ಶಿವಮೊಗ್ಗದಲ್ಲಿ ರೋಜಾ ಶಬರೀಶ್‌ ಗುರೂಜಿ ಸೌಹಾರ್ದ ಸಹಕಾರಿ ಸೊಸೈಟಿ, ನಾಳೆ ಉದ್ಘಾಟನೆ? ಯಾರೆಲ್ಲ ಭಾಗವಹಿಸ್ತಾರೆ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ: ಶ್ರೀ ರೋಜಾ ಶಬರೀಶ್ ಗುರೂಜಿ ಸೌಹಾರ್ದ ಸಹಕಾರಿ ನಿಯಮಿತ ಸಂಸ್ಥೆಯ ಉದ್ಘಾಟನೆ (Inauguration) ಹಾಗೂ ಗುರು ಸ್ಮರಣೆ ಸಮಾರಂಭವನ್ನು ಅ.12ರಂದು ಬೆಳಿಗ್ಗೆ 10 ಗಂಟೆಗೆ ಸುವರ್ಣ ಸಂಸ್ಕೃತಿ ಭವನದಲ್ಲಿ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಉಪಾಧ್ಯಕ್ಷ ಎಸ್. ಸಂದೇಶ್ ತಿಳಿಸಿದರು.

ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂದೇಶ್‌, ಬೆಕ್ಕಿನ ಕಲ್ಮಠ ಡಾ. ಮಲ್ಲಿಕಾರ್ಜುನ ಮುರುಘ ರಾಜೇಂದ್ರ ಸ್ವಾಮೀಜಿ ಸಂಸ್ಥೆಯನ್ನು ಉದ್ಘಾಟಿಸುವರು. ಭದ್ರಗಿರಿಯ ಮುರುಗೇಶ್ ಸ್ವಾಮೀಜಿ, ಶಬರೀಶ್ ಷಣ್ಮುಗಂ ಸ್ವಾಮಿ, ಹುಬ್ಬಳ್ಳಿಯ ಗೋಕುಲ ಅಯ್ಯಪ್ಪಸ್ವಾಮಿ ದೇವಸ್ಥಾನದ ಮೋಹನ್ ಗುರುಸ್ವಾಮಿ, ಕಡೂರಿನ ಭದ್ರರಾಜ್ ಸ್ವಾಮಿ ಉಪಸ್ಥಿತರಿರಲಿದ್ದಾರೆ ಎಂದರು.

ನಮ್ಮ ಯುವಶಕ್ತಿ-ನಮ್ಮ ತಂತ್ರಜ್ಞಾನ : ಎ.ಐ. ವಿಚಾರ ಗೋಷ್ಠಿಯನ್ನುಸಂಸದ ಬಿ.ವೈ. ರಾಘವೇಂದ್ರ ಉದ್ಘಾಟಿಸಲಿದ್ದಾರೆ. ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ, ಶಾಸಕರಾದ ಎಸ್.ಎನ್. ಚನ್ನಬಸಪ್ಪ, ಡಿ.ಎಸ್. ಅರುಣ್‌, ಧನಂಜಯ ಸರ್ಜಿ, ಪ್ರಮುಖರಾದ ಎಂ. ಶ್ರೀಕಾಂತ್, ಕೆ.ಬಿ. ಪ್ರಸನ್ನಕುಮಾರ್, ಹೆಚ್.ಎಸ್. ಸುಂದರೇಶ್, ವಿಜಯಕುಮಾರ್ ಸೇರಿ ಹಲವರು ಇರಲಿದ್ದಾರೆ. ಎನ್‌. ರಮೇಶ್‌ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.

111025-Roja-Shabarish-co-operative-society-inauguration.webp

ನವರಸ ನಾಟ್ಯಾಲಯ ನಂದಗೋಪಾಲ್ ತಂಡದಿಂದ ಅರ್ಧ ನಾರೀಶ್ವರ ನೃತ್ಯ ಪ್ರದರ್ಶನ, ಆ‌ರ್. ಜೈವಂತಿ ಅವರಿಂದ ಭರತನಾಟ್ಯ, ಮಾಸ್ಟರ್ ಅದ್ವಿಕ್ ಅವರಿಂದ ಭಕ್ತಿಗೀತೆ ಗಾಯನ ಏರ್ಪಡಿಸಲಾಗಿದೆ.

  • ಕೆ.ವೆಂಕಟೇಶ್‌, ಅಧ್ಯಕ್ಷ

RED-LINE-

ಪತ್ರಿಕಾಗೋಷ್ಠಿಯಲ್ಲಿ ಪದಾಧಿಕಾರಿಗಳಾದ ವಿಶ್ವನಾಥ್ ಆರ್, ಸೆಂದಿಲ್ ಕುಮಾರ್, ಸುಮಾ ಗಾಜನೂರು, ಮಂಜುನಾಥ್ ಎಲ್, ವೆಳ್ಳಿ, ಯುವರಾಜ, ಜಯಶ್ರೀ, ಜಾಯ್ ಮತ್ತಿತರರಿದ್ದರು.

ಇದನ್ನೂ ಓದಿ » ಸಾಲ ಬಾಧೆ, ಸಾಗರದಲ್ಲಿ ವಿಷ ಸೇವಿಸಿದ್ದ ರೈತ, ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಯಲ್ಲಿ ಕೊನೆಯುಸಿರು

Inauguration

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment