
ಶಿವಮೊಗ್ಗ: ಹೆಗಲತ್ತಿಯ ಶ್ರೀ ಕ್ಷೇತ್ರದಲ್ಲಿ ನಾಗಯಕ್ಷೆ ದೇವಿ, ನವಗ್ರಹ ಹಾಗೂ ನಾಗದೇವರ 12ನೇ ವಾರ್ಷಿಕೋತ್ಸವದ (Anniversary) ಪೂಜಾ ಕಾರ್ಯಕ್ರಮವು ಆರಂಭಗೊಂಡಿದೆ. ಮಾರ್ಚ್ 8ರವರೆಗೆ ವಿವಿಧ ಧಾರ್ಮಿಕ ವಿಧಿವಿಧಾನಗಳು ನಡೆಯಲಿವೆ ಎಂದು ದೇವಸ್ಥಾನ ಸೇವಾ ಸಮಿತಿಯ ಪ್ರಮುಖರಾದ ಗಜೇಂದ್ರನಾಥ್ ತಿಳಿಸಿದರು.
ಇದನ್ನೂ ಓದಿ – ಶಿವಮೊಗ್ಗದಲ್ಲಿ ಏರ್ಟೆಲ್ ಮೊಬೈಲ್ ಟವರ್ನ ಉಪಕರಣ ಕಳವು, ಆಗಿದ್ದೇನು?
ಶುಕ್ರವಾರ ಮಹಾಗಣಪತಿ ಪೂಜೆ, ನವಚಂಡಿಕಾ ಹವನ ಹಾಗೂ ಆಶ್ಲೇಷ ಬಲಿ ನಡೆಯಿತು. ಮಾ. 7ರಂದು ಪಲ್ಲಕ್ಕಿಯಲ್ಲಿ ದೇವರ ಆಗಮನ, ಮಹಾಮಂಗಳಾರತಿ ಮತ್ತು ಅನ್ನಸಂತರ್ಪಣೆ ನಡೆಯಲಿದೆ ಎಂದು ಹೇಳಿದರು.

ವಿವಿಧ ದೇವಸ್ಥಾನಗಳ 9 ಪಲ್ಲಕ್ಕಿಗಳು ಆಗಮಿಸಲಿದ್ದು, ಬಂಗಾರಮಕ್ಕಿ ದೇವಸ್ಥಾನದ ಶ್ರೀಗಳು ಸಾನಿಧ್ಯ ವಹಿಸಲಿದ್ದಾರೆ. ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಉಪಸ್ಥಿತರಿರುವರು ಎಂದರು.
ಅದೇ ದಿನ ರಾತ್ರಿ ನಾಗಮಂಡಲ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಮಾ. 8ರಂದು ಪಲ್ಲಕ್ಕಿ ದೇವರ ಆರಾಧನೆಯೊಂದಿಗೆ ಜಾತ್ರೆ ಸಮಾಪನಗೊಳ್ಳಲಿದೆ ಎಂದು ತಿಳಿಸಿದರು.







