ಸಿಗಂದೂರು ದೇವಸ್ಥಾನದ ಭಕ್ತರ ಮೇಲೆ ಕ್ಯಾಂಟೀನ್‌ ಮಾಲೀಕರಿಂದ ಹಲ್ಲೆ ಆರೋಪ, ಕಾರಣವೇನು?

ಸಾಗರ: ಸಿಗಂದೂರು ಚೌಡೇಶ್ವರಿ ದೇವಸ್ಥಾನದ ಮುಂಭಾಗದ ಕ್ಯಾಂಟೀನ್‌ನಲ್ಲಿ ನೀರು ಚೆಲ್ಲಿದ ವಿಚಾರಕ್ಕೆ ಸಂಬಂಧಿಸಿದಂತೆ ಭಕ್ತರ ಮೇಲೆ ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿದ ಆರೋಪ ಕೇಳಿ ಬಂದಿದೆ.

ಸುದ್ದಿಯ ಮುಂದಿನ ಭಾಗ ಕೆಳಗಿದೆ

ತುಮಕೂರಿನಿಂದ ಸಿಗಂದೂರು ದೇವಸ್ಥಾನಕ್ಕೆ ಬಂದಿದ್ದ ತಿಮ್ಮಯ್ಯ (65) ಹಾಗೂ ಅವರ ಸಂಬಂಧಿಕರು ಜೂನ್ 9ರಂದು ಸಂಜೆ ದರ್ಶನ ಮುಗಿಸಿ ಊರಿಗೆ ಮರಳಲು ಬಸ್ ನಿಲ್ದಾಣಕ್ಕೆ ಬರುತ್ತಿದ್ದರು. ಈ ವೇಳೆ ದೇವಸ್ಥಾನದ ಮುಂಭಾಗದ ಸಾಲಿನಲ್ಲಿದ್ದ ಕ್ಯಾಂಟೀನ್‌ನಲ್ಲಿ ಬಜ್ಜಿ ತಿಂದು, ಕೈ ತೊಳೆದಿದ್ದಾರೆ.

Kargal-Police-Station-Sagara-Taluk

ಕೈ ತೊಳೆದ ನೀರು ಕ್ಯಾಂಟೀನ್ ಒಳಗೆ ಬಂದಿದೆ ಎಂದು ಆಕ್ಷೇಪಿಸಿದ ಹೋಟೆಲ್ ಮಾಲೀಕ, ಭಕ್ತರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿ, ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಲಾಗಿದೆ.   ಗಾಯಾಳುಗಳು ಸಾಗರ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಾರ್ಗಲ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Shivamogga Live Promotion

📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.