ಶಿವಮೊಗ್ಗ: ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಕಳ್ಳರ ಹಾವಳಿ ಮುಂದುವರೆದಿದೆ. ಬಸ್ ಹತ್ತುವಾಗ ನರ್ಸ್ (Nurse) ಒಬ್ಬರ ಮಾಂಗಲ್ಯ ಸರ ಕಳವು ಮಾಡಲಾಗಿದೆ.
ನಡುರಾತ್ರಿ ಗೀತಾ ಎಂಬುವವರು ಶಿವಮೊಗ್ಗದಿಂದ ಮೈಸೂರು ಬಸ್ ಹತ್ತಿದ್ದಾರೆ. ಸೀಟಿನಲ್ಲಿ ಕುಳಿತು ಚಳಿ ಇದ್ದರಿಂದ ಶಾಲ್ ಹೊದ್ದುಕೊಂಡಿದ್ದಾರೆ. ಆಗ ಕೊರಳಲಿದ್ದ ಮಾಂಗಲ್ಯ ಸರ ನಾಪತ್ತೆ ಆಗಿರುವುದು ಗೊತ್ತಾಗಿದೆ. ಬಸ್ ಹತ್ತುವಾಗ ಜನ ಸಂದಣಿ ಇತ್ತು. ಆ ಸಂದರ್ಭ ಮಾಂಗಲ್ಯ ಸರ ಕಳ್ಳತನ ಮಾಡಿರುವ ಶಂಕೆ ಇದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.
ಕಳುವಾಗಿರುವುದು ₹2.24 ಲಕ್ಷದ 40 ಗ್ರಾಂ ತೂಕದ ಮಾಂಗಲ್ಯ ಸರ ಎಂದು ತಿಳಿಸಲಾಗಿದೆ. ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ » ಸಾಲ ಬಾಧೆ, ಸಾಗರದಲ್ಲಿ ವಿಷ ಸೇವಿಸಿದ್ದ ರೈತ, ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಕೊನೆಯುಸಿರು