ತೀರ್ಥಹಳ್ಳಿ: ನೊಣಬೂರು ಗ್ರಾಮದ ಅಂಬುತೀರ್ಥ ಅರಣ್ಯ ಪ್ರದೇಶದಲ್ಲಿ ಅತಂತ್ರವಾಗಿದ್ದ ಚಿರತೆ ಮರಿಯನ್ನು (leopard cub) ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಗ್ರಾಮಸ್ಥರು ಸೇರಿ ಯಶಸ್ವಿಯಾಗಿ ರಕ್ಷಿಸಿದ್ದಾರೆ. ಆಹಾರದ ಅಭಾವದಿಂದ ಕೂಗುತ್ತಿದ್ದ ಮರಿಯು ನಾಯಿಗಳ ದಾಳಿಗೆ ತುತ್ತಾಗುವ ಸಾಧ್ಯತೆಯಿತ್ತು.
ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಸ್ಥಳೀಯರು ಮರಿಯನ್ನು ಸುರಕ್ಷಿತವಾಗಿ ಪತ್ತೆಹಚ್ಚಿ, ಹೆಚ್ಚಿನ ಚಿಕಿತ್ಸೆಗಾಗಿ ಇಲಾಖೆಯ ವಶಕ್ಕೆ ಒಪ್ಪಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಈ ಭಾಗದಲ್ಲಿ ಚಿರತೆಯೊಂದು ಪ್ರಾಣಿಗಳಿಗೆ ಹೊಂಚು ಹಾಕುತ್ತಿತ್ತು. ಒಂದೆರಡು ಹಸುಗಳನ್ನು ಬೇಟೆಯಾಡಿರುವ ಶಂಕೆಯೂ ಇತ್ತು.

ಅಧಿಕಾರಿ ವಿಕ್ರಂ ಚೇತನ್ ನೇತೃತ್ವದಲ್ಲಿ ಪಂಚಾಯತ್ ಸದಸ್ಯರು ಹಾಗೂ ಗ್ರಾಮಸ್ಥರು ನಡೆಸಿದ ಜಂಟಿ ಕಾರ್ಯಾಚರಣೆಯಿಂದ ಈಗ ಮರಿ ರಕ್ಷಣೆಯಾಗಿದೆ. ಆದರೆ ಮರಿಯನ್ನು ಕಳೆದುಕೊಂಡ ತಾಯಿ ಚಿರತೆ ಗ್ರಾಮದ ಸುತ್ತಮುತ್ತಲೇ ಹುಡುಕಾಟ ನಡೆಸುವ ಸಾಧ್ಯತೆ ಇದೆ. ಸಾರ್ವಜನಿಕರು ಜಾಗರೂಕರಾಗಿ ಇರುವಂತೆ ಅರಣ್ಯ ಇಲಾಖೆಯು ಎಚ್ಚರಿಕೆ ನೀಡಿದೆ.
ಅರಣ್ಯ ಇಲಾಖೆ ಅಧಿಕಾರಿ ವಿಕ್ರಂ ಚೇತನ್ ನೇತೃತ್ವದಲ್ಲಿ ಸಿಬ್ಬಂದಿ ವಿಧ್ವಾನ್, ದಿನೇಶ್, ಪಂಚಾಯತ್ ಸದಸ್ಯರಾದ ನಾಗರಾಜ್, ಅರುಣ್ ಮಲ್ಲೇಸರ, ಚಂದ್ರಮತಿ ಮಂಜುನಾಥ್, ಗ್ರಾಮಸ್ಥರಾದ ನಾಗೇಶ್ ಅಡಿಗರು, ಅನಂತರಾಮ್, ಶಿವಣ್ಣ, ಪಾಂಡುರಂಗ ಸೇರಿ ಹಲವು ಚಿರತೆ ಮರಿ ರಕ್ಷಣೆ ಕಾರ್ಯಾಚರಣೆ ನಡೆಸಿದರು.
ಇದನ್ನೂ ಓದಿ – ನಗದು ತುಂಬಿದ್ದ ಪರ್ಸ್ ವಾರಸುದಾರರಿಗೆ ವಾಪಸ್, ಆಯನೂರು ನಿವಾಸಿಗಳ ಕಾರ್ಯಕ್ಕೆ ಮೆಚ್ಚುಗೆ


About The Editor
ನಿತಿನ್ ಆರ್.ಕೈದೊಟ್ಲು






