ಭದ್ರಾವತಿಯ ಪುರಾಣ ಪ್ರಸಿದ್ಧ ದೇವಸ್ಥಾನದಲ್ಲಿ ಬಿರುಕು, ಅಲ್ಲಲ್ಲಿ ಸೋರುತ್ತಿದೆ ಮಳೆ ನೀರು, ಭಕ್ತರಲ್ಲಿ ಆತಂಕ

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

ಶಿವಮೊಗ್ಗ ಲೈವ್.ಕಾಂ | BHADRAVATHI | 23 ಅಕ್ಟೋಬರ್ 2019

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

ಭಾರೀ ಮಳೆಗೆ ಭದ್ರಾವತಿಯ ಪುರಾಣ ಪ್ರಸಿದ್ಧ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನ ಸೋರುತ್ತಿದೆ. ಗುರ್ಭಗುಡಿ ಒಳಗೆ ನೀರು ತೊಟ್ಟಿಕ್ಕುತ್ತಿರುವುದು, ಭಕ್ತರನ್ನು ಆತಂಕಕ್ಕೀಡು ಮಾಡಿದೆ. ದೇವಸ್ಥಾನಕ್ಕೆ ಹಾನಿ ಆಗುವ ಭೀತಿ ಎದುರಾಗಿದೆ.

ದೇವಸ್ಥಾನದಲ್ಲಿರುವ ಶ್ರೀ ಲಕ್ಷ್ಮೀನರಸಿಂಹ, ಪುರುಷೋತ್ತಮ, ವೇಣುಗೋಪಾಲ ಸ್ವಾಮಿ ದೇವರ ಗರ್ಭಗುಡಿ, ಶುಕನಾಸಿನಿ, ನವರಂಗ, ಹುಂಡಿ ಡಬ್ಬದ ಮೇಲೆ ನೀರು ಸೋರುತ್ತಿದೆ. ಇನ್ನು, ವಿದ್ಯುತ್ ಸ್ವಿಚ್’ಗಳಿರುವ ಭಾಗದಲ್ಲಿಯು ನೀರು ಸೋರುತ್ತಿದೆ.

ಮಳೆಯ ಪರಿಣಾಮ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನದ ಗೋಡೆಯು ಕರಗುತ್ತಿದೆ. ಈವರೆಗು ಸಣ್ಣ ಪ್ರಮಾಣದಲ್ಲಿ ಕರಗುತ್ತಿದ್ದ ಗೋಡೆ, ಈ ಬಾರಿ ಜೋರು ಮಳೆಯಿಂದಾಗಿ ಹೆಚ್ಚು ವೇಗವಾಗಿ ಕರಗುತ್ತಿದೆ. ದೇವಸ್ಥಾನದ ಕೆಲವು ಕಡೆ ಗೋಡೆ ಬಿರುಕು ಬಿಟ್ಟಿದೆ. ಅಲ್ಲಲ್ಲಿ ಕಲು ಜರಗುತ್ತಿದೆ. ಇದು ಅರ್ಚಕರು ಮತ್ತು ಭಕ್ತರಲ್ಲಿ ಭೀತಿ ಸೃಷ್ಟಿಸಿದೆ.

ಪುರಾತತ್ವ ಇಲಾಖೆ ಅಧಿಕಾರಿಗಳ ಭೇಟಿ

ಮಳೆ ನೀರು ಸೋರುತ್ತಿರುವ ವಿಚಾರ ತಿಳಿಯುತ್ತಿದ್ದಂತೆ ಪುರಾತತ್ವ ಇಲಾಖೆ ಸಹಾಯಕ ನಿರ್ದೇಶಕ ಶೇಜೇಶ್ವರ್ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪುರಾತನ ದೇವಸ್ಥಾನದ ಶಿಥಿಲವಾಗುತ್ತಿದೆ. ಸದ್ಯದಲ್ಲೇ ಎಂಜಿನಿಯರ್’ಗಳನ್ನು ಕರೆಸಿ, ಪುನರುತ್ಥಾನ ಕಾರ್ಯ ನಡೆಸಲಾಗುತ್ತದೆ ಎಂದರು.

75339680 954542408240513 6259557282187575296 n.jpg? nc cat=103& nc oc=AQkO gj3XGb07EZV69eudYt372iLhyUCC6U4Tqwo0FXGhJYsIP7UV1jMORIt9C28lPA& nc ht=scontent.fblr1 3

ಈ ವೇಳೆ ದೇವಸ್ಥಾನದ ಪ್ರಧಾನ ಅರ್ಚಕರಾದ ರಂಗನಾಥಶರ್ಮ, ಸಹಾಯಕ ಅರ್ಚಕ ಶ್ರೀನಿವಾಸನ್ ಇದ್ದರು.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200

ಸುದ್ದಿಗಾಗಿ ಕರೆ ಮಾಡಿ – 9964634494

ಈ ಮೇಲ್ ಐಡಿ | shivamoggalive@gmail.com

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment