ಆನಂದಪುರ ಬಳಿ ಅಪಘಾತದಲ್ಲಿ ತೀವ್ರ ಗಾಯಗೊಂಡು ಯಕ್ಷಗಾನ ಭಾಗವತ ಸಾವು

No.1 News Website
 ಶಿವಮೊಗ್ಗ ಲೈವ್‌ 
ಮಲೆನಾಡು ಭಾಗದಲ್ಲಿ ಅತಿ ಹಚ್ಚು ಓದುಗರು ಮತ್ತು ಅತಿ ಹೆಚ್ಚು ವಿವ್ಸ್‌ ಹೊಂದಿರುವ ವೆಬ್‌ಸೈಟ್‌. ನೀವು ನಮ್ಮ ವಾಟ್ಸಪ್‌ ಗ್ರೂಪ್‌ ಸೇರಲು » ಇಲ್ಲಿ ಕ್ಲಿಕ್‌ ಮಾಡಿ.

shivamogga-live-logo-with-120-by-650-pixel-size.webp

SHIVAMOGGA LIVE NEWS | 26 JUNE 2024

SAGARA : ಬೈಕ್ ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ಯಕ್ಷಗಾನ (Yakshagana) ಭಾಗವತ ವೇಣುಗೋಪಾಲ್ (35) ಕೊನೆಯುಸಿರೆಳೆದಿದ್ದಾರೆ.

ಪುರಪ್ಪೆಮನೆ ಕೆಳಮನೆ ಗ್ರಾಮದ ವೇಣುಗೋಪಾಲ್‌ ಅವರು ಸೋಮವಾರ ರಾತ್ರಿ ಬೈಕ್‌ನಲ್ಲಿ ಮನೆಗೆ ಬರುತ್ತಿದ್ದಾಗ ಆನಂದಪುರ ಸಮೀಪದ ಗಡಿಕಟ್ಟೆಯಲ್ಲಿ ಹೋರಿ ಅಡ್ಡಬಂದಿದೆ. ಈ ಸಂದರ್ಭ ಬೈಕ್‌ನಿಂದ ಬಿದ್ದು ತಲೆಗೆ ತೀವ್ರ ಪೆಟ್ಟಾಗಿತ್ತು. ಆಸ್ಪತ್ರೆಗೆ ಸಾಗಿಸುವಾಗ ಸಾವಿಗೀಡಾಗಿದ್ದಾರೆ.

Yakshagana-Bhagavatha-Venugopal-succumbed-in-an-accident.

ಇವರು ಕೆಳಮನೆ ಮೇಳದ ಭಾಗವತ ಕೆ.ಜಿ.ರಾಮರಾವ್ ಅವರ ಪುತ್ರ. ಇವರೂ ಸಹ ಸಿಗಂದೂರು ಮೇಳದ ಪ್ರಮುಖ ಭಾಗವತರಾಗಿದ್ದರು. ಸಾಲಿಗ್ರಾಮ ಮೇಳ, ಮಂದಾರ್ತಿ ಮೇಳ ಸೇರಿದ ಹಲವು ಮೇಳಗಳಲ್ಲಿ ಭಾಗವತರಾಗಿದ್ದರು. ವಿವಿಧ ರಾಗಗಳನ್ನು ಸ್ಪಷ್ಟವಾಗಿ ಹಾಡುವ ಉತ್ತಮ ಕಂಠ ಹೊಂದಿದ್ದರು.

ಇದನ್ನೂ ಓದಿ – ಹಾಲಿನ ಕ್ಯಾಂಟರ್‌, ಓಮ್ನಿ ಕಾರು ಮುಖಾಮುಖಿ ಡಿಕ್ಕಿ, ಒಬ್ಬ ಸಾವು

 

ಶಿವಮೊಗ್ಗದಲ್ಲಿ ಏನೇನಾಯ್ತು? ಇಲ್ಲಿವೆ ಸುದ್ದಿಗಳು. ಕೆಳಗಿರುವ ಹೆಡ್‌ಲೈನ್‌ ಮೇಲೆ ಕ್ಲಿಕ್‌ ಮಾಡಿ, ಸುದ್ದಿ ಓದಿ.

Number 1 News Website in shimoga - Shivamogga Live

 

Leave a Comment