ಸಾಗರದಲ್ಲಿ ‍‍ಶ್ರೀಗಂಧ ಮರ ಕಳ್ಳತನ, ಎಲ್ಲಿ? ಹೇಗಾಯ್ತು ಘಟನೆ?

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

SAGARA: ತಾಲೂಕಿನ ಕರ್ಕಿಕೊಪ್ಪದ ಯಡಜಿಗಳೆಮನೆ ಗ್ರಾಮದ ಜಮೀನೊಂದರಲ್ಲಿದ್ದ ಶ್ರೀಗಂಧದ ಮರವನ್ನು ಕಳ್ಳರು ಕಡಿತಲೆ ಮಾಡಿ ಕದ್ದೊಯ್ದಿರುವ ಘಟನೆ ನಡೆದಿದೆ.

ಯಡಜಿಗಳೇಮನೆ ಗ್ರಾಮದ ರೈತ ರಾಮಚಂದ್ರ ವಿ. ಭಟ್ ಎಂಬುವವರ ಜಮೀನಿನಲ್ಲಿ ನೈಸರ್ಗಿಕವಾಗಿ ಬೆಳೆದಿದ್ದ ಶ್ರೀಗಂಧದ ಮರ ಕಳ್ಳತನವಾಗಿದೆ. ಮನೆಯ ಬಳಿಯೇ ಇದ್ದ ದೊಡ್ಡ ಶ್ರೀಗಂಧದ ಮರಕ್ಕೆ ಸುರಕ್ಷತೆಗಾಗಿ ಟೀ ಗಾರ್ಡ್ ಅಳವಡಿಸಲಾಗಿತ್ತು. ಮೇ 24ರ ಬೆಳಗಿನ ಜಾವ ಮನೆಯವರು ಗಾಢ ನಿದ್ರೆಯಲ್ಲಿದ್ದಾಗ ಕಳ್ಳರು, ಮರವನ್ನು ಕತ್ತರಿಸಿ ತಗೆದುಕೊಂಡು ಹೋಗಿದ್ದಾರೆ. ಸುದ್ದಿಯ ಮುಂದಿನ 1 ಪ್ಯಾರಾಗಳು ಕೆಳಗಿವೆ.

ಕಳುವಾದ ಮರದ ಮೌಲ್ಯ ₹30,000 ಎಂದು ಅಂದಾಜಿಸಲಾಗಿದೆ. ಘಟನೆ ಸಂಬಂಧ ಸಾಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

SAGARA-NEWS-GRAPHICS-BY-SHIVAMOGGA-LIVE