ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ರೈಲ್ವೆ ಸುದ್ದಿ: ತಾಳಗುಪ್ಪ – ಮೈಸೂರು ರೈಲಿನ ವೇಳಾಪಟ್ಟಿ (Timetable) ಬದಲಾಗಿದೆ. ನವೆಂಬರ್ 2ರಿಂದ ಹೊಸ ಟೈಮ್ಟೇಬಲ್ನಂತೆ ರೈಲು ಸಂಚರಿಸಲಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದ್ದಾರೆ.
ತಾಳಗುಪ್ಪ – ಮೈಸೂರು ಕುವೆಂಪು ಎಕ್ಸ್ಪ್ರೆಸ್ (ರೈಲು ಸಂಖ್ಯೆ 16221) ಈಗ ಬೆಳಗ್ಗೆ 6.15ಕ್ಕೆ ತಾಳಗುಪ್ಪದಿಂದ ಹೊರಟು ಮಧಾಹ್ನ 3.35ಕ್ಕೆ ಮೈಸೂರು ತಲುಪುತ್ತಿದೆ. ನವೆಂಬರ್ 2ರಿಂದ ಈ ರೈಲು ಬೆಳಗ್ಗೆ 5.50ಕ್ಕೆ ತಾಳಗುಪ್ಪದಿಂದ ಹೊರಟು ಮಧ್ಯಾಹ್ನ 3.30ಕ್ಕೆ ಮೈಸೂರು ನಿಲ್ದಾಣ ತಲುಪಲಿದೆ.
ಹೊಸ ಮತ್ತು ಹಳೆಯ ಟೈಮಿಂಗ್ ಇಲ್ಲಿದೆ

ಕುವೆಂಪು ಎಕ್ಸ್ಪ್ರೆಸ್ ರೈಲು ಸಂಚರಿಸುವ ಮಾರ್ಗದ ಪ್ರಮುಖ ನಿಲ್ದಾಣಗಳ ಹೊಸ ಮತ್ತು ಹಳೆಯ ಟೈಮಿಂಗ್ ಇಲ್ಲಿದೆ. ಇದು ಹೊರಡುವ ಸಮಯ.
| ನಿಲ್ದಾಣ | ಈಗಿನ ಟೈಮಿಂಗ್ | ಹೊಸ ಟೈಮ್ಟೇಬಲ್ |
| ತಾಳಗುಪ್ಪ | ಬೆಳಗ್ಗೆ 6.15 | ಬೆಳಗ್ಗೆ 5.50 |
| ಸಾಗರ ಜಂಬಗಾರು | ಬೆಳಗ್ಗೆ 6.35 | ಬೆಳಗ್ಗೆ 6.10 |
| ಶಿವಮೊಗ್ಗ | ಬೆಳಗ್ಗೆ 8.20 | ಬೆಳಗ್ಗೆ 7.55 |
| ಭದ್ರಾವತಿ | ಬೆಳಗ್ಗೆ 8.45 | ಬೆಳಗ್ಗೆ 8.20 |
| ತರೀಕೆರೆ | ಬೆಳಗ್ಗೆ 9.15 | ಬೆಳಗ್ಗೆ 8.43 |
| ಬೀರೂರು | ಬೆಳಗ್ಗೆ 10.20 | ಬೆಳಗ್ಗೆ 9.35 |
| ಅರಸೀಕೆರೆ | ಬೆಳಗ್ಗೆ 11.20 | ಬೆಳಗ್ಗೆ 10.50 |
| ಹಾಸನ | ಮಧ್ಯಾಹ್ನ 12.30 | ಬೆಳಗ್ಗೆ 11.47 |
| ಹೊಳೆನರಸೀಪುರ | ಮಧ್ಯಾಹ್ನ 1.10 | ಮಧ್ಯಾಹ್ನ 12.27 |
| ಮೈಸೂರು | ಮಧ್ಯಾಹ್ನ 3.35 | ಮಧ್ಯಾಹ್ನ 3.30 |
ಸಂಸದ ರಾಘವೇಂದ್ರ ಮನವಿಗೆ ಸ್ಪಂದನೆ

ಕುವೆಂಪು ಎಕ್ಸ್ಪ್ರೆಸ್ ರೈಲು ತಾಳಗುಪ್ಪದಿಂದ ಸ್ವಲ್ಪ ಮುಂಚಿತವಾಗಿ ಹೊರಟರೆ ಬೆಂಗಳೂರು ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂದು ಸಂಸದ ರಾಘವೇಂದ್ರ ಅವರು ರೈಲ್ವೆ ಇಲಾಖೆ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ಅವರಿಗೆ ಜುಲೈ 24ರಂದು ಮನವಿ ಸಲ್ಲಿಸಿದ್ದರು.
ಇದನ್ನೂ ಓದಿ » ಶಿವಮೊಗ್ಗದ ರೈಲ್ವೆ ಪ್ರಯಾಣಿಕರೆ ಗಮನಿಸಿ, ಕೆಲವು ರೈಲು ರದ್ದಾಗಿವೆ, ಕೆಲವು ತಡವಾಗಿ ಚಲಿಸಲಿವೆ, ಇಲ್ಲಿದೆ ಲಿಸ್ಟ್
ಸಿದ್ದಗಂಗಾ ಎಕ್ಸ್ಪ್ರೆಸ್ ಮತ್ತು ಪುದುಚೇರಿ ಎಕ್ಸ್ಪ್ರೆಸ್ ರೈಲುಗಳು ಬೀರೂರಿಗೆ ಬೆಳಗ್ಗೆ 9.50ರ ಹೊತ್ತಿಗೆ ತಲುಪುತ್ತವೆ. ಇವುಗಳಿಗಿಂತಲು ಮುಂಚೆ ಕುವೆಂಪು ಎಕ್ಸ್ಪ್ರೆಸ್ ರೈಲು ಅಲ್ಲಿಗೆ ತಲುಪಿದರೆ ಬೆಂಗಳೂರಿಗೆ ತೆರಳುವ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಸದ್ಯ ಕುವೆಂಪು ಎಕ್ಸ್ಪ್ರೆಸ್ ರೈಲು ಬೆಳಗ್ಗೆ 10.20ಕ್ಕೆ ಬೀರೂರು ತಲುಪುತ್ತಿದೆ. ಈ ರೈಲು ಬೆಳಗ್ಗೆ 9.35 ಅಥವಾ ಬೆಳಗ್ಗೆ 9.40ಕ್ಕೆ ಬೀರೂರು ತಲುಪಿದರೆ ಅನುಕೂಲವಾಗಲಿದೆ ಎಂದು ಸಂಸದ ರಾಘವೇಂದ್ರ ಮನವಿ ಮಾಡಿಕೊಂಡಿದ್ದರು.
[su_button target=”blank” style=”flat” background=”#ffffff” color=”#ffffff” size=”14″ center=”yes” icon=”icon: quote-left” icon_color=”#c20009″][/su_button]
ಈ ಬದಲಾವಣೆ ಬೆಂಗಳೂರಿನ ಸಂಪರ್ಕವನ್ನು ಮತ್ತಷ್ಟು ಸುಗಮಗೊಳಿಸುತ್ತದೆ. ಸಾವಿರಾರು ಪ್ರಯಾಣಿಕರು, ವಿದ್ಯಾರ್ಥಿಗಳು, ಉದ್ಯೋಗಿಗಳಿಗೆ ಅನುಕೂಲವಾಗಲಿದೆ.
– ಬಿ.ವೈ.ರಾಘವೇಂದ್ರ, ಸಂಸದ
![]()
ಸಂಸದ ರಾಘವೇಂದ್ರ ಅವರ ಮನವಿಗೆ ಸ್ಪಂದಿಸದ ರೈಲ್ವೆ ಇಲಾಖೆ ಕುವೆಂಪು ಎಕ್ಸ್ಪ್ರೆಸ್ ರೈಲಿನ ಸಮಯ ಬದಲಿಸಿದೆ.
Talaguppa Mysore Kuvempu Express Timetable changed
–
[su_divider top=”no” style=”dotted” divider_color=”#ffffff” link_color=”#000000″ margin=”10″]
[su_button url=”https://www.facebook.com/liveshivamogga” target=”blank” style=”flat” background=” #316FF6″ color=”#ffffff” size=”4″ radius=”0″ icon=”icon: facebook-square”][/su_button] [su_button url=”https://x.com/liveshivamogga” target=”blank” style=”flat” background=”#000000″ color=”#ffffff” size=”4″ radius=”0″ icon=”icon: twitter”][/su_button] [su_button url=”https://www.instagram.com/shivamoggalive/” target=”blank” style=”flat” background=”#E1306C” color=”#ffffff” size=”4″ radius=”0″ icon=”icon: instagram”][/su_button] [su_button url=”https://www.youtube.com/@shivamoggalive” target=”blank” style=”flat” background=”#FF0000″ color=”#ffffff” size=”4″ radius=”0″ icon=”icon: youtube-square”][/su_button] [su_button url=”https://www.linkedin.com/in/shivamogga-live-666a05322/” target=”blank” style=”flat” background=”#0072b1″ color=”#ffffff” size=”4″ radius=”0″ icon=”icon: linkedin-square”][/su_button]
[su_divider top=”no” style=”dotted” divider_color=”#ffffff” link_color=”#000000″ margin=”10″]
LATEST NEWS
- ತಾಳಗುಪ್ಪ – ಮೈಸೂರು ಎಕ್ಸ್ಪ್ರೆಸ್ನಲ್ಲಿ ಲಕ್ಷ ಲಕ್ಷದ ಚಿನ್ನಾಭರಣ ಬಿಟ್ಟು ಇಳಿದ ಮಹಿಳೆ

- ಶಿವಮೊಗ್ಗದಲ್ಲಿ ಎಷ್ಟಿದೆ ಇವತ್ತಿನ ಅಡಿಕೆ ರೇಟ್? 16 ಮಾರ್ಚ್ 2026 – ಅಡಿಕೆ ಧಾರಣೆ

- ತೀರ್ಥಹಳ್ಳಿ ಮಹಿಳೆಯರಿಗೆ ಮೊದಲ ಮೂರು ಬಹುಮಾನ, ಹೇಗಿತ್ತು ಸ್ಪರ್ಧೆ? ವಿಜೇತರು ಯಾರು?

- ಶಿವಮೊಗ್ಗ ಕೆಎಸ್ಆರ್ಟಿಸಿ ನಿಲ್ದಾಣದಲ್ಲಿ ಅಪಘಾತ, ಯುವಕನಿಗೆ ಬಸ್ ಡಿಕ್ಕಿ, ಆಗಿದ್ದೇನು?

- ಶಿವಮೊಗ್ಗದ ಇಂಜಿನಿಯರ್ಗೆ ಸಂಕಷ್ಟ ತಂದ ಮರೆವು, ಫ್ಲೈ ಓವರ್ ಬಳಿ ಆಗಿದ್ದೇನು? ಕೇಸ್ ದಾಖಲು

[su_divider top=”no” style=”dotted” divider_color=”#ffffff” link_color=”#000000″ margin=”10″]
[su_divider top=”no” style=”dotted” divider_color=”#ffffff” link_color=”#000000″ margin=”10″]
About The Editor
ನಿತಿನ್ ಆರ್.ಕೈದೊಟ್ಲು














