ಹೊಳೆಹೊನ್ನೂರು: ರಿಪೇರಿಗೆಂದು ಕೊಂಡೊಯ್ದಿದ್ದ ಚಿನ್ನದ ಸರ ಕಣ್ಮರೆಯಾಗಿದೆ. ಚಿನ್ನದ ಅಂಗಡಿ ಮುಂದೆ ಪರ್ಸ್ (Purse) ತೆಗೆದಾಗ ಸರ ಇಲ್ಲದಿರುವುದು ಗೊತ್ತಾಗಿದೆ.
ಯಡೆಹಳ್ಳಿಯ ರಾಮಲಮ್ಮ ಎಂಬುವವರ ಎರಡು ಎಳೆಯ ಬಂಗಾರದ ಸರದಲ್ಲಿ ಒಂದು ಎಳೆ ತುಂಡಾಗಿತ್ತು. ರಿಪೇರಿಗೆಂದು ಸರವನ್ನು ಪರ್ಸ್ನಲ್ಲಿ ಇರಿಸಿಕೊಂಡು, ಅದನ್ನು ಬ್ಯಾಗಿನಲ್ಲಿಟ್ಟುಕೊಂಡು ಬಸ್ಸಿನಲ್ಲಿ ಹೊಳೆಹೊನ್ನೂರಿಗೆ ತೆರಳಿದ್ದರು.

ಹೊಳೆಹೊನ್ನೂರಿನಲ್ಲಿ ಬಂಗಾರದ ಅಂಗಡಿ ಮುಂಭಾಗ ಪರ್ಸ್ ತೆಗೆದಾಗ ಚಿನ್ನದ ಸರ ನಾಪತ್ತೆಯಾಗಿತ್ತು. ಮನೆಗೆ ಹಿಂತಿರುಗಿ ಹುಡುಕಿದರು ಚಿನ್ನದ ಸರ ಸಿಗಲಿಲ್ಲ. 1 ಲಕ್ಷ ರೂ. ಮೌಲ್ಯದ 33 ಗ್ರಾಂನ ಚಿನ್ನದ ಸರ ನಾಪತ್ತೆಯಾಗಿದೆ ಎಂದು ಆರೋಪಿಸಲಾಗಿದೆ. ಘಟನೆ ಸಂಬಂಧ ಹೊಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ » ಶಿವಮೊಗ್ಗದ ಹವಾಮಾನ ವರದಿ | 3 ಜೂನ್ 2025 | ಇವತ್ತು ಎಲ್ಲೆಲ್ಲಿ ಮಳೆ ಮುನ್ಸೂಚನೆ ಇದೆ?

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್ ನಂಬರ್: 7411700200
