ಶಿವಮೊಗ್ಗ: ಹೊಸನಗರ ತಾಲೂಕು ಅರಸಾಳು ಮತ್ತು ಶಿವಮೊಗ್ಗ ತಾಲೂಕು ಕುಂಸಿ ನಿಲ್ದಾಣಗಳಲ್ಲಿ (Railway Station) ಮೈಸೂರು-ತಾಳಗುಪ್ಪ ನಡುವೆ ಸಂಚರಿಸುವ ಎರಡು ಎಕ್ಸ್ಪ್ರೆಸ್ ರೈಲುಗಳ ತಾತ್ಕಾಲಿಕ ನಿಲುಗಡೆಯನ್ನು ರೈಲ್ವೆ ಇಲಾಖೆ ಮುಂದುವರಿಸಿದೆ.
ರಾತ್ರಿ ವೇಳೆ ಸಂಚರಿಸುವ ಮೈಸೂರು ತಾಳಗುಪ್ಪ(16227/16228) ಎಕ್ಸ್ಪ್ರೆಸ್ ರೈಲು ಮತ್ತು ಹಗಲಿನಲ್ಲಿ ಹಾಸನ ಮಾರ್ಗವಾಗಿ ಸಂಚರಿಸುವ ಮೈಸೂರು ತಾಳಗುಪ್ಪ (16206/16205) ರೈಲುಗಳು ಈ ಎರಡೂ ನಿಲ್ದಾಣಗಳಲ್ಲಿ ತಾತ್ಕಾಲಿಕವಾಗಿ ತಲಾ 1 ನಿಮಿಷ ನಿಲುಗಡೆ ಮಾಡಲಾಗುತ್ತಿತ್ತು. ಪ್ರಯಾಣಿಕರ ಅಪೇಕ್ಷೆ ಮೇರೆಗೆ ತಾತ್ಕಾಲಿಕ ನಿಲುಗಡೆಯನ್ನು 2026ನೇ ಫೆಬ್ರವರಿ 23ರ ವರೆಗೆ ಮುಂದುವರಿಸಲಾಗಿದೆ.

ಇದನ್ನೂ ಓದಿ » ಕುವೆಂಪು ವಿಶ್ವವಿದ್ಯಾಲಯಕ್ಕೆ ದೇಶದಲ್ಲೇ 30ನೇ ರ್ಯಾಂಕ್, ಏನಿದು ರ್ಯಾಂಕಿಂಗ್? ವಿವಿ ಪಡೆದ ಅಂಕಗಳೆಷ್ಟು?
ರೈಲುಗಳು ಕಾಯಂ ಆಗಿ ನಿಲುಗಡೆ ಮಾಡಲು ಈ ನಿಲ್ದಾಣಗಳಲ್ಲಿ ಪ್ರಯಾಣಿಕರು ಹೆಚ್ಚು ಟಿಕೆಟ್ ಖರೀದಿಸಬೇಕು ಎಂದು ಸಂಸದ ಬಿ.ವೈ. ರಾಘವೇಂದ್ರ ಮನವಿ ಮಾಡಿದ್ದಾರೆ.
mysore talaguppa trains to stop at kumsi and arasalu Railway Station


