾ, ತಿರುಪತಿ ವಿಮಾನದ ಹಾರಾಟದ ದಿನಾಂಕ ಬದಲು, ಯಾವುದು ಹೊಸ ಡೇಟ್‌?

ವೀಕೆಂಡ್‌ನಲ್ಲಿ ಶಿವಮೊಗ್ಗದಿಂದ ಗೋವಾಗೆ ತೆರಳುವವರ ಸಂಖ್ಯೆ ದೊಡ್ಡದಿದೆ. ಈಗ ವಿಮಾನಯಾನ ಸೇವೆ ಆರಂಭವಾಗುತ್ತಿರುವುದು ‘ಗೋವಾ ಪ್ರಿಯ’ರಿಗೆ ಅನುಕೂಲವಾಗಲಿದೆ. ಇದೇ ಕಾರಣಕ್ಕೆ ಗೊವಾಗೆ ತೆರಳುವವರು ಈಗಾಗಲೆ ಬುಕಿಂಗ್‌ ಕೂಡ ಆರಂಭಿಸಿದ್ದಾರೆ.

ಶಿವಮೊಗ್ಗದಿಂದ ಸದ್ಯ ಮೂರು ಹೊಸ ಮಾರ್ಗಗಳಲ್ಲಿ ವಿಮಾನಯಾನ ಆರಂಭವಾಗುತ್ತಿದೆ. ಮತ್ತಷ್ಟು ಮಾರ್ಗಗಳಿಗೆ ವಿಮಾನ ಹಾರಾಟ ಶುರುವಾಗುವ ನಿರೀಕ್ಷೆ ಇದೆ. ಅಲ್ಲದೆ ಮಧ್ಯೆ ಕರ್ನಾಟಕದ ಪಾಲಿಗೆ ಶಿವಮೊಗ್ಗ ವಿಮಾನ ನಿಲ್ದಾಣ ಪ್ರಮುಖ ಸಂಪರ್ಕ ಕೇಂದ್ರವಾಗಲಿದೆ.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : October 20, 2023

ಶಿವಮೊಗ್ಗದಲ್ಲಿ ಅತಿ ಕೆಳಗೆ ಹಾರಿದ ವಿಮಾನ, ಎರಡು ಟ್ರಿಪ್‌ ಹಾರಾಟ, ಕಾರಣವೇನು?

ಶಿವಮೊಗ್ಗದಲ್ಲಿ ಅತಿ ಕೆಳಗೆ ಹಾರಿದ ವಿಮಾನ, ಎರಡು ಟ್ರಿಪ್‌ ಹಾರಾಟ, ಕಾರಣವೇನು?

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಚಾಕು ತೋರಿಸಿ ಬೆದರಿಕೆ ಹಾಕಿ ದರೋಡೆ, ಎಲ್ಲಿ? ಆಗಿದ್ದೇನು?

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಚಾಕು ತೋರಿಸಿ ಬೆದರಿಕೆ ಹಾಕಿ ದರೋಡೆ, ಎಲ್ಲಿ? ಆಗಿದ್ದೇನು?

ಎಸ್ಸೆಸ್ಸೆಲ್ಸಿ ಪರೀಕ್ಷೆ, 192 ವಿದ್ಯಾರ್ಥಿಗಳು ಗೈರು, ಹೇಗಿತ್ತು ಮೊದಲ ದಿನದ ಪರೀಕ್ಷೆ?

ಎಸ್ಸೆಸ್ಸೆಲ್ಸಿ ಪರೀಕ್ಷೆ, 192 ವಿದ್ಯಾರ್ಥಿಗಳು ಗೈರು, ಹೇಗಿತ್ತು ಮೊದಲ ದಿನದ ಪರೀಕ್ಷೆ?

ಕುಡಿಗೆರೆಯಲ್ಲಿ ಅಧಿಕಾರಿಗಳ ದಾಳಿ, ಮೂವರ ವಿರುದ್ಧ ದಾಖಲಾಯ್ತು ಕೇಸ್‌, ಕಾರಣವೇನು?

