ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಸೊರಬ: ಪುರಾಣ ಪ್ರಸಿದ್ಧ ಮಂಚಿಯ ಆಂಜನೇಯ ದೇವರ ಜಾತ್ರಾ ಮಹೋತ್ಸವದ ಅಂಗವಾಗಿ ಬಿಲ್ವಪತ್ರೆ ಮರವನ್ನು (Bilva Tree Ritual) ಬುಡ ಸಮೇತ ಹೊತ್ತು ತರುವ ಪವಾಡ ಸದೃಶ ಪ್ರಕ್ರಿಯೆ ಶನಿವಾರ ಸಂಜೆ ದೊಡ್ಡ ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ಶ್ರದ್ಧಾಭಕ್ತಿಯ ನಡುವೆ ಜರುಗಿತು.
ಪ್ರತಿ ವರ್ಷದಂತೆ ಈ ವರ್ಷ ಆರು ಮರಗಳಲ್ಲಿ 2 ಚಿಗುರು, 4 ಚಿಗುರಿಲ್ಲದ ಮರಗಳನ್ನು ಹೊತ್ತು ತಂದಿದ್ದರಿಂದ ಹದ ಮಳೆ ಆಗುತ್ತದೆ ಎಂಬ ವಿಶ್ಲೇಷಣೆ ಹಿರಿಯರಿಂದ ಕೇಳಿ ಬಂದಿತು.

ಗ್ರಾಮದ ದಾಸ ಮನೆತನದ ಗುತ್ಯಪ್ಪ ಪರಶುರಾಮಪ್ಪ ಸುಭಾಷ್ಚಂದ್ರ ಮೂರ್ತಿ, ಷಣ್ಮುಖ ಹಾಗೂ ವಾಸುದೇವ್ ಅವರು ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು. ಭೂತಾರಾಧನೆ, ಹಣ್ಣುಮಣೇವು ಹರಕೆ ಸಲ್ಲಿಕೆ ಮೊದಲಾದ ವಿಶೇಷ ಪೂಜೆ, ಹರಕೆ ವಿಧಿಗಳನ್ನು ಸಾವಿರಾರು ಭಕ್ತರು ನೆರವೇರಿಸಿ, ಹನುಮಂತ ದೇವರ ದರ್ಶನ ಪಡೆದರು. ಬೇರುಸಹಿತ ಮರವನ್ನು ಕಿತ್ತು ತರಲು ಗ್ರಾಮದ ದಾಸ ಮನೆತನದ ಆರು ಜನ ಬೆಳಗ್ಗೆ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಕೈಯಲ್ಲಿ ಕತ್ತಿ ಹಿಡಿದು ಪ್ರತ್ಯೇಕವಾಗಿ ವಿವಿಧ ದಿಕ್ಕುಗಳಿಗೆ ತೆರಳಿದರು.
ಇದನ್ನೂ ಓದಿ – ATNC, ಕಮಲಾ ನೆಹರು ಕಾಲೇಜು ವಿದ್ಯಾರ್ಥಿಗಳಿಂದ ವಿಭಿನ್ನ ಮನವಿ, ಏನಿದು?
ಸಂಜೆಯ ವೇಳೆಗೆ ಬೇರು ಸಹಿತ ಬಿಲ್ವಪತ್ರೆ ಮರ ಕಿತ್ತು ಹೊತ್ತುಕೊಂಡು ಒಂದೇ ದಿಕ್ಕಿನ ಮೂಲಕ ಸಾಲಗಿ ಬಂದರು. ಅವರು ಬರುವುದನ್ನು ನೋಡಲು ಗ್ರಾಮದ ಕೆರೆ ಅಂಗಳದಲ್ಲಿ ಜಮಾಯಿಸಿದ್ದ ಲಕ್ಷಾಂತರ ಭಕ್ತರು, ಹರ್ಷೋದ್ಗಾರದಿಂದ ಸ್ವಾಗತಿಸಿದರು. ಮರಗಳಿಗೆ ನಮಸ್ಕರಿಸುತ್ತಾ ಅರಳಿಕಟ್ಟೆವರೆಗೆ ಸಾಗಿ ಪೂಜೆ ಸಲ್ಲಿಸಿ ಭಕ್ತಿಯ ಪರಾಕಾಷ್ಠೆ ಮೆರೆದರು.
LATEST NEWS
- ಉಪನ್ಯಾಸಕ ಸುರೇಶ್ ನಿಗೂಢ ಸಾವು ಕೇಸ್, ಶಿವಮೊಗ್ಗ SP ಫಸ್ಟ್ ರಿಯಾಕ್ಷನ್, ಏನಂದ್ರು?

- ಶಿವಮೊಗ್ಗದ ಮೈಲಾರೇಶ್ವರ ದೇವಸ್ಥಾನದಲ್ಲಿ ನಾಗದರ್ಶನ, ದೊಡ್ಡ ಸಂಖ್ಯೆಯ ಭಕ್ತರು ಭಾಗಿ

- ಟಾಟಾ ಏಸ್, ಆಟೋ ಡಿಕ್ಕಿ, ಮಗು ಸೇರಿ ಹಲವರಿಗೆ ಗಾಯ

- ಮೀನು ಮಾರುಕಟ್ಟೆ ಬಳಿ ಕಿರಿಕ್, ಕಾರಿನ ಬೀಗದಿಂದ ವ್ಯಕ್ತಿಯ ಕಣ್ಣಿಗೆ ಹೊಡೆದು ಜೀವ ಬೆದರಿಕೆ, ಕಾರಣವೇನು?

- ಮಂಚಿಯ ಪುರಾಣ ಪ್ರಸಿದ್ಧ ಜಾತ್ರೆ, ಬುಡ ಸಹಿತ ಬಿಲ್ವಪತ್ರೆ ಮರ ಕಿತ್ತು ತಂದ ದಾಸರ ಕುಟುಂಬ

About The Editor
ನಿತಿನ್ ಆರ್.ಕೈದೊಟ್ಲು














