ಅಪಘಾತ ತಪ್ಪಿಸಲು ರಸ್ತೆ ಕ್ಲೀನ್‌ ಮಾಡಿದ ಶಿವಮೊಗ್ಗದ ಸಂಚಾರ ಪೊಲೀಸರು, ಆಗಿದ್ದೇನು?

ಶಿವಮೊಗ್ಗ : ರಸ್ತೆ ಮೇಲೆ ಆಯಿಲ್‌ (Oil) ಚೆಲ್ಲಿ ದ್ವಿಚಕ್ರ ವಾಹನಗಳು ಸ್ಕಿಡ್‌ ಆಗುತ್ತಿದ್ದರಿಂದ ಸಂಚಾರ ಠಾಣೆ ಪೊಲೀಸರೆ ರಸ್ತೆ ಕ್ಲೀನ್‌ ಮಾಡಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಶಿವಮೊಗ್ಗದ ಸಾಗರ ರಸ್ತೆಯ ಆಯನೂರು ಸರ್ಕಲ್‌ ಸಮೀಪ ಇಂದು ಸ್ವಚ್ಛತಾ ಕಾರ್ಯ ನಡೆಸಲಾಯಿತು.

ಕಳೆದ ಎರಡು ದಿನದ ಹಿಂದೆ ವಾಹನವೊಂದರಲ್ಲಿ ಆಯಿಲ್‌ ಸಾಗಿಸುತ್ತಿದ್ದಾಗ ಆಯನೂರು ಸರ್ಕಲ್‌ನಲ್ಲಿ ಚೆಲ್ಲಿತ್ತು. ಸರ್ಕಲ್‌ನಲ್ಲಿ ವಾಹನಗಳು ಸಾಗುವಾಗ ಸ್ಕಿಡ್‌ ಆಗುತ್ತಿತ್ತು. ಈ ಸಂಬಂಧ ದೂರು ಬಂದಿತ್ತು. ಅಪಘಾತಗಳು ಸಂಭವಿಸುವ ಸಾಧ್ಯತೆ ಇದ್ದರಿಂದ ಇವತ್ತು ಸಂಚಾರ ಪೊಲೀಸರು ಸ್ವಚ್ಛತಾ ಕಾರ್ಯ ಕೈಗೊಂಡರು.

Traffic-Police-clean-the-road-at-ayanuru-circle-in-Shimoga-sagara-road

ಆಯನೂರು ಸರ್ಕಲ್‌ನಲ್ಲಿ ಪಶ್ಚಿಮ ಸಂಚಾರ ಠಾಣೆ ಪೊಲೀಸರು ಟ್ಯಾಂಕರ್‌ನಲ್ಲಿ ನೀರು ತರಿಸಿ, ಆಯಿಲ್‌ ಚೆಲ್ಲಿದ್ದ ಕಡೆಯಲ್ಲೆಲ್ಲ ಹಾಯಿಸಿದ್ದಾರೆ. ರಸ್ತೆಯನ್ನು ಸ್ವಚ್ಛಗೊಳಿಸಿ ಸುಗಮನ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.

Parishrama new Advt
ಹೆಚ್ಚಿನ ಮಾಹಿತಿಗೆ ಈ ಫೋಟೊ ಮೇಲೆ ಕ್ಲಿಕ್‌ ಮಾಡಿ

ಪಶ್ಚಿಮ ಸಂಚಾರ ಠಾಣೆ ಪಿಎಸ್‌ಐ ತಿರುಮಲೇಶ್‌, ಎಆರ್‌ಎಸ್‌ಐ ಪ್ರಕಾಶ್‌, ಎಎಸ್‌ಐ ಮಂಜುನಾಥ್‌, ಹೆಡ್‌ ಕಾನ್ಸ್‌ಟೇಬಲ್‌ ಪ್ರವೀಣ್‌ ಪಟೇಲ್‌, ಕಾನ್‌ಸ್ಟೇಬಲ್‌ ಹರೀಶ್‌, ದಿನೇಶ್‌, ಪ್ರಶಾಂತ್‌ ಸ್ವಚ್ಛತಾ ಕಾರ್ಯ ನಡೆಸಿದರು.

NATIONAL-PUBLIC-SCHOOL-scaled

ಇದನ್ನೂ ಓದಿ » ತ್ಯಾವರೆಕೊಪ್ಪ ಮೃಗಾಲಯದ ಮತ್ತೊಂದು ಹುಲಿ ಸಾವು, ಈ ವರ್ಷದಲ್ಲಿ ಎರಡನೇ ಟೈಗರ್‌ ಕೊನೆಯುಸಿರು

Traffic-Police-clean-the-road-at-ayanuru-circle-in-Shimoga-sagara-road

Leave a Comment