ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿವಮೊಗ್ಗ ಲೈವ್.ಕಾಂ | SHIMOGA | 31 ಅಕ್ಟೋಬರ್ 2019
ಮಲೆನಾಡು ಭಾಗದ ಸರ್ಕಾರಿ ಶಾಲೆ ಉಳಿವಿಗೆ ಯುವಕರ ವಿಭಿನ್ನ ಪ್ರಯತ್ನ. ಅಂಟಿಗೆ ಪಂಟಿಗೆ ಮೂಲಕ ಜನರಲ್ಲಿ ಜಾಗೃತಿ. ಮನೆ ಮನೆಗು ತೆರಳಿ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವಂತೆ ಮನವಿ.
ಮಲೆನಾಡಿಗರ ಪ್ರಮುಖ ಆಚರಣೆಗಳಲ್ಲಿ ಒಂದು ಅಂಟಿಗೆ ಪಂಟಿಗೆ. ದೀಪಾವಳಿ ಸಂದರ್ಭ ಮನೆ ಮನೆಗು ತೆರಳಿ ದೀಪ ಬೆಳಗಿಸಲಾಗುತ್ತದೆ. ಇದೆ ಅಂಟಿಗೆ ಪಂಟಿಗೆಯನ್ನು ಸರ್ಕಾರಿ ಶಾಲೆ ಉಳಿವಿನ ಜಾಗೃತಿ ಯಾತ್ರೆಯಾಗಿ ಪರಿವರ್ತಿಸಿಕೊಂಡಿದೆ ತೀರ್ಥಹಳ್ಳಿಯ ಯುವಕರ ತಂಡ.
ಎರಡು ವರ್ಷದಿಂದ ಇವರ ಪ್ರಯತ್ನಕ್ಕೆ ತೀರ್ಥಹಳ್ಳಿ ಭಾಗದಲ್ಲಿ ಉತ್ತಮ ಸ್ಪಂದನೆ ಸಿಕ್ಕಿದೆ. ಅಂಟಿಗೆ ಪಂಟಿಗೆ ತಂಡ ಮನೆ ಮೆನಗು ತೆರಳಿ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವಂತೆ ಜಾಗೃತಿ ಮೂಡಿಸುತ್ತಾರೆ. ಮನೆಯವರು ನೀಡುವ ಕಾಣಿಕೆ ಹಣವನ್ನು ಸರ್ಕಾರಿ ಶಾಲೆಯ ಅಭಿವೃದ್ಧಿಗೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಈ ಬಾರಿ ತೀರ್ಥಹಳ್ಳಿ ತಾಲೂಕಿನ ಹೊನ್ನೆತಾಳು ಸಮೀಪದ ಕೆಂದಾಳಬೈಲು ಗ್ರಾಮದಲ್ಲಿರುವ ಸರ್ಕಾರಿ ಶಾಲೆ ಉಳಿವಿಗಾಗಿ ಅಂಟಿಗೆ ಪಂಟಿಗೆ ನಡೆಸಲಾಯಿತು.
ತೀರ್ಥಹಳ್ಳಿಯ ಪುರಾಣ ಪ್ರಸಿದ್ಧ ಶ್ರೀ ರಾಮೇಶ್ವರ ದೇವಸ್ಥಾನದಲ್ಲಿ ಅರಂಭವಾದ ಅಂಟಿಗೆ ಪಂಟಿಗೆಗೆ ಶಾಸಕ ಆರಗ ಜ್ಞಾನೇಂದ್ರ ಚಾಲನೆ ನೀಡಿದರು. ಹೇಗಿದೆ ಅಂಟಿಗೆ ಪಂಟಿಗೆ ತಂಡ? ಯಾರೆಲ್ಲ ಇದ್ದಾರೆ? ಇದರ ಕಂಪ್ಲೀಟ್ ವಿಡಿಯೋ ಲಿಂಕ್ ಮೇಲಿದೆ.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | shivamoggalive@gmail.com
LATEST NEWS
- ಶಿವಮೊಗ್ಗ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿಯು ಹೆಚ್ಚಿದ ತಾಪಮಾನ? ಇವತ್ತು ಎಷ್ಟಿರುತ್ತೆ?

- ಭಟ್ಕಳದ ಮಹಿಳೆ ಸೇರಿ ನಾಲ್ವರು ನಗರ ಠಾಣೆ ಪೊಲೀಸರ ಬಲೆಗೆ, ಕಾರಣವೇನು? ಏನೇನೆಲ್ಲ ಸಿಕ್ತು?

- ಇಂದಿನ ಪಂಚಾಂಗ – ಯಾವ್ಯಾವ ಸಮಯ ಯಾವಾಗಿದೆ?

- ಶಿವಮೊಗ್ಗದ ದೇಗುಲಗಳಿಗೆ ಸಂಜೆ ಬಳಿಕ ಹೆಚ್ಚಿದ ಭಕ್ತರು, ವಿಶೇಷ ಪೂಜೆ

- ಬೆಟ್ಟೆ, ರಾಶಿ ರೇಟ್ ಇವತ್ತು ಎಷ್ಟಿದೆ? ಸರಕು ದರ ಮತ್ತೆ ಹೆಚ್ಚಾಯ್ತಾ? – 3 ಮಾರ್ಚ್ 2026

About The Editor
ನಿತಿನ್ ಆರ್.ಕೈದೊಟ್ಲು






