ವಿನೋಬನಗರದಲ್ಲಿರುವ ಸಂಸದ ಬಿ.ವೈ.ರಾಘವೇಂದ್ರ ಅವರ ಮನೆಗೆ (House) ಯುವ ಕಾಂಗ್ರೆಸ್ ಕಾರ್ಯಕರ್ತರು ಮುತ್ತಿಗೆ ಹಾಕಲು ಯತ್ನಿಸಿದರು.
ಬ್ಯಾರಿಕೇಡ್ ಹಾರಿದ ಕಾರ್ಯಕರ್ತರು
ಸಂಸದ ರಾಘವೇಂದ್ರ ನಿವಾಸಕ್ಕೆ ಹೋಗುವ ದಾರಿ ಉದ್ದಕ್ಕು ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಬ್ಯಾರಿಕೇಡ್ಗಳನ್ನು ಅಳವಡಿಸಲಾಗಿತ್ತು. ಬ್ಯಾರಿಕೇಡ್ ಬಳಿ ಬಂದ ಯುವ ಕಾಂಗ್ರೆಸ್ ಕಾರ್ಯಕರ್ತರು, ಅದನ್ನು ದಾಟಿ ಮುಂದಕ್ಕೆ ಹೋಗಲು ಯತ್ನಿಸಿದರು. ಈ ಸಂದರ್ಭ ಪೊಲೀಸರು ಮತ್ತು ಯುವ ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ನೂಕಾಟ, ತಳ್ಳಾಟ ಉಂಟಾಯಿತು. ಕೆಲವು ಕಾರ್ಯಕರ್ತರು ಬ್ಯಾರಿಕೇಡ್ ಹಾರಿ, ಸಂಸದ ರಾಘವೇಂದ್ರ ನಿವಾಸದತ್ತು ನುಗ್ಗಲು ಯತ್ನಿಸಿದರು.

ಇದನ್ನೂ ಓದಿ » ಗೋಪಿ ಸರ್ಕಲ್ನಲ್ಲಿ ಅಂಚೆ ಕಚೇರಿಗೆ ಮುತ್ತಿಗೆ, ಪೊಲೀಸರು, ಪ್ರತಿಭಟನಾಕಾರರ ಮಧ್ಯೆ ತಳ್ಳಾಟ, ಕಾರಣವೇನು?
ಕಾರ್ಯಕರ್ತರು ಪೊಲೀಸ್ ವಶಕ್ಕೆ
ಸಂಸದ ರಾಘವೇಂದ್ರ ಮನೆಗೆ ಮುತ್ತಿಗೆ ಹಾಕಿದ ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.
ಕಾಂಗ್ರೆಸ್ ಮುಖಂಡ ಕೆ.ರಂಗನಾಥ್, ಹೆಚ್.ಪಿ. ಗಿರೀಶ್, ಎಂ.ಪ್ರವೀಣ್ ಕುಮಾರ್, ಎಸ್.ಎಂ.ಶರತ್ ಮರಿಯಪ್ಪ, ಎಂ.ರಾಹುಲ್, ಎಸ್.ಬಸವರಾಜ್, ಕವಿತಾ ಸೇರಿ ಹಲವರು ಕಾರ್ಯಕರ್ತರು ಇದ್ದರು.


