SHIVAMOGGA LIVE NEWS | 24 DECEMBER 2023
ಶಿವಮೊಗ್ಗ ಲೈವ್ನ ಪ್ರತಿ ಅಪ್ಡೇಟ್ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್ಗಳನ್ನು ಜಾಯಿನ್ ಆಗಿ:
SHIMOGA : ಮೀಶೋ ಆನ್ಲೈನ್ ಶಾಪಿಂಗ್ ಸಂಸ್ಥೆ ಹೆಸರು ದುರ್ಬಳಕೆ ಮಾಡಿಕೊಂಡು ಬಹುಮಾನ ಬಂದಿದೆ ಎಂಬ ಅಂಚೆ ಕಳುಹಿಸಿ ಹೊಸನಗರ ತಾಲೂಕಿನ ರೈತನೊಬ್ಬನಿಗೆ 13.97 ಲಕ್ಷ ರೂ. ವಂಚಿಸಲಾಗಿದೆ. 15.50 ಲಕ್ಷ ರೂ. ಬಹುಮಾನ ಬಂದಿದೆ ಎಂದು ಪತ್ರ ಬಂದಿತ್ತು. ಇದನ್ನು ನಂಬಿದ ರೈತ (ಹೆಸರು ಗೌಪ್ಯ) ಪತ್ರದಲ್ಲಿದ್ದ ಹೆಲ್ಪ್ಲೈನ್ ನಂಬರ್ಗೆ ಕರೆ ಮಾಡಿದ್ದರು.
ಮೀಶೋ ಸಂಸ್ಥೆಯ ಸಿಆರ್ಒ ಎಂದು ಮಾತನಾಡಿದ ವ್ಯಕ್ತಿ ವಾಟ್ಸಪ್ನಲ್ಲಿ ದಾಖಲೆ ಕಳುಹಿಸುವಂತೆ ತಿಳಿಸಿದ್ದ. ಅದರಂತೆ ರೈತ ತನ್ನ ತಾಯಿಯ ಮತದಾನ ಗುರುತಿನ ಚೀಟಿಯ ದಾಖಲೆ ಕಳುಹಿಸಿದ್ದ. ಬಳಿಕ ಕರೆ ಮಾಡಿದ ವ್ಯಕ್ತಿಗಳು ಬಹುಮಾನದ ಹಣಕ್ಕೆ ತೆರಿಗೆ ಕಟ್ಟಬೇಕು, ಶೇ.1ರಷ್ಟು ಹಣವನ್ನು ಪಾವತಿಸಬೇಕು, ಲಂಚ ಕೋಡಬೇಕು, ಬಹುಮಾನದ ಹಣ ಡಬಲ್ ಆಗಿದ್ದು ಬ್ಯಾಂಕ್ಗೆ ತೆರಿಗೆ ಪಾವತಿಸಬೇಕು ಸೇರಿದಂತೆ ನಾನಾ ಕಾರಣ ಹೇಳಿ ರೈತನಿಂದ ಹಣ ಪಡೆದಿದ್ದಾರೆ.
ವಿವಿಧ ಬ್ಯಾಂಕ್ ಖಾತೆಗಳಿಗೆ ರೈತ ಒಟ್ಟು 13,97,938 ರೂ. ಹಣ ಕಟ್ಟಿದ್ದಾರೆ. ವಂಚನೆಗೊಳಗಾದ ಅರಿವಾದ ನಂತರ ರೈತ ದೂರು ನೀಡಿದ್ದಾರೆ. ಶಿವಮೊಗ್ಗದ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ – ಕುವೆಂಪು ವಿಶ್ವವಿದ್ಯಾಲಯದ ವೆಬ್ಸೈಟ್ ಹ್ಯಾಕ್, ಇದೇ ಮೊದಲಲ್ಲಿ ಇಂತಹ ಕೃತ್ಯ, ಹ್ಯಾಕ್ ಮಾಡಿದ್ಯಾರು?
LATEST NEWS
- ಮಹಿಳೆಯರೆ ಎಚ್ಚರ, ಶಿವಮೊಗ್ಗ KSRTC ನಿಲ್ದಾಣದಲ್ಲಿ ಬಸ್ ಹತ್ತುವಾಗ ಹುಷಾರ್, ಆಗಿದ್ದೇನು?

- ಶಿವಮೊಗ್ಗದಲ್ಲಿ ಆಟೋ ಪಲ್ಟಿ, ಗ್ಲಾಸ್ ಪೀಸ್ ಪೀಸ್, ಮುಂಭಾಗ ಜಖಂ, ಕಾರಣವೇನು?

- ಶಿವಮೊಗ್ಗಕ್ಕೆ ಬರ್ತಿದ್ದಾರೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಎಲ್ಲೆಲ್ಲಿ ತೆರಳಲಿದ್ದಾರೆ?

- ಹಸಿದ ಚಿರತೆ ಮರಿ ರಕ್ಷಣೆ, ತಾಯಿ ಚಿರತೆಯ ಭೀತಿಯಲ್ಲಿ ಜನ, ಎಲ್ಲಿ? ಏನಿದು ಪ್ರಕರಣ?

- ನಗದು ತುಂಬಿದ್ದ ಪರ್ಸ್ ವಾರಸುದಾರರಿಗೆ ವಾಪಸ್, ಆಯನೂರು ನಿವಾಸಿಗಳ ಕಾರ್ಯಕ್ಕೆ ಮೆಚ್ಚುಗೆ

About The Editor
ನಿತಿನ್ ಆರ್.ಕೈದೊಟ್ಲು