ಕುಡಿಗೆರೆಯಲ್ಲಿ ಅಧಿಕಾರಿಗಳ ದಾಳಿ, ಮೂವರ ವಿರುದ್ಧ ದಾಖಲಾಯ್ತು ಕೇಸ್‌, ಕಾರಣವೇನು?

ಶಿವಮೊಗ್ಗ ಜಿಲ್ಲೆಯಲ್ಲಿ ತಂಪು ತಂಪು ವಾತಾವರಣ, ಇವತ್ತೂ ಬರುತ್ತಾ ಮಳೆ?

ಶಿವಮೊಗ್ಗ ಜಿಲ್ಲೆಯಲ್ಲಿ ತಂಪು ತಂಪು ವಾತಾವರಣ, ಇವತ್ತೂ ಬರುತ್ತಾ ಮಳೆ?

ಶಿವಮೊಗ್ಗ ಸಿಟಿಯಲ್ಲಿ ಭಾರಿ ಮಳೆ, ಎಲ್ಲೆಲ್ಲಿ ಏನೇನು ಹಾನಿಯಾಗಿದೆ? ಇಲ್ಲಿದೆ ಡಿಟೇಲ್ಸ್‌

ಶಿವಮೊಗ್ಗ ಸಿಟಿಯಲ್ಲಿ ಭಾರಿ ಮಳೆ, ಎಲ್ಲೆಲ್ಲಿ ಏನೇನು ಹಾನಿಯಾಗಿದೆ? ಇಲ್ಲಿದೆ ಡಿಟೇಲ್ಸ್‌

ಇವತ್ತು ಯಾವ್ಯಾವ ಅಡಿಕೆಗೆ ಎಷ್ಟಿದೆ ರೇಟ್‌? – 18 ಮಾರ್ಚ್‌ 2026 – ಅಡಿಕೆ ಧಾರಣೆ

ಇವತ್ತು ಯಾವ್ಯಾವ ಅಡಿಕೆಗೆ ಎಷ್ಟಿದೆ ರೇಟ್‌? – 18 ಮಾರ್ಚ್‌ 2026 – ಅಡಿಕೆ ಧಾರಣೆ

ಶಿವಮೊಗ್ಗ ಸಿಟಿಯಲ್ಲಿ ಆಲಿಕಲ್ಲು ಸಹಿತ ಮಳೆ, ಜೋರು ಗಾಳಿ, ಗುಡುಗಿನ ಅಬ್ಬರ

ಶಿವಮೊಗ್ಗ ಸಿಟಿಯಲ್ಲಿ ಆಲಿಕಲ್ಲು ಸಹಿತ ಮಳೆ, ಜೋರು ಗಾಳಿ, ಗುಡುಗಿನ ಅಬ್ಬರ

ಶಿಕ್ಷಕನ ಅಮಾನತು, ಇಲಾಖೆ ವಿಚಾರಣೆಗೆ ಆದೇಶಿಸಿದ ಡಿಡಿಪಿಐ, ಕಾರಣವೇನು?

ಶಿಕ್ಷಕನ ಅಮಾನತು, ಇಲಾಖೆ ವಿಚಾರಣೆಗೆ ಆದೇಶಿಸಿದ ಡಿಡಿಪಿಐ, ಕಾರಣವೇನು?

ಶಿವಮೊಗ್ಗ ಜಿಲ್ಲೆಯಲ್ಲಿ ತಂಪು ತಂಪು ವಾತಾವರಣ, ಇವತ್ತು ಎಷ್ಟಿರಲಿದೆ ತಾಪಮಾನ?

ಶಿವಮೊಗ್ಗ ಜಿಲ್ಲೆಯಲ್ಲಿ ತಂಪು ತಂಪು ವಾತಾವರಣ, ಇವತ್ತು ಎಷ್ಟಿರಲಿದೆ ತಾಪಮಾನ?

Leave a Comment