ಆನವಟ್ಟಿ: ಸೊರಬ ತಾಲೂಕಿನ ಹುಣಸವಳ್ಳಿ ಗ್ರಾಮದ ಹೆದ್ದಾರಿ ಕ್ರಾಸ್ನಲ್ಲಿ (Highway cross) ವೇಗವಾಗಿ ಬಂದ ಬಸ್, ಚಾಲಕನ ನಿಯಂತ್ರಣ ತಪ್ಪಿ ಬೈಕ್ಗೆ ಡಿಕ್ಕಿ ಹೊಡೆದಿದೆ (Bus hits bike / Road accident). ಅಪಘಾತದ ರಭಸಕ್ಕೆ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ (Died on the spot).
ತಲ್ಲೂರು ವಡ್ಡಿಗೆರೆ ಗ್ರಾಮದ ಹನುಮಂತಪ್ಪ (41) ಮೃತಪಟ್ಟವರು. ಕೃಷಿ (Agriculture) ಜೊತೆಗೆ ಹೈನುಗಾರಿಕೆ (Dairy farming) ಮಾಡುತ್ತಿದ್ದ ಇವರು, ಎಂದಿನಂತೆ ಎಣ್ಣೆಕೊಪ್ಪದ ಹಾಲಿನ ಡೈರಿಗೆ (Milk dairy) ಹಾಲು ಹಾಕಿ ವಾಪಸ್ ಬರುತ್ತಿರುವಾಗ ಈ ಘಟನೆ ನಡೆದಿದೆ. ಈ ಅಪಘಾತಕ್ಕೆ ಸಂಬಂಧಿಸಿದಂತೆ ಆನವಟ್ಟಿ ಪೊಲೀಸ್ ಠಾಣೆಯಲ್ಲಿ (Anavatti Police Station) ಪ್ರಕರಣ ದಾಖಲಾಗಿದೆ (FIR registered).

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್ ನಂಬರ್: 7411700200
