ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿವಮೊಗ್ಗ : ಹೊಳೆಹೊನ್ನೂರು ಸುತ್ತಮುತ್ತ ಅಕ್ರಮವಾಗಿ ಗಾಂಜಾ, ಓ.ಸಿ, ಇಸ್ಪೀಟು, ಐಪಿಎಲ್ ಬೆಟ್ಟಿಂಗ್ (Betting) ದಂಧೆ ಅವ್ಯಾಹತವಾಗಿ ನಡೆಯುತ್ತಿದೆ. ಇದಕ್ಕೆ ಕಡಿವಾಣ ಹಾಕುವಂತೆ ಆಗ್ರಹಿಸಿ ಶಾಸಕಿ ಶಾರದಾ ಪೂರ್ಯಾನಾಯ್ಕ್, ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ ನೇತೃತ್ವದಲ್ಲಿ ಜಿಲ್ಲಾ ರಕ್ಷಣಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಇದನ್ನೂ ಓದಿ » ಶಿವಮೊಗ್ಗ, ಸಾಗರ, ಚಿಕ್ಕಮಗಳೂರು, ಹಾಸನದಲ್ಲಿ ಉದ್ಯೋಗ, ಯಾವೆಲ್ಲ ಹುದ್ದೆಗಳಿವೆ? ಯಾರೆಲ್ಲ ಅರ್ಜಿ ಸಲ್ಲಿಸಬಹುದು?
ಸ್ಥಳೀಯರ ಜೊತೆಗೆ ಜಿಲ್ಲಾ ಪೊಲೀಸ್ ಕಚೇರಿಗೆ ತೆರಳಿದ್ದ ಶಾಸಕರು ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.
ಬಲಿಯಾಗುತ್ತಿದ್ದಾರೆ ಮುಗ್ಧ ಜನರು

ಹೊಳೆಹೊನ್ನೂರಿನ ವಿವಿಧೆಡೆ 24 ಗಂಟೆಯು ದಂಧೆ ನಡೆಯುತ್ತಿದೆ. ಸರ್ಕಲ್ಗಳು, ಕೆಲವು ಹೊಟೇಲ್ಗಳು ಸೇರಿದಂತೆ ವಿವಿಧೆಡೆ ಬೆಟ್ಟಿಂಗ್ (Betting), ಓ.ಸಿ, ಇಸ್ಪೀಟ್ ದಂಧೆ ನಡೆಸಲಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದರು.
ಹೊಳೆಹೊನ್ನೂರು, ಆನವೇರಿ ಭಾಗದಲ್ಲಿ ಇಸ್ಪೀಟು, ಓ.ಸಿ ದಂಧೆಗಳು ನಡೆಯುತ್ತಿವೆ. ಆಡಲು ಹೋಗುವವರನ್ನು ಕರೆದೊಯ್ಯಲು ಪ್ರತ್ಯೇಕ ತಂಡವಿದೆ ಎಂದು ಪದೇ ಪದೆ ದೂರು ಬರುತಿತ್ತು. ಕಡಿವಾಣ ಹಾಕುವಂತೆ ಮನವಿ ಕೊಟ್ಟಿದ್ದೇವೆ. ಈ ದಂಧೆಗಳು ನಿಲ್ಲಿಸದೆ ಇದ್ದರೆ ಮುಂದಿನ ಪೀಳಿಗೆಗೆ ಮಾರಕವಾಗಲಿದೆ. ದಂಧೆಕೋರರ ಹೆಸರುಗಳನ್ನು ಹೇಳಿ ಎಂದು ಎಸ್.ಪಿ.ಯವರು ನಮ್ಮನ್ನೆ ಕೇಳುತ್ತಿದ್ದಾರೆ. ಅವರು ತನಿಖೆ ನಡೆಸಿ ಪತ್ತೆಹಚ್ಚಬೇಕು.
ಶಾರದಾ ಪೂರ್ಯಾನಾಯ್ಕ್, ಶಿವಮೊಗ್ಗ ಗ್ರಾಮಾಂತರ ಶಾಸಕಿ
ಓ.ಸಿ., ಇಸ್ಪೀಟು, ಆನ್ಲೈನ್ ಬೆಟ್ಟಿಂಗ್ ಮೂಲಕ ಜನರು ಲಕ್ಷಾಂತರ ರೂ. ಕಳೆದುಕೊಳ್ಳುತ್ತಿದ್ದಾರೆ. ಇದರಿಂದ ಮನೆತನಗಳೆ ಹಾಳಾಗುತ್ತಿವೆ. ಇಂತಹ ದಂಧೆಕೋರರ ಕುರಿತು ಮಾಹಿತಿ ಲಭ್ಯವಿದ್ದರೆ ಗೌಪ್ಯವಾಗಿ ಪೊಲೀಸರಿಗೆ ತಿಳಿಸಲು ಅವಕಾಶವಿದೆ. ಕಠಿಣ ಕ್ರಮವಾದರೆ ಮಾತ್ರ ಇದಕ್ಕೆ ಕಡಿವಾಣ ಬೀಳಲಿದೆ.
ಡಾ. ಧನಂಜಯ ಸರ್ಜಿ, ವಿಧಾನ ಪರಿಷತ್ ಸದಸ್ಯ
ಹಣದ ಆಸೆಗೆ ಮುಗ್ದ ಜನರು ಈ ದಂಧೆಗಳಿಗೆ ಬಲಿಯಾಗುತ್ತಿದ್ದಾರೆ. ಇದಕ್ಕೆ ಕೂಡಲೆ ಕಡಿವಾಣ ಹಾಕಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

LATEST NEWS
- ಭದ್ರಾವತಿ ಹುತ್ತಾ ಕಾಲೋನಿಯಲ್ಲಿ ಬೈಕ್ ಸಹಿತ ಚಾನಲ್ಗೆ ಬಿದ್ದ ವ್ಯಕ್ತಿ, ಆಗಿದ್ದೇನು?

- ಗೋಪಿ ಸರ್ಕಲ್ನಲ್ಲಿ ಡೊನಾಲ್ಡ್ ಟ್ರಂಪ್ ಹೇಳಿದಂತೆ ನರೇಂದ್ರ ಮೋದಿ ಡಾನ್ಸ್, ಸೌದೆ ಒಲೆ ಅಡುಗೆ

- ಶಿವಮೊಗ್ಗ ಜಿಲ್ಲೆಯ ಕಡಿಮೆಯಾದ ತಾಪಮಾನ, ಇವತ್ತು ಎಲ್ಲೆಲ್ಲಿ ಹೇಗಿರಲಿದೆ ವಾತಾವರಣ?

- ಶಿವಮೊಗ್ಗದ ಸೂಳೆಬೈಲ್ ಮಹಿಳೆ ಅರೆಸ್ಟ್, ₹18,00,000 ಮೊತ್ತದ ಆಭರಣ ಸೀಜ್, ಏನಿದು ಕೇಸ್?

- ಶಿವಮೊಗ್ಗ ವಿದ್ಯಾನಗರದಲ್ಲಿ ಅದ್ಧೂರಿ ಜಾತ್ರೆ, ಯಾವ್ಯಾವ ದಿನ ಏನೇನು ನಡೆಯಲಿದೆ? ಹೇಗಿದೆ ಸಿದ್ಧತೆ?

About The Editor
ನಿತಿನ್ ಆರ್.ಕೈದೊಟ್ಲು





