DASARA NEWS, 12 OCTOBER 2024 : ಶಿವಮೊಗ್ಗ ದಸರಾದಲ್ಲಿ ಇವತ್ತು ಜಂಬೂ ಸವಾರಿ ನಡೆಯಲಿದೆ. ನಾಡದೇವಿ ಚಾಮುಂಡೇಶ್ವರಿಯ ವಿಗ್ರಹ ಇರುವ ಬೆಳ್ಳಿ ಮಂಟಪವನ್ನು ಹೊತ್ತು ಸಾಗರ ಆನೆ ಹೆಜ್ಜೆ ಹಾಕಲಿದೆ. ಅದ್ಧೂರಿ ಮೆರವಣಿಗೆ ಕಣ್ತುಂಬಿಕೊಳ್ಳಲು ಶಿವಮೊಗ್ಗಸೇರಿದಂತೆ ಹೊರ ಊರುಗಳಿಂದ ಜನ ಸೇರಲಿದ್ದಾರೆ.
ಮೈಸೂರಿನ ನಂತರ ಶಿವಮೊಗ್ಗ ದಸರಾ ಅತಿ ಹೆಚ್ಚು ವಿಜೃಂಭಣೆಯಿಂದ ನಡೆಯುತ್ತದೆ. ಅಲ್ಲದೆ ನಾಡಿನಾದ್ಯಂತ ಖ್ಯಾತಿ ಗಳಿಸಿದೆ.
ಗೊತ್ತಿರಬೇಕಾದ 5 ಪ್ರಮುಖಾಂಶಗಳು
1980ರ ದಶಕಕ್ಕು ಮೊದಲು ನಾಡಹಬ್ಬ ದಸರಾ ಅಚರಣೆ ಮನೆಗಳು, ದೇವಸ್ಥಾನಗಳಿಗೆ ಸೀಮಿತವಾಗಿತ್ತು. ಮನೆಗಳಲ್ಲಿ ಹಬ್ಬ ಆಚರಿಸಿ, ಪ್ರಮುಖ ದೇಗುಲಗಳಲ್ಲಿ ಅಂಬು ಕಡಿದು ನವರಾತ್ರಿ ಆಚರಣೆ ಮಾಡಲಾಗುತ್ತಿತ್ತು.
ಪುಟ್ಟಪ್ಪ ಅವರು ಶಿವಮೊಗ್ಗ ನಗರಸಭೆ ಅಧ್ಯಕ್ಷರಾದಾಗ ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಲಾಗುತ್ತಿತ್ತು. ಆ ಹಣದಲ್ಲಿ ಸಾರ್ವಜನಿಕ ದಸರಾ ಆಚರಣೆ ಮಾಡಲಾಗುತ್ತಿತ್ತು. ಹಿರಿಯ ಪತ್ರಕರ್ತ ನಾಗೇಂದ್ರ ರಾವ್ ಅವರು ನಗರಸಭೆ ಅಧ್ಯಕ್ಷರಾದಾಗ ಸೈನ್ಸ್ ಮೈದಾನದಿಂದ ಮೆರವಣಿಗೆ ನಡೆಸುವ ಪದ್ಧತಿ ಆರಂಭವಾಯಿತು.
ಸಿದ್ದರಾಮಣ್ಣ ಅವರು ನಗರಸಭೆ ಅಧ್ಯಕ್ಷರಾಗಿದ್ದ ಸಂದರ್ಭ ಶಿವಪ್ಪನಾಯಕ ಅರಮನೆ ಕೇಂದ್ರಿತವಾಗಿ ಮೂರು ದಿನ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆ ಬಳಿಕ ಶಿವಪ್ಪನಾಯಕ ಅರಮನೆ ಮುಂಭಾಗದಿಂದ ದಸರಾ ಮೆರವಣಿಗೆ ನಡೆಸಲಾಯಿತು. ಈಚೆಗೆ ಹತ್ತು ದಿನದ ದಸರಾ ಆಚರಣೆ ಆರಂಭವಾಯಿತು. ಆನೆಗಳ ಮೇಲೆ ಅಂಬಾರಿ ಹೊರಿಸುವ ಕಾರ್ಯವು ಶುರುವಾಯಿತು.
