ಮೈಸೂರು ತಾಳಗುಪ್ಪ ರೈಲು ನಿಲುಗಡೆ ಕುರಿತು ಮಹತ್ವದ ಅಪ್‌ಡೇಟ್‌, ಕುಂಸಿ, ಅರಸಾಳು ಭಾಗದವರಿಗೆ ಗುಡ್‌ ನ್ಯೂಸ್‌

ಶಿವಮೊಗ್ಗ: ಹೊಸನಗರ ತಾಲೂಕು ಅರಸಾಳು ಮತ್ತು ಶಿವಮೊಗ್ಗ ತಾಲೂಕು ಕುಂಸಿ ನಿಲ್ದಾಣಗಳಲ್ಲಿ (Railway Station) ಮೈಸೂರು-ತಾಳಗುಪ್ಪ ನಡುವೆ ಸಂಚರಿಸುವ ಎರಡು ಎಕ್ಸ್‌ಪ್ರೆಸ್‌ ರೈಲುಗಳ ತಾತ್ಕಾಲಿಕ ನಿಲುಗಡೆಯನ್ನು ರೈಲ್ವೆ ಇಲಾಖೆ ಮುಂದುವರಿಸಿದೆ.

ರಾತ್ರಿ ವೇಳೆ ಸಂಚರಿಸುವ ಮೈಸೂರು ತಾಳಗುಪ್ಪ(16227/16228) ಎಕ್ಸ್‌ಪ್ರೆಸ್ ರೈಲು ಮತ್ತು ಹಗಲಿನಲ್ಲಿ ಹಾಸನ ಮಾರ್ಗವಾಗಿ ಸಂಚರಿಸುವ ಮೈಸೂರು ತಾಳಗುಪ್ಪ (16206/16205) ರೈಲುಗಳು ಈ ಎರಡೂ ನಿಲ್ದಾಣಗಳಲ್ಲಿ ತಾತ್ಕಾಲಿಕವಾಗಿ ತಲಾ 1 ನಿಮಿಷ ನಿಲುಗಡೆ ಮಾಡಲಾಗುತ್ತಿತ್ತು. ಪ್ರಯಾಣಿಕರ ಅಪೇಕ್ಷೆ ಮೇರೆಗೆ ತಾತ್ಕಾಲಿಕ ನಿಲುಗಡೆಯನ್ನು 2026ನೇ ಫೆಬ್ರವರಿ 23ರ ವರೆಗೆ ಮುಂದುವರಿಸಲಾಗಿದೆ.

Train-Jan-Shatabdi-General-Image

ಇದನ್ನೂ ಓದಿ » ಕುವೆಂಪು ವಿಶ್ವವಿದ್ಯಾಲಯಕ್ಕೆ ದೇಶದಲ್ಲೇ 30ನೇ ರ‍್ಯಾಂಕ್‌, ಏನಿದು ರ‍್ಯಾಂಕಿಂಗ್‌? ವಿವಿ ಪಡೆದ ಅಂಕಗಳೆಷ್ಟು?

ರೈಲುಗಳು ಕಾಯಂ ಆಗಿ ನಿಲುಗಡೆ ಮಾಡಲು ಈ ನಿಲ್ದಾಣಗಳಲ್ಲಿ ಪ್ರಯಾಣಿಕರು ಹೆಚ್ಚು ಟಿಕೆಟ್ ಖರೀದಿಸಬೇಕು ಎಂದು ಸಂಸದ ಬಿ.ವೈ. ರಾಘವೇಂದ್ರ ಮನವಿ ಮಾಡಿದ್ದಾರೆ.

mysore talaguppa trains to stop at kumsi and arasalu Railway Station

ಚಿತ್ರದ ವಿವರಣೆ
Shaki Toyota, Shivamogga
ನಿತಿನ್ ಆರ್‌.ಕೈದೊಟ್ಲು
ನಿತಿನ್ ಆರ್‌.ಕೈದೊಟ್ಲು

Published : August 21, 2025 at 8:20 AM IST

JNN College of Engineering Admissions started

© ಶಿವಮೊಗ್ಗ ಲೈವ್‌ : ಆಗಷ್ಟ್ 21, 2025

Leave a Comment