ದಸರಾ ಸುದ್ದಿ: ಶಿವಮೊಗ್ಗ ದಸರಾದ ಪ್ರಮುಖ ಆಕರ್ಷಣೆಯಾದ ಜಂಬೂ ಸವಾರಿಗೆ (Jamboo Savari) ಕೊನೆಯ ಹಂತದ ಸಿದ್ಧತೆ ನಡೆಯುತ್ತಿದೆ. ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿರುವ ಆನೆಗಳಿಗೆ ಶೃಂಗಾರ ಮಾಡಲಾಗುತ್ತಿದೆ.
ಮಧ್ಯಾಹ್ನದಿಂದ ಜಂಬೂ ಸವಾರಿ
ಇವತ್ತು ಮಧ್ಯಾಹ್ನ 2.30ರಿಂದ ಜಂಬೂ ಸವಾರಿ ಆರಂಭವಾಗಲಿದೆ. ಶಿವಪ್ಪನಾಯಕ ಅರಮನೆ ಮುಂಭಾಗ ನಂದಿ ಧ್ವಜ ಪೂಜೆ ನಡೆಯಲಿದೆ. ಸಚಿವ ಮಧು ಬಂಗಾರಪ್ಪ, ಶಾಸಕ ಎಸ್.ಎನ್.ಚನ್ನಬಸಪ್ಪ ಸೇರಿ ಹಲವರು ಉಪಸ್ಥಿತರಿರಲಿದ್ದಾರೆ.
ಅರಮನೆ ಆವರಣಕ್ಕೆ ಅಂಬಾರಿ
ನವರಾತ್ರಿ ಸಂದರ್ಭ ಕೋಟೆ ಶ್ರೀ ಚಂಡಿಕಾದುರ್ಗಾ ಪರಮೇಶ್ವರಿ ದೇವಸ್ಥಾನದ ಆವರಣದಲ್ಲಿ ನಾಡದೇವಿ ಚಾಮುಂಡೇಶ್ವರಿಯ ಬೆಳ್ಳಿ ಮಂಟಪವನ್ನು ಪ್ರತಿಷ್ಠಾಪಿಸಿ ಪೂಜಿಸಲಾಗುತ್ತದೆ. ಇವತ್ತು 450 ಕೆ.ಜಿ. ಅಂಬಾರಿಯನ್ನು ದೇವಸ್ಥಾನದ ಆವರಣದಿಂದ ಶಿವಪ್ಪನಾಯಕ ಅರಮನೆ ಮುಂಭಾಗಕ್ಕೆ ತರಲಾಗುತ್ತದೆ. ಅಲ್ಲಿ ಆನೆಯ ಮೇಲೆ ಅಂಬಾರಿ ಇರಿಸಲಾಗುತ್ತದೆ.

ಅಂಬಾರಿ ಮೆರವಣಿಗೆ, ಆನೆಗಳಿಗೆ ಸಿಂಗಾರ
ಜಂಬೂ ಸವಾರಿ ಹಿನ್ನೆಲೆ ಸಕ್ರೆಬೈಲು ಬಿಡಾರದ ಮೂರು ಆನೆಗಳು ಈಗಾಗಲೇ ಶಿವಮೊಗ್ಗಕ್ಕೆ ಆಗಮಿಸಿ ತಾಲೀಮು ನಡೆಸುತ್ತಿದ್ದವು. ಇವತ್ತು ಅಂಬಾರಿ ಮೆರವಣಿಗೆಗೆ ಆನೆಗಳಿಗೆ ಸಿಂಗಾರ ಮಾಡಲಾಗುತ್ತಿದೆ. ಅಂಬಾರಿ ಹೊರಲಿರುವ ಸಾಗರ, ಜೊತೆಗೆ ಸಾಗಲಿರುವ ಬಹದ್ದೂರ್ ಮತ್ತು ಬಾಲಣ್ಣ ಆನೆಗಳನ್ನು ಕಲಾವಿದ ಜೀವನ್ ಸಿಂಗರಿಸುತ್ತಿದ್ದಾರೆ.


ಇದನ್ನೂ ಓದಿ » ಚಂದ್ರಗುತ್ತಿಯಲ್ಲಿ ಚಂಡಿಕಾ ಹೋಮ, ಸಾವಿರ ಸಾವಿರ ಭಕ್ತರಿಂದ ದೇವಿ ದರ್ಶನ
ಬನ್ನಿ ಮಂಟಪ ರೆಡಿ
ಇನ್ನೊಂದೆಡೆ ಇಂದು ಸಂಜೆ ಫ್ರೀಡಂ ಪಾರ್ಕ್ನಲ್ಲಿ ರಾವಣ ದಹನ, ಬನ್ನಿ ಮುಡಿಯುವ ಸಂಪ್ರದಾಯ ನಡೆಯಲಿದೆ. ಇದರ ಸಿದ್ಧತಾ ಕಾರ್ಯ ಈಗಾಗಲೇ ಪೂರ್ಣಗೊಂಡಿದೆ. ಬನ್ನಿ ಕಡಿಯುವ ವೇದಿಕೆ ಸಿದ್ಧವಾಗಿದೆ.

ಇದನ್ನೂ ಓದಿ » ಶಿವಮೊಗ್ಗದಲ್ಲಿ ದಸರಾ, ದೀಪಾವಳಿಗೆ ಶೇ.20ರಷ್ಟು ರಿಯಾಯಿತಿ, ಏನೆಲ್ಲ ವಸ್ತುಗಳಿಗೆ ಡಿಸ್ಕೌಂಟ್?
Jamboo Savari