ಶಿವಮೊಗ್ಗದ ಮಾರ್ನಮಿ ಬೈಲಿನಲ್ಲಿ ಮೊದಲು ವಿಜಯದಶಮಿ ಆಚರಿಸಲಾಗುತ್ತಿತ್ತು. ಆ ಬಳಿಕ ನಗರಸಭೆ ಆವರಣಕ್ಕೆ ಶಿಫ್ಟ್ ಆಯಿತು. ಅಲ್ಲಿ ಅಂಬು ಕಡಿಯಲಾಗುತ್ತಿತ್ತು. ಹೆಚ್ಚು ಜನ ಸೇರುವುದರಿಂದ ನೆಹರೂ ಕ್ರೀಡಾಂಗಣಕ್ಕೆ ವರ್ಗಾಯಿಸಲಾಯಿತು. ಸಿಂಥಟಿಕ್ ಟ್ರ್ಯಾಕ್ ಮತ್ತು ವಿವಿಧ ಅಭಿವೃದ್ಧಿ ಕಾರ್ಯಗಳ ಹಿನ್ನೆಲೆ ನೆಹರೂ ಕ್ರೀಡಾಂಗಣದಿಂದ ಕುವೆಂಪು ರಂಗಮಂದಿರದ ಹಿಂಭಾಗದ ಎನ್ಇಎಸ್ ಮೈದಾನಕ್ಕೆ ಅಂಬು ಕಡಿಯುವ ಕಾರ್ಯಕ್ರಮ ವರ್ಗವಾಯಿತು. ಈಗ ಫ್ರೀಡಂ ಪಾರ್ಕ್ನಲ್ಲಿ (ಅಲ್ಲಮ ಪ್ರಭು ಮೈದಾನ) ಅಂಬು ಕಡಿಯುವ ಕಾರ್ಯಕ್ರಮ ನಡೆಯುತ್ತಿದೆ.
ಶಿವಮೊಗ್ಗ ದಸರಾ ಮೆರವಣಿಗೆಯಲ್ಲಿ ಮೊದಲು ದೇವತೆಗಳಷ್ಟೆ ಭಾಗವಹಿಸುತ್ತಿದ್ದವು. ಆನಂತರ ದೇವಾನುದೇವತೆಗಳು ಭಾಗವಹಿಸುತ್ತಿವೆ. ಈಚೆಗೆ 150ಕ್ಕಿಂತಲೂ ಹೆಚ್ಚು ದೇವಾನುದೇವತೆಗಳು ಮೆರವಣಿಗೆಯಲ್ಲಿ ಭಾಗವಹಿಸುತ್ತಿವೆ.
ಲೋಕಲ್ ಸುದ್ದಿಗಳು ಲೋಕಕ್ಕೆ ತಿಳಿಸಬೇಕು ಅಂತಾ ನ್ಯೂಸ್ ಚಾನೆಲ್ ದುನಿಯಾದಿಂದ ಹೊರ ಬಂದು ಶಿವಮೊಗ್ಗ ಲೈವ್ ಕಟ್ಟಿದ್ದೇವೆ. ಸ್ಥಳೀಯ ಪತ್ರಿಕೆ, ಕೇಬಲ್ ಚಾನೆಲ್, ರಾಜ್ಯಮಟ್ಟದ ಪತ್ರಿಕೆ, ನ್ಯೂಸ್ ಚಾನೆಲ್’ಗಳ ಬೆಂಗಳೂರು ಕಚೇರಿಯಲ್ಲಿ ವರ್ಷಗಟ್ಟಲೆ ಕೆಲಸ ಮಾಡಿದ್ದೇನೆ.
