ಮೈದೊಳಲು ಕಾರ್ಣಿಕ, ‘ಶಿವನ ತುರುಬಿಗೆ ಪಂಜರದ ಗಿಳಿ ಹಾರಿತು ಎಚ್ಚರ’, ಏನಿದರ ಅರ್ಥ?

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಹೊಳೆಹೊನ್ನೂರು: ‘ಶಿವನ ತುರುಬಿಗೆ ಪಂಜರದ ಗಿಳಿ ಹಾರಿತು ಎಚ್ಚರ’. ಇದು ಈ ಬಾರಿಯ ಮೈದೊಳಲು ಗ್ರಾಮದ ಹನುಮಂತ ದೇವರ ಕಾರ್ಣಿಕ (Karnika) ಭವಿಷ್ಯ. ಸುದ್ದಿಯ ಮುಂದಿನ 5 ಪ್ಯಾರಾಗಳು ಕೆಳಗಿವೆ.

ಈ ಬಾರಿಯ ಕಾರ್ಣಿಕದಲ್ಲಿ ಶಿವನ ತುರುಬಿಗೆ ಪಂಜರದ ಗಿಳಿ ಹಾರಿತು ಎಚ್ಚರ ಎಂದು ಭವಿಷ್ಯ ನುಡಿಯಲಾಗಿದೆ. ಈ ಬಾರಿ ಮುಂಗಾರು ಮಳೆಗಿಂತಲು ಹಿಂಗಾರು ವ್ಯಾಪಕವಾಗಿರಬಹುದು. ರಾಜಕೀಯದಲ್ಲಿ ಅಧಿಕಾರಕ್ಕಾಗಿ ಕಿತ್ತಾಟ ನಡೆಯಲಿದೆ. ಕೊನೆಗೆ ಎಚ್ಚರಿಕೆ ಎಂದು ಹೇಳಿರುವುದರಿಂದ ಪಕೃತಿ ವಿಕೋಪಗಳು ಸಂಭವಿಸುವ ಸಾಧ್ಯತೆ ಇದೆ ಎಂದು ಗ್ರಾಮದ ಹಿರಿಯರು ಕಾರ್ಣಿಕವನ್ನು ವಿಶ್ಲೇಷಿಸಿದ್ದಾರೆ.

Mydolalu-Karnika-on-nagara-panchami

ಪ್ರತಿ ನಾಗರ ಪಂಚಮಿಯಂದು ಕಾರ್ಣಿಕ ನಡೆಯಲಿದೆ. ವ್ಯಕ್ತಿಯೊಬ್ಬರ ಮೈಮೇಲೆ ಹನುಮಂತ ದೇವರು ಆಹಾವನೆಯಾಗಿ ಪಿಳ್ಳೆಮಟ್ಟಿ ಗುಡ್ಡದಲ್ಲಿ ಕಾರ್ಣಿಕ ನುಡಿಯಲಿದೆ. ಕಂಬವೇರಿ ಜೋರಾಗಿ ಕಾರ್ಣಿಕ ಭವಿಷ್ಯ ನುಡಿಯಲಾಗುತ್ತದೆ. ಇದರ ಆಧಾರದಲ್ಲಿಯೇ ಇಲ್ಲಿನ ಸುತ್ತಮುತ್ತಲಿನ ಗ್ರಾಮದ ಜನರು ಕೃಷಿ ಚುಟುವಟಿಕೆ ನಡೆಸುವುದು ವಾಡಿಕೆ.

ಇದನ್ನೂ ಓದಿ » ಭದ್ರಾವತಿಯಲ್ಲಿ ನೀರು ನಾಯಿಗಳ ಹಿಂಡು ಪ್ರತ್ಯಕ್ಷ, ಚಿನ್ನಾಟಕ್ಕೆ ಜನ ಫಿದಾ

ಪಿಳ್ಳೆಮಟ್ಟಿಯ ಹನುಮಂತ ದೇವರು, ಪರಶುರಾಮ, ಲಕ್ಷ್ಮೀದೇವಿ, ಶ್ರೀರಾಮ ದೇವರುಗಳ ಉತ್ಸವ ಮೂರ್ತಿಗಳಿಗೆ ಕಾರ್ಣಿಕ ಸಂದರ್ಭ ಪೂಜೆ ಸಲ್ಲಿಸಲಾಯಿತು.

June-2025-Report-Shivamogga-Live-New-New.

Karnika Prediction at Mydolalu

Mydolalu-Karnika-on-nagara-panchami

Leave a Comment