ಶಿವಮೊಗ್ಗ: ಗಾಂಧಿ ಬಜಾರ್ನಲ್ಲು ಹಿಂದೂ ಮಹಾಸಭಾ ಗಣಪತಿಯ (Ganesh) ರಾಜಬೀದಿ ಉತ್ಸವ ಅದ್ಧೂರಿಯಾಗಿ ನಡೆಯಿತು. ದೊಡ್ಡ ಸಂಖ್ಯೆಯ ಜನರು ಈ ಬಾರಿ ಮೆರವಣಿಗೆಯಲ್ಲಿ ಪಾಲ್ಗೊಂಡು, ಗಣೇಶನ ದರ್ಶನ ಪಡೆದರು.
ಭಾರಿ ಸಂಖ್ಯೆಯ ಜನರು ಈ ಬಾರಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಈ ಬಾರಿ ಮಹಿಳೆಯರು, ಕುಟುಂಬದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದು ವಿಶೇಷ.
ಬಿಗಿ ಬಂದೋಬಸ್ತ್
ಗಾಂಧಿ ಬಜಾರ್ನಲ್ಲಿ ಈ ಬಾರಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಸುನ್ನಿ ಜಾಮಿಯ ಮಸೀದಿ ಮುಂಭಾಗ ಆರ್ಎಎಫ್, ಕೆಎಸ್ಆರ್ಪಿ ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು. ಇನ್ನು, ಶಾಸಕ ಎಸ್.ಎನ್.ಚನ್ನಬಸಪ್ಪ ಮಸೀದಿ ಮುಂಭಾಗ ನಿಂತು ಕಾರ್ಯಕರ್ತರನ್ನು ಮಾತನಾಡಿಸುತ್ತಿದ್ದರು.
ಶಿವಮೊಗ್ಗದ ಗಾಂಧಿ ಬಜಾರ್ನಲ್ಲಿ ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ.ಗಾಂಧಿ ಬಜಾರ್ ಮುಖ್ಯರಸ್ತೆಗೆ ಹೊಂದಿಕೊಂಡಿರುವ ರಸ್ತೆಗಳನ್ನು ಬಂದ್ ಮಾಡಲಾಗಿತ್ತು.ಗಾಂಧಿ ಬಜಾರ್ನ ಸುನ್ನಿ ಜಾಮಿಯಾ ಮಸೀದಿ ಮುಂಭಾಗ ಎಸ್ಪಿ ಮಿಥುನ್ ಕುಮಾರ್ ನೇತೃತ್ವದಲ್ಲಿ ಭದ್ರತೆ ಪರಿಶೀಲನೆ.ಗಾಂಧಿ ಬಜಾರ್ನಲ್ಲಿ ದೊಡ್ಡ ಸಂಖ್ಯೆ ಜನರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.ಗಾಂಧಿ ಬಜಾರ್ನಲ್ಲಿ ಭದ್ರತೆಗೆ ನಿಯೋಜನೆಗೊಂಡಿದ್ದ ಎಸ್ಎಎಫ್ ಪಡೆ.ಸುನ್ನಿ ಜಾಮಿಯಾ ಮಸೀದಿ ಮುಂಭಾಗ ಆರ್ಎಎಫ್ ನಿಯೋಜಿಸಲಾಗಿತ್ತು.ಕರ್ತವ್ಯ ನಿರತ ಆರ್ಎಎಫ್ ಪಡೆ ಸಿಬ್ಬಂದಿ.ಗಾಂಧಿ ಬಜಾರ್ನಲ್ಲಿ ಮಹಿಳೆಯರ ಘೋಷಣೆ, ನೃತ್ಯ.ಕೇಸರಿ ಶಾಲು ಹಿಡಿದು ಸಾಗಿದ ಯುವಕರು.ಧ್ವಜ ಬೀಸುತ್ತ, ಘೋಷಣೆ ಕೂಗುತ್ತ ಸಾಗಿದ ಮಕ್ಕಳು.ಜನರತ್ತ ಕೈ ಬೀಸಿದ ಶಾಸಕ ಚನ್ನಬಸಪ್ಪ, ಜೀಜಾಬಾಯಿ, ಶಿವಾಜಿ ವೇಷಧಾರಿ ಮಕ್ಕಳು. ಕೇಸರಿ ಶಾಲು ತಿರುಗಿಸುತ್ತ ಸಾಗಿದ ಯುವಕರು.ಶಾಸಕ ಎಸ್.ಎನ್.ಚನ್ನಬಸಪ್ಪ ಅವರನ್ನ ಹೆಗಲ ಮೇಲೆ ಹೊತ್ತು ಸಾಗಿದ ಯುವಕರು.ಹಿಂದೂ ಮಹಾಸಭಾಗ ಗಣಪತಿ ದರ್ಶನ ಪಡೆದ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಕೆ.ಈ.ಕಾಂತೇಶ್.ಗಾಂಧಿ ಬಜಾರ್ನಲ್ಲಿ ಐಜಿಪಿ ರವಿಕಾಂತೇಗೌಡ, ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್ ಕುಮಾರ್.ಯುವಕರ ಗುಂಪನ್ನು ನಿಯಂತ್ರಿಸಿದ ಎಸ್ಎಎಫ್ ಮತ್ತು ಮಫ್ತಿಯಲ್ಲಿದ್ದ ಪೊಲೀಸರು.