ಶಿವಮೊಗ್ಗ: ರಾಜ್ಯದಲ್ಲಿ ಹಾಲು, ವಿದ್ಯುತ್ ದರ ಸಣ್ಣ ಮಟ್ಟಿಗೆ ಏರಿಕೆಯಾದಾಗ ಬಿಜೆಪಿ ನಾಯಕರು ಬೀದಿಗಿಳಿದು ರಂಪಾಟ ಮಾಡಿದ್ದರು. ಈಗ ಗೊಬ್ಬರ (Fertilizers) ದರ ಪ್ರತಿ ಚೀಲಕ್ಕೆ ₹180ರವರೆಗೆ ಏರಿಕೆಯಾಗಿದೆ. ಈಗ ಬಿಜೆಪಿ ನಾಯಕರ ಬಾಯಿ ಒಣಗಿ ಹೋಗಿದೆಯೆ ಎಂದು ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷ ಮತ್ತು ಶಾಸಕ ಬೇಳೂರು ಗೋಪಾಲಕೃಷ್ಣ ಪ್ರಶ್ನಿಸಿದರು.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬೇಳೂರು ಗೋಪಾಲಕೃಷ್ಣ, ಪ್ರತಿ ಮೂಟೆ ಗೊಬ್ಬರ ₹1800ರವರೆಗೆ ತಲುಪಿದೆ. ಸಣ್ಣ ರೈತರಿಗೆ ಇದರಿಂದ ಹೊರೆಯಾಗಿದೆ. ಭತ್ತ ಬೆಳೆಯೋದೆ ಕಷ್ಟವಾಗಿದೆ. ಗೊಬ್ಬರದ ದರ ಹೆಚ್ಚಳದಿಂದ ರೈತರಿಗೆ ಮತ್ತಷ್ಟು ಸಂಕಷ್ಟವಾಗಿದೆ ಎಂದರು.

ಇದನ್ನೂ ಓದಿ » ‘ಮಿನಿಸ್ಟರ್ ರಾಜೀನಾಮೆ ನೀಡಲಿ, ತನಿಖೆ ಎದುರಿಸಲಿʼ, ಬೇಳೂರು ಗೋಪಾಲಕೃಷ್ಣ ಸಲಹೆ, ಕಾಂಗ್ರೆಸ್ನಲ್ಲಿ ಸಂಚಲನ


