ದಸರಾ ಸುದ್ದಿ: ದಸರಾ ಜಂಬೂ ಸವಾರಿಗೆ ಬಂದಿರುವ ಆನೆಗಳು ಕೋಟೆ ರಸ್ತೆಯ ವಾಸವಿ ಶಾಲೆ ಅವರಣದಲ್ಲಿ ತಂಗಲು ವ್ಯವಸ್ಥೆ ಮಾಡಲಾಗಿದೆ. ಆನೆಗಳನ್ನು (Elephants) ಹತ್ತಿರದಿಂದ ನೋಡಲು ಇವತ್ತು ಬೆಳಗ್ಗೆಯಿಂದಲೆ ಜನರು ಶಾಲೆಯತ್ತ ಆಗಮಿಸುತ್ತಿದ್ದಾರೆ.
ಸಕ್ರೆಬೈಲು ಬಿಡಾರದ ಆನೆಗಳಾದ ಸಾಗರ್, ಬಾಲಣ್ಣ ಮತ್ತು ಬಹದ್ದೂರ್ ಆನೆಗಳು ಶಿವಮೊಗ್ಗಕ್ಕೆ ಆಗಮಿಸಿವೆ. ಇವತ್ತು ಬೆಳಗ್ಗೆ ದಸರಾ ಆನೆಗಳು ಮೊದಲ ಸುತ್ತಿನ ತಾಲೀಮು ನಡೆಸಿವೆ. ಇನ್ನೊಂದೆಡೆ ಆನೆಗಳು ಉಳಿದುಕೊಂಡಿರುವ ವಾಸವಿ ಶಾಲೆ ಆವರಣಕ್ಕೆ ಜನರು ಬೆಳಗ್ಗೆಯಿಂದಲೇ ತಂಡೋಪ ತಂಡವಾಗಿ ಬರುತ್ತಿದ್ದಾರೆ. ಮಕ್ಕಳನ್ನು ಕರೆತಂದು ಆನೆಗಳನ್ನ ತೋರಿಸಿ ಖುಷಿ ಪಡುತ್ತಿದ್ದಾರೆ.
ಈ ಮೊದಲು ಆನೆಗಳು ಉಳಿಯುವ ಜಾಗದ ಸುತ್ತಲು ಹಸಿರು ಪರದೆ ಹಾಕಲಾಗಿತ್ತು. ಆನೆಗಳು ಬರುತ್ತಿದ್ದಂತೆ ಈ ಪರದೆ ತೆಗೆದು ಜನರು ಆನೆಗಳನ್ನು ಕಣ್ತುಂಬಿಕೊಳ್ಳುವಂತೆ ವ್ಯವಸ್ಥೆ ಮಾಡಲಾಗಿದೆ.



ಇದನ್ನೂ ಓದಿ » ಎಟಿಎನ್ಸಿ ಕಾಲೇಜಿನಲ್ಲಿ ಎನ್ಎಸ್ಎಸ್ ದಿನಾಚರಣೆ, ಧ್ವಜಾರೋಹಣ

Elephants
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್ ನಂಬರ್: 7411700200
