THIRTHAHALLI, 17 AUGUST 2024 : ಮಳೆ ಕಾಡು ಅಧ್ಯಯನಕ್ಕೆ ಆಸ್ಟ್ರೇಲಿಯಾ ದೇಶದ ಭಾರತೀಯ ಹೈಕಮಿಷನರ್ (High-Commissioner ) ಫಿಲಿಪ್ ಗ್ರೀನ್ ಮತ್ತು ಅವರ ಕುಟುಂಬ ತೀರ್ಥಹಳ್ಳಿ ತಾಲೂಕು ಆಗುಂಬೆಗೆ ಭೇಟಿ ನೀಡಿದೆ.
ಫಿಲಿಪ್ ಗ್ರೀನ್ ಮತ್ತು ಅವರ ಕುಟುಂಬ ಶುಕ್ರವಾರ ಆಗುಂಬೆ ಘಾಟಿಗೆ ಭೇಟಿ ನೀಡಿತ್ತು. ಇಲ್ಲಿನ ಸನ್ ಸೆಟ್ ಪಾಯಿಂಟ್ಗೆ ತೆರಳಿ ಪಶ್ಚಿಮಘಟ್ಟದ ವೈಭವ ಕಣ್ತುಂಬಿಕೊಂಡರು. ಈ ಸಂದರ್ಭ ಅರಣ್ಯ ಇಲಾಖೆ ಅಧಿಕಾರಿಗಳ ಜೊತೆಗೆ ಸೆಲ್ಫಿ, ಫೋಟೊ ಕ್ಲಿಕ್ಕಿಸಿಕೊಂಡರು.
ಆಸ್ಟ್ರೇಲಿಯಾದ ಭಾರತೀಯ ಹೈಕಮಿಷನರ್ ಫಿಲಿಪ್ ಗ್ರಿನ್ ಮೂರು ದಿನದ ಪ್ರವಾಸ ಕೈಗೊಂಡಿದ್ದಾರೆ. ಆಗುಂಬೆ ಭಾಗದ ವಿವಿಧೆಡೆ ಭೇಟಿ, ಟ್ರೆಕಿಂಗ್, ಕಾಳಿಂಗ ಸರ್ಪಗಳ ಕುರಿತು ಅಧ್ಯಯನ ನಡೆಸುವ ಕಾಳಿಂಗ ಫೌಂಡೇಶನ್ಗೆ ಭೇಟಿ ನೀಡಿ ಮಾಹಿತಿ ಪಡೆಯಲಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ ⇒ ಶಿವಮೊಗ್ಗದ ಶಿವಪ್ಪನಾಯಕ ಪ್ರತಿಮೆ ಮುಂದೆ ರಾತ್ರೋರಾತ್ರಿ ಪ್ರತ್ಯಕ್ಷವಾಗುತ್ತೆ ಫಲಕ, ಇದನ್ನು ಹಾಕೋದ್ಯಾರು ಗೊತ್ತಾ?
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200