ಶಿವಮೊಗ್ಗ ಲೈವ್.ಕಾಂ | ಹೊಸನನಗರ | 26 ಸೆಪ್ಟೆಂಬರ್ 2019
ನಕಲಿ ಹಕ್ಕುಪತ್ರ ನೀಡಿದ ಆರೋಪದ ಮೇಲೆ ಹೊಸನಗರ ತಾಲೂಕು ನಗರ ಹೋಬಳಿ ಕಂದಾಯ ನಿರೀಕ್ಷಕ (ಆರ್.ಐ) ವಿರುದ್ಧ ಮತ್ತೊಂದು ಪ್ರಕರಣ ದಾಖಲಾಗಿದೆ.
ಆರ್.ಐ ದತ್ತಾತ್ರೇಯ ವಿರುದ್ಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಕಲಿ ಹಕ್ಕುಪತ್ರ ನೀಡಿದ್ದಲ್ಲದೆ, ಅದನ್ನು ಅವರು ಹಿಂತಿರಿಗಿ ಕೇಳಿದಾಗ ವಾಪಸ್ ನೀಡಿದಿದ್ದ ಹಿನ್ನೆಲೆ ಅವಾಚ್ಯವಾಗಿ ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ನೂಲಿಗ್ಗೇರಿ ಶಶಿಕಲಾ ಎಂಬುವವರು ಜಾತಿ ನಿಂದನೆ, ವಂಚನೆ ಮತ್ತು ಬೆದರಿಕೆಯ ದೂರು ನೀಡಿದ್ದಾರೆ.
ಕೆಲ ದಿನದ ಹಿಂದೆ ಅದೆ ಗ್ರಾಮದ ಮುರುಗೇಶ್ ಎಂಬುವವರು ಆರ್.ಐ ದತ್ತಾತ್ರೇಯ ವಿರುದ್ಧ ನಕಲಿ ಹಕ್ಕುಪತ್ರ ನೀಡಿದ ಆರೋಪದ ಮೇಲೆ ದೂರು ನೀಡಿದ್ದರು.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | [email protected]