ಶಿವಮೊಗ್ಗ: ಯುಗಾದಿ ಹಬ್ಬದ ಹಿನ್ನೆಲೆ ಶಿವಮೊಗ್ಗದಲ್ಲಿ ಇವತ್ತು ಚಂದ್ರ ದರ್ಶನವಾಯಿತು (Chandra Darshana). ಜನರು ಚಂದ್ರನನ್ನು ಕಣ್ತುಂಬಿಕೊಂಡು ಪೂಜೆ ಸಲ್ಲಿಸಿ, ಬೇವು ಬೆಲ್ಲ ಹಂಚಿದರು. ➤ ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.

ಗುರುವಾರ ಯುಗಾದಿ ಹಬ್ಬ ಇತ್ತು. ಸಂಜೆ ಚಂದ್ರ ದರ್ಶನ ಆಗದೆ ಹಿನ್ನೆಲೆ ಇಂದು ಸಂಜೆ ಜನರು ಆಗಸದತ್ತ ದೃಷ್ಟಿ ನೆಟ್ಟಿದ್ದರು. ಮನೆ ಟೆರೇಸ್, ಖಾಲಿ ಜಾಗಳು, ರಸ್ತೆಗಳಲ್ಲಿ ನಿಂತು ಚಂದ್ರ ದರ್ಶನಕ್ಕೆ ಪ್ರಯತ್ನಿಸಿದರು.

ಇದನ್ನೂ ಓದಿ – ಮೇ 1ರಿಂದ ಶಿವಮೊಗ್ಗ – ಬೆಂಗಳೂರು ಇಂಡಿಗೋ ವಿಮಾನ ರದ್ದು, ಕಾರಣವೇನು?
ಚಂದ್ರ ದರ್ಶನ ಆಗುತ್ತಿದ್ದಂತೆ ಜನರು ಪೂಜೆ ಸಲ್ಲಿಸಿದರು. ಆರತಿ ಬೆಳಗಿ ಕೈ ಮುಗಿದರು. ಬೇವು ಬೆಲ್ಲ ಹಂಚಿ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.



ಶಿವಮೊಗ್ಗ JNNCE ಕಾಲೇಜಿನಲ್ಲಿ ADMISSION ಶುರು