ಈ ಫೀಲ್ಡಲ್ಲಿ ಹತ್ತು ವರ್ಷಕ್ಕೂ ಹೆಚ್ಚು ಕಾಲದ ಅನುಭವವಿದೆ. ಹಾಗಾಗಿ ಪೇಪರ್, ಟಿವಿಗಳಿಗಿಂತಲೂ ವಿಭಿನ್ನವಾಗಿ ಸುದ್ದಿ ಕೊಡಬೇಕು ಅನ್ನುವ ಹಂಬಲ. ಅದರ ಪ್ರಯತ್ನ ನಿರಂತರವಾಗಿದೆ.ಕ್ವಾಲಿಟಿ ಮತ್ತು ನಿಖರತೆಗೆ ಮೊದಲ ಆದ್ಯತೆ. ಸುದ್ದಿಯ ಒಳಗೆ ನನ್ನ ಅಭಿಪ್ರಾಯ ಹೇರುವುದಕ್ಕೆ ಇಷ್ಟವಿಲ್ಲ. ಸುದ್ದಿಯನ್ನು ಸುದ್ದಿಯಾಗಷ್ಟೆ ಕೊಡಬೇಕು ಎಂಬುದು ನನ್ನ ವಾದ. ಹೀಗಿದ್ದೂ ಕೆಲವೊಮ್ಮೆ ಸುದ್ದಿ ಕೆಳಗೆ ‘ಡ್ಯಾಷ್ ಡ್ಯಾಷ್ ಡ್ಯಾಷ್’ ಅಂತೆಲ್ಲ ಕಮೆಂಟುಗಳು ಬರುತ್ತವೆ. ಆರಂಭದಲ್ಲಿದ್ದ ಟೆಂಪರ್ ಈಗಿಲ್ಲ. ಹಾಗಾಗಿ ರಿಯಾಕ್ಟ್ ಮಾಡಲ್ಲ..!ನಿಮ್ಮೂರ ಸುದ್ದಿಗಳಿದ್ದರೆ ತಿಳಿಸಿ. ಹಣ ಪಡೆದು ಸುದ್ದಿ ಮಾಡುವ ಹವ್ಯಾಸ, ಅಭ್ಯಾಸ ಎರಡೂ ಇಲ್ಲ. ಇನ್ನಷ್ಟು ವಿಭಿನ್ನ ಪ್ರಯತ್ನಗಳು, ನಮ್ಮೂರನ್ನು ಮತ್ತಷ್ಟು ಸುತ್ತಬೇಕು, ನಮ್ಮೂರ ಬಗ್ಗೆ ತಿಳಿದು ಜನರಿಗೆಲ್ಲ ತಿಳಿಸಬೇಕು ಅನ್ನುವ ತವಕವಿದೆ.ಅಂದಹಾಗೆ, ಹೊಸ ಐಡಿಯಾಗಳಿದ್ದರೆ, ಸಲಹೆಗಳಿದ್ದರೆ ತಿಳಿಸಿ.. ‘ಡ್ಯಾಷ್ ಡ್ಯಾಷ್’ ಬಯ್ಯೋದಿದ್ದರೆ ದಯವಿಟ್ಟು ವಾಟ್ಸಪ್’ನಲ್ಲಿ ಮೆಸೇಜು ಮಾಡಿ, ಸಾಕು..! ನನ್ನ ಮೊಬೈಲ್ ನಂಬರ್ 9964634494. ಸಿಕ್ಕಾಗ ತಪ್ಪದೆ ಮಾತಾಡಿಸಿ. ನಿಮ್ಮ ಸ್ನೇಹ ನಂಗೆ ಅಮೂಲ್ಯ.ಶಿವಮೊಗ್ಗದ ಸುದ್ದಿಗಾಗಿ ನಿರಂತರವಾಗಿ ಶಿವಮೊಗ್ಗ ಲೈವ್.ಕಾಂ ಓದುತ್ತಿರಿ